ಬೆಂಗಳೂರು : ಹಾವು ಕಡಿತಕ್ಕೆ ಔಷಧ ಲಭ್ಯವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಹರಡಲಾಗುತ್ತಿದೆ.
ನಿಮ್ಮಲ್ಲಿ ಹಾವು ಕಚ್ಚಿದರೆ 108ಕ್ಕೆ ಕರೆ ಮಾಡಿ ಅವರು ನಿಮ್ಮ ಮನೆಗೆ ಬಂದು ಈ ಇಂಜೆಕ್ಷನ್ ನೀಡುತ್ತಾರೆ. ಈ ಮಾಹಿತಿಗಳನ್ನು ಎಲ್ಲ ಗುಂಪುಗಳಿಗೆ ಹಂಚಿಕೊಳ್ಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿದೆ. ಈ ವರದಿ ತಪ್ಪು ಮಾಹಿತಿಯಾಗಿದೆ.
ವಿಷಕಾರಿ ಹಾವು ಕಡಿತದ ಚುಚ್ಚುಮದ್ದು ಲಸಿಕೆಯನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ನುರಿತ ವೈದ್ಯರ ಮೂಲಕ ನೀಡಲಾಗುತ್ತಿದೆ.
ಈ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುವುದರಿಂದ ಉಚಿತವಾಗಿ ಅತ್ಯಂತ ಎಚ್ಚರಿಕೆಯಿಂದ ನೇರ ನಿಗಾದ ಮೂಲಕ ನೀಡಲಾಗುತ್ತಿದೆ. ಈ ಲಸಿಕೆ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಈ ಲಸಿಕೆಯಿಂದ ಅಡ್ಡ ಪರಿಣಾಮ ಇರುತ್ತದೆ. ಅಲ್ಲದೇ 108 ತುರ್ತು ವಾಹನ ಕೇವಲ ಆಸ್ಪತ್ರೆಗೆ ತೆಗೆದುಕೊಂಡು ಬರುತ್ತದೆ. ಆದ್ದರಿಂದ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿರುವ ಇಂತಹ ತಪ್ಪ ಸಂದೇಶಗಳ ಬಗ್ಗೆ ಗಮನ ನೀಡಬಾರದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. .