ಬೆಳಗಾವಿ: ಮಹತ್ವದ ಕಾರ್ಯಾಚರಣೆ ನಡೆಸಿದ ಬೆಳಗಾವಿ ಪೊಲೀಸರು ಐವರನ್ನು ಬಂಧಿಸಿ ಅವರ ಬಳಿ ಇದ್ದ 64,47,690 ರೂ. ಮೌಲ್ಯದ 415.98 ಗ್ರಾಂ. ಬಂಗಾರದ ಆಭರಣ ಹಾಗೂ ಸುಮಾರು 3,45,735 ಮೌಲ್ಯದ 1329. 75 ಗ್ರಾಂ ತೂಕದ ಬೆಳ್ಳಿ ಆಭರಣ ಸೇರಿ ಒಟ್ಟು 67,93,425 ರು.ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ವೈಭವ ನಗರದ ರಿಹಾನ್ ಮೈನುದ್ದೀನ್ ದಫೇದಾರ (18), ವೀರಭದ್ರ ನಗರ ಒಂದನೇ ಕ್ರಾಸ್ ನ ಮಲೀಕ ಖಲೀಲ್ ಹುಬ್ಬಳ್ಳಿ
(26), ರಾಯಬಾಗ ತಾಲೂಕು ಕುಡಚಿ ಗ್ರಾಮದ ಜುಗಾಯಿ ನಗರದ ಹಾಲಿ ಬೆಳಗಾವಿ ವೀರಭದ್ರನಗರ ಕೊಡ್ಲಾ ಹೊಟೇಲ್ ಹಿಂದಿನ ಅರ್ಮಾನ್ ಅಕ್ಷರ ಶೇಖ್ (18) ಇವರು ಕಳ್ಳತನ ಮಾಡಿದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದ ವೀರಭದ್ರನಗರ 1ನೇ ಕ್ರಾಸಿನ ಖಲೀಲ ಇಸ್ಮಾಯಿಲ್ ಹುಬ್ಬಳ್ಳಿ (57) ಮತ್ತು ವೀರಭದ್ರ ನಗರ ಕೊಡ್ಲಾ ಹೊಟೇಲ್ ಹಿಂದಿನ ಶಾನವಾಜ ಸಿರಾಜುದ್ದೀನ್ ಪಠಾಣ(23)ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪೋಲಿಸ್ ಅಧಿಕಾರಿಗಳಾದ ಬಿ. ಆರ್.ಗಡ್ಡೇಕರ, ಹೊನ್ನಪ್ಪ ತಳವಾರ, ಶ್ರೀಶೈಲ ಹುಳಗೇರಿ, ಉದಯ ಪಾಟೀಲ, ಪಿ.ಎಂ. ಮೋಹಿತೆ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.