ಹುಕ್ಕೇರಿಯಲ್ಲಿ ರಮೇಶ್ ಕತ್ತಿ 59 ಮತ ಪಡೆದರೆ ಅವರ ಎದುರಾಳಿ ರಾಜೇಂದ್ರ ಪಾಟೀಲ್ ಕೇವಲ 30 ಮತ ಪಡೆದುಕೊಂಡಿದ್ದಾರೆ.
ಕಿತ್ತೂರಿನಲ್ಲಿ ನಾನಾ ಸಾಹೇಬ್ ಮತ್ತು ವಿಕ್ರಂ ಇನಾಮ್ದಾರ್ ಅವರು ತಲಾ 15 ಮತಗಳ ಮೂಲಕ ಸಮಬಲ ಸಾಧಿಸಿದ್ದಾರೆ. ಬೈಲಹೊಂಗಲದಲ್ಲಿ ವಿ ಐ ಪಾಟೀಲ್ ಅವರಿಗೆ 20ಮತಗಳು ಮತ್ತು ಮಹಾಂತೇಶ್ ದೊಡ್ಡ ಗೌಡರ್ ಅವರಿಗೆ 53 ಮತಗಳು ಲಭಿಸಿವೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಜಯಭೇರಿ
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಜಯಭೇರಿ ಬಾರಿಸಿದ್ದಾರೆ. ಅವರು 122 ಮತ ಪಡೆದು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತ್ತೆ ತಮ್ಮ ಹಿಡಿತ ಸಾಧಿಸಿದ್ದಾರೆ.