ಬೆಳಗಾವಿ : ನಗರದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಾನೂನು ಉತ್ಸವದಲ್ಲಿ ಕ್ಲೈಂಟ್ ಸಂದರ್ಶನ ಮತ್ತು ಸಮಾಲೋಚನೆ ಸ್ಪರ್ಧೆಯಲ್ಲಿ ಟ್ರೋಫಿ ಮತ್ತು ರೂ. 7500 ನಗದು ಬಹುಮಾನವನ್ನು ಒಳಗೊಂಡಿರುವ ರನ್ನರ್-ಅಪ್ ಬಹುಮಾನ ಪಡೆದ ಆರ್.ಎಲ್.ಕಾನೂನು ಮಹಾವಿದ್ಯಾಲಯದ ತನ್ಮಯಿ ಸರಾಫ್ ಮತ್ತು ಅಕ್ಷತಾ ದೇಶಪಾಂಡೆ ಅವರನ್ನು ಕೆಎಲ್ಎಸ್ ಆಡಳಿತ ಮಂಡಳಿ ಸನ್ಮಾನಿಸಲಾಯಿತು. ಪ್ರಾಂಶುಪಾಲರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
