Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಜೈಲು ತಪ್ಪಿಸಿಕೊಳ್ಳಲು ಆಸ್ಪತ್ರೆಯಲ್ಲೇ ಠಿಕಾಣಿ ಹೂಡಿರುವ ಪೊಕ್ಸೋ ಆರೋಪಿ..?

ಜೈಲು ತಪ್ಪಿಸಿಕೊಳ್ಳಲು ಆಸ್ಪತ್ರೆಯಲ್ಲೇ ಠಿಕಾಣಿ ಹೂಡಿರುವ ಪೊಕ್ಸೋ ಆರೋಪಿ..?

ಅಪ್ರಾಪ್ತೆ ಅತ್ಯಾಚಾರಿ ಬಂಧನವಾಗಿ 10 ದಿನಗಳು ಕಳೆದರೂ ಇನ್ನೂ ಜೈಲು ಸೇರದ ಮಣ್ಣಿಕೇರಿ ಕಾಮುಕ..?

ಬೆಳಗಾವಿ : ಮಣ್ಣಿಕೇರಿ ಗ್ರಾಮದ ವಿವಾಹಿತ ಕಾಮುಕನೊಬ್ಬ ಅಪ್ರಾಪ್ತೆಯನ್ನು ಪುಸಲಾಯಿಸಿ ಬಲೆಗೆ ಹಾಕಿಕೊಂಡು ಮಹಾರಾಷ್ಟ್ರ ಹಾಗೂ ಬೇರೆಬೇರೆ ಕಡೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ನಡೆಸಿ ಗರ್ಭಿಣಿ ಮಾಡಿದ್ದಲ್ಲದೆ, ಅಕ್ಟೋಬರ್ 30 ರ ರಾತ್ರಿ ಅವರ ಮನೆಗೆ ನುಗ್ಗಿ ಮತ್ತೊಮ್ಮೆ ಅತ್ಯಾಚಾರಕ್ಕೆ ಯತ್ನಿಸಿ ಮನೆಯವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಘಟನೆ ನಡೆದಿತ್ತು.

ನಂತರ ಈತನನ್ನು ಬಂಧಿಸಿದ್ದ ಕಾಕತಿ ಪೊಲೀಸರು ಜೈಲಿಗೆ ಕಳಿಸುವ ಮುನ್ನ ಈತ ಮಾಡಿದ ನಾಟಕದಿಂದಾಗಿ 10 ದಿನಗಳು ಕಳೆದು ಆಸ್ಪತ್ರೆಯಿಂದ ಡಿಸ್ಚ್ಯಾರ್ಜ್ ಆಗಿ ನಾಲ್ಕು ದಿನಗಳಾದೂ ಈ ಕಾಮುಕ ಮಾತ್ರ ಜೈಲು ಸೇರುತ್ತೇನೆಂದು ಆಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದಾನೆ.

ಏನಿದು ಘಟನೆ ..?

ಮಣ್ಣಿಕೇರಿ ಗ್ರಾಮದ ವಿವಾಹಿತ ಮಹೇಶ ಬೆಳಗಾಂವಕರ ಎಂಬಾತನೇ ಅತ್ಯಾಚಾರಿ ಆರೋಪಿ.

ಐದಾರು ತಿಂಗಳ ಹಿಂದೆ ಸಂಬಂಧಿ ಮನೆಯವರ ಬಾಲಕಿಯನ್ನು ಪುಸಲಾಯಿಸಿ ಮಹಾರಾಷ್ಟ್ರ ಹಾಗೂ ಬೇರೆಬೇರೆ ಕಡೆ ಕರೆದೊಯ್ದು ನಿತಂತರವಾಗಿ ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿಯಾಗಿಸಿದ್ದನು. ನಂತರ ಇದರಿಂದ ಹೆದರಿದ ಬಾಲಕಿ ಆತನಿಗೆ ಹಾಗೂ ಮನೆಯಲ್ಲಿ ತಿಳಿಸಿದ್ದಾಳೆ. ಆಗ ಇತ ಮತ್ತೆ ಕಾಮಕ್ಕೆ ಸಹಕರಿಸು ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಬಾಲಕಿ ಒಪ್ಪಿರಲಿಲ್ಲ. ಇಷ್ಟಾದರೂ ಮತ್ತೊಮ್ಮೆ ಮಧ್ಯರಾತ್ರಿ ಅವಳ ಮನೆಗೆ ನುಗ್ಗಿ ಅವಳನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದ. ಈ ಸಮಯದಲ್ಲಿ ತಡೆತಲು ಬಂದ ಪೋಷಕರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದನು.

ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ಬಾಲಕಿ ಪೋಷಕರು ದೂರು ದಾಖಲಿಸಿದ್ದರು.

ತಕ್ಷಣ ಎಚ್ಚೆತ್ತಕೊಂಡ ಕಾಕತಿ ಪೊಲೀಸರು ಪಿಐ ಗುರುನಾಥ ಐ ಎಸ್ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಹುಲಕುಂದ, ಸಿಬ್ಬಂದಿ ವಿರುಪಾಕ್ಷೀ ಮಾನಗಾವಿ, ಪ್ರಕಾಶ ಬಲ್ಲಾಳ ಇತರರು ಪರಾರಿಯಾಗಿದ್ದ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಕೊಂಡು 2012 ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಮುಂದೆ ನ್ಯಾಯಾಂಗ ವಶಕ್ಕೆ ನೀಡಿ, ವೈದ್ಯಕೀಯ ಪರೀಕ್ಷೆ ನಡೆಸಿ ಜೈಲಿಗಟ್ಟಬೇಕು ಎನ್ನುವಷ್ಟರಲ್ಲಿ ಆರೋಪಿ ಪ್ರಜ್ಞೆ ತಪ್ಪಿ ಬಿದ್ದವರಂತೆ ನಾಟಕ ಮಾಡಿದ್ದಾನೆ. ತಕ್ಷಣ ಇತನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತನ ಆರೋಗ್ಯ ಸಹಜ ಸ್ಥಿತಿಯಲ್ಲಿದ್ದರೂ, ಇತ ಮಾತ್ರ ನನ್ನನ್ನು ಐಸಿಯುಗೆ ಹಾಕಿ ಎಂದು ಆಸ್ಪತ್ರೆಯವರಿಗೆ ಒತ್ತಾಯಿಸಿದ್ದಾನೆ. ನಂತರ ಮಾರನೆಯ ದಿನ ಇತನ ಆರೋಗ್ಯ ನೋಡಿ ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ. ಈತನ ಆರೋಗ್ಯ ಸ್ಥಿರವಾಗಿದ್ದರೂ ಜೈಲು ಸೇರುತ್ತೇನೆ ಎಂದು ತಿಳಿದು ಆಸ್ಪತ್ರೆ ಬಿಟ್ಟು ಬರುತ್ತಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಡಿಸ್ಚ್ಯಾರ್ಜ್ ಕೊಟ್ಟು ನಾಲ್ಕು ದಿನಗಳಾದರೂ ಆಸ್ಪತ್ರೆ ಬಿಟ್ಟು ಬರದ ಭೂಪ..?

ಆರೋಪಿ ಮಹೇಶ ಆಸ್ಪತ್ರೆ ಸೇರಿ 9 ದಿನಗಳು ಕಳೆದಿವೆ. 8 ದಿನಗಳ ಹಿಂದಷ್ಟೇ ವೈದ್ಯರು ಇತನ ಆರೋಗ್ಯ ನೋಡಿ ಎಲ್ಲವೂ ಸರಿಯಾಗಿದೆ ಎಂದು ಸಾಮಾನ್ಯ ವಾರ್ಡ್ ಗೆ ಶಿಪ್ಟ ಮಾಡಿ ನಾಲ್ಕು ದಿನಗಳ ಹಿಂದೆಯೇ ಈತನನ್ನು ಡಿಸ್ಚ್ಯಾರ್ಜ್ ಮಾಡಿದ್ದಾರೆ. ಆದರೆ ಈ ಕಾಮುಕ ಹಾಗೂ ಕುಟುಂಬದವರು ಸೇರಿಕೊಂಡು ನನಗೆ ಇನ್ನೂ ಹುಶಾರಾಗಿಲ್ಲ. ನಮ್ಮ ಹತ್ತಿರ ದುಡ್ಡಿಲ್ಲ ಎಂದು ನೇಪ ಹೇಳುತ್ತ ಕಾಲು ಕಳೆಯುತ್ತಿದ್ದಾರೆ. ಇದಕ್ಕೆ ಆಸ್ಪತ್ರೆಯವರು ಕೂಡ ಬೇಸತ್ತಿದ್ದಾರೆ. ಇದಲ್ಲದೇ ಇಂತಹ ಕಾಮುಕನ ಕಾವಲಿಗೆ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಸಮಯ ಮತ್ತು ಕರ್ತವ್ಯ ವ್ಯರ್ಥ ಮಾಡಲಾಗುತ್ತಿದೆ ಎಂದು ಅಲ್ಲಿನವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಮೀಷನರ್ ವ್ಯಾಪ್ತಿಯಲ್ಲಿ ಪೊಕ್ಸೋ ಆರೋಪಿಯೊರ್ವ ಈ ರೀತಿ ನಾಟಕ ಮಾಡುತ್ತಿದ್ದರು ಪೊಲೀಸರು ಮಾತ್ರ ಅದನ್ನು ಸುಮ್ಮನೆ ನೋಡುತ್ತ ಕುಳಿತಿದ್ದಾರೆ ಎಂದು ಈತನಿಂದ ಬಲಿ ಪಶುವಾಗಿರುವ ಬಾಲಕಿ ಕುಟುಂಬ ಶಪಿಸುತ್ತಿದ್ದಾರೆ.

ಇನ್ನಾದರೂ ಪೊಲೀಸರು ಆರೋಪಿ ನಾಟಕಕ್ಕೆ ತಿಲಾಂಜಲಿ ಇಟ್ಟು ಜೈಲಿಗಟ್ಟುತ್ತಾರೆ ಎಂದು ಕಾದು ನೋಡುಬೇಕು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ