ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಐಪಿಎಲ್ನ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಹಾಲಿ ಚಾಂಪಿಯಬ್ ಆಗಿರುವ ಬೆಂಗಳೂರು ಈ ಬಾರಿ ಚಾಂಪಿಯನ್ ಗೆ ತಕ್ಕ ಆಟವಾಡಿ ಸತತವಾಗಿ 92 ರನ್ ಗಳ ಬಹುದೊಡ್ಡ ಅಂತರದಲ್ಲಿ ಗೆದ್ದು ಫೈನಲ್ ತಲುಪಿದೆ.
ಬೆಂಗಳೂರು ತಂಡ 254 ರನ್ಗಳ ಬೃಹತ್ ಮೊತ್ತ ಕಲೆ ಹಾಕುವ ಮೂಲಕ ಗುಜರಾತ್ ಟೈಟನ್ಸ್ಗೆ 255 ರನ್ಗಳ ಗುರಿ ನೀಡಿತ್ತು.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆರ್ಸಿಬಿಗೆ ಉತ್ತಮ ಆರಂಭ ಸಿಕ್ಕಿತ್ತು. ಆರಂಭಿಕ ವೆಂಕಟೇಶ್ ಅಯ್ಯರ್ 19 ರನ್ಗೆ ಪೆವಿಲಿಯನ್ ಸೇರಿಕೊಂಡರು. ವಿರಾಟ್ ಕೊಹ್ಲಿ 43 ರನ್ ಸಿಡಿಸಿದರು. ನಂತರ ಅಬ್ಬರಿಸಿದ ನಾಯಕ ರಜತ್ ಪಾಟಿದಾರ್ 33 ಎಸೆತಗಳಲ್ಲಿ ಅಮೋಘ 9 ಸಿಕ್ಸರ್, 5 ಬೌಂಡರಿಗಳ ಸಹಿತೆ 93 ರನ್ ಸಿಡಿಸಿ ಅಜೇಯರಾಗಿಳಿದರು. ನಾಯಕನ ಆಟ ಆಡಿದ ಪಾಟಿದಾರ್ ಗುಜರಾತ್ ಬೌಲರ್ಗಳನ್ನು ಅಕ್ಷರಶಃ ಕಂಗೆಡಿಸಿದರು. ದೇವದತ್ತ ಪಡಿಕ್ಕಲ್ 30, ಕೃಣಾಲ್ ಪಾಂಡ್ಯ 43 ಮತ್ತು ಜಿತೇಶ್ ಶರ್ಮಾ 15 ರನ್ ಸಿಡಿಸುವ ಮೂಲಕ ಉಪಯುಕ್ತ ಕಾಣಿಕೆ ನೀಡಿದರು.
ಅಂತಿಮವಾಗಿ 20 ಓವರ್ ಅಂತ್ಯಕ್ಕೆ ಆರ್ಸಿಬಿ 5 ವಿಕೆಟ್ ಕಳೆದುಕೊಂಡು 254 ರನ್ ಕಲೆ ಹಾಕಿತು.
ಅಂಕಪಟ್ಟಿಯಲ್ಲಿ ತಲಾ 18 ಅಂಕಗಳೊಂದಿಗೆ ಮೊದಲೆರಡು ಸ್ಥಾನಗಳನ್ನು ಹೊಂದಿರುವ ಇತ್ತಂಡಗಳ ಪೈಕಿ ಗೆದ್ದ ತಂಡ ಫೈನಲ್ಗೆ ನೇರ ಲಗ್ಗೆ ಇಡುತ್ತದೆ. ಅದರಂತೆ ಬೆಂಗಳೂರು ಗೆದ್ದು ಫೈನಲ್ ತಲುಪಿದೆ. ಸೋತ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಸೆಣಸಿ ಫೈನಲ್ಗೇರುವ ಮತ್ತೊಂದು ಅವಕಾಶ ಪಡೆದಿದೆ.
