Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಾರಿಹಾಳ ಪೊಲೀಸರಿಂದ ಕುರಿ ಕಳ್ಳರ ಬಂಧನ..!

ಮಾರಿಹಾಳ ಪೊಲೀಸರಿಂದ ಕುರಿ ಕಳ್ಳರ ಬಂಧನ..!

ಕಾಕತಿ, ಕ್ಯಾಂಪ್ ಹಾಗೂ ಮಹಾರಾಷ್ಟ್ರದಲ್ಲಿ ಬೈಕ್‌ ಕದ್ದವರಿಗೆ ಬಿತ್ತು ಕೊಳ..!

ಮಾರಿಹಾಳ PSI ತಂಡದಿಂದ ಮಿಂಚಿನ ಕಾರ್ಯಾಚರಣೆ..!

ಬೆಳಗಾವಿ : ಮಾರಿಹಾಳ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ದಿನಾಂಕ 06-11-2023 ರಂದು ಸಾಯಂಕಾಲ 4-00 ಗಂಟೆಯಿಂದ 7.00 ಗಂಟೆಯ ನಡುವಿನ ಅವಧಿಯಲ್ಲಿ ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಮನೆಯ ಮುಂದೆ ಕಟ್ಟಿದ್ದ ಸುಮಾರು 11.000/-ರೂ ಕಿಮ್ಮತ್ತಿನ ಒಂದು ಆಡು ಮತ್ತು ಒಂದು ಹೋತ ಇವುಗಳನ್ನು ಕಳ್ಳರು ಕಳ್ಳತನ ಮಾಡಿದ್ದ ಪ್ರಕರಣವನ್ನು ಮಾರಿಹಾಳ ಪೊಲೀಸ ಠಾಣೆ ಪಿಎಸ್ಐ ಮಂಜುನಾಥ ನಾಯಿಕ ಹಾಗೂ ತಂಡ ಆ ಖದಿಮ ಕಳ್ಳರನ್ನು ಬಂಧಿಸಿ ಕುರಿ, ಹೋತ ಅಷ್ಟೇ ಅಲ್ಲದೆ ಈ ಹಿಂದೆ ಕಳ್ಳತನಲ್ಲಿ ಕದ್ದ ಮಾಡಿದ್ದ ಲಕ್ಷಾಂತರ ರೂ ವಸ್ತುಗಳನ್ನು ವಶಪಡಿಸಿಕೊಂಡು ‍ಕಳ್ಳರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಲ್ಲದೇ ಆರೋಪಿತರು ಈ ಹಿಂದೆ ಮಹಾರಾಷ್ಟ್ರದ ಚಂದಗಡ, ಬೆಳಗಾವಿ ಕ್ಯಾಂಪ ಮತ್ತು ಕಾಕತಿ ಹಾಗೂ ವಿವಿಧ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಮೋಟರ ಸೈಕಲಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಸದರಿ ಆರೋಪಿಗಳಾದ..

1) ಸಾಹೀಲ ಮಹಮ್ಮದ ಬೆಟಗೇರಿ, ವಯಾ: 19 ವರ್ಷ ಸಾ: ಬ್ಲಾಕ ನಂ: 10 ಮನೆ ನಂ: 10 ಶ್ರೀನಗರ ಬೆಳಗಾವಿ.

2) ಗಣೇಶ ಶಿವಪ್ಪ ಕೊಳವಿ, ವಯಾ: 18 ವರ್ಷ, ಸಾ: ಮನೆ ನಂ: 116 ಸುಣಕುಂಪಿ ತಾ: ಬೈಲಹೊಂಗಲ ಜಿ: ಬೆಳಗಾವಿ, ಹಾಲ|| ಬಸವ ಕಾಲನಿ ಬಾಕೈಟ್ ರೋಡ ಇಂಡಾಲ ಬೆಳಗಾವಿ,

3) ಪ್ರಜ್ವಲ್ ನಾಗರಾಜ ಹಿರೇಮನಿ, ವಯಾ: 20 ವರ್ಷ, ಸಾ: ಲಕ್ಕಲಕಟ್ಟಿ ತಾ: ಗಜೇಂದ್ರಗಡ ಜಿ: ಗದಗ ಹಾಲಿ: 3ನೇ ರೇಲ್ವೇ ಗೇಟ ಹತ್ತಿರ ಬೆಳಗಾವಿ ಇವರಿಂದ ಕಳ್ಳತನ ಮಾಡಿದ ಸುಮಾರು 1.75.000/- ರೂ ಕಿಮ್ಮತ್ತಿನ 05 ಮೋಟರ ಸೈಕಲಗಳನ್ನು ಹಾಗೂ 9.500/-ರೂ ಹಣವನ್ನು ವಶಪಡಿಸಿಕೊಂಡು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.

DCP ಸ್ನೇಹಾ ಪಿ.ವಿ (ಅಪರಾಧ ಮತ್ತು ಸಂಚಾರ) ಮಾರ್ಗದರ್ಶನಲ್ಲಿ , ಎಸ್ ವಿ ಗಿರೀಶ, ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ ಬೆಳಗಾವಿ, ಗುರುರಾಜ ಕಲ್ಯಾಣಶೆಟ್ಟಿ, ಪೊಲೀಸ ಇನ್ಸಪೆಕ್ಟರ, ಪಿಎಸ್ಐ ಮಂಜುನಾಥ, ನಾಯಕ (ಕಾ&ಸು) ಇವರ ನೇತೃತ್ವದಲ್ಲಿ ಚಂದ್ರಶೇಖರ, ಸಿ, ಪಿಎಸ್‌ಐ-2 ಹಾಗೂ ಸಿಬ್ಬಂದಿ ಜನರಾದ ಸಿಎಚ್‌ಸಿ ಬನಂ 1048 ಚಿ. ಎನ್. ಬಳಗನ್ನವರ, ಸಿಎಚ್‌ ಬನಂ: 1091 ಬಿ. ಬಿ. ಕಡ್ಡಿ, ಸಿಪಿಸಿ ಬನಂ: 1409 ಎಚ್. ಎಲ್. ಯರಗುದ್ರಿ, ಸಿಪಿಸಿ ಬನಂ: 1472 ಎ. ಎಮ್. ಜಮಖಂಡಿ, ಇವರು ಕಾರ್ಯಚರಣೆಯಲ್ಲಿ ಭಾಗಿಯಾಗಿ ಪ್ರಕರಣವನ್ನು ಭೇದಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ ಆಯುಕ್ತ ಸಿದ್ಧರಾಮಪ್ಪ ಅವರು ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ