Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೌಶಲ್ಯ ಅಭಿವೃದ್ಧಿ ಯುವಕರ ಭವಿಷ್ಯದ ಕೀಲಿ 

ಬೆಳಗಾವಿ : ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಬ್ರಹ್ಮ ಕುಮಾರೀಸ್ ಅನಗೋಳ ಸೇವಾ ಕೇಂದ್ರದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಜಯೋಗಿನಿ ಬಿಕೆ ವಿದ್ಯಾ ಅಕ್ಕನವರು ಇವತ್ತಿನ ಜಗತ್ತಿನಲ್ಲಿ ಕೇವಲ ಡಿಗ್ರಿ ಸಾಕಾಗುವುದಿಲ್ಲ. ಉದ್ಯೋಗ ಸಿಗಬೇಕಾದರೆ ಉದ್ಯಮ ಮಾಡಬೇಕಾದರೆ ನಿಮ್ಮದೇ ಆದ ಗುರುತು ಮಾಡಿಕೊಳ್ಳಬೇಕಾದರೆ ಕೌಶಲ್ಯ ಬೇಕೇ ಬೇಕು. ಕೌಶಲ್ಯ ಅಭಿವೃದ್ಧಿ ಯುವಕರ ಭವಿಷ್ಯದ ಕೀಲಿ ಯಾಗಿದೆ ಕೌಶಲ್ಯ ಅಂದರೆ ಯಾವುದೇ ಕೆಲಸವನ್ನು ಚೆನ್ನಾಗಿ ಬೇಗ ಗುಣಮಟ್ಟದಿಂದ ಮಾಡುವ ಸಾಮರ್ಥ್ಯ ಕೌಶಲ್ಯ ಅಭಿವೃದ್ಧಿಯಿಂದ ಉದ್ಯೋಗ ಅವಕಾಶ ಮತ್ತು ನಾನು ಕೆಲಸ ಮಾಡಬಲ್ಲೆ ಎಂಬ ನಂಬಿಕೆ ಬರುವುದು. ಕೌಶಲ್ಯ ಅಭಿವೃದ್ಧಿಯಿಂದ ಸ್ವತಂತ್ರವಾಗಿ ಏನಾದರೂ ಉದ್ಯೋಗ ಪ್ರಾರಂಭಿಸಬಹುದು. ಬೇರೆಯವರಿಗೂ ಉದ್ಯೋಗ ಕೊಡುವವರಾಗಬಹುದು. ಶಿಕ್ಷಣವು ನಿಮಗೆ ಜೀವನ ನಡೆಸಲು ಸಹಾಯ ಮಾಡುತ್ತದೆ. ಆದರೆ ಕೌಶಲ್ಯವು ನಿಮಗೆ ಜೀವನವನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದರು. 

        
ಬಿಕೆ ಅಂಬಿಕಾ ಅಕ್ಕನವರು ಆಶೀರ್ವಚನ ನೀಡಿ ಯುವಕರು ದೇಶದ ಸಂಪತ್ತು ಯುವಕರಲ್ಲಿ ಶಾರೀರಿಕ ಬಲ ಮತ್ತು ಮಾನಸಿಕ ಬಲ ಅಪಾರ ಇರುತ್ತದೆ ಸದೃಢ ಭಾರತ ನಿರ್ಮಾಣ ಮಾಡಲು ಯುವ ಜನಾಂಗ ಹೊಸ ಹೊಸ ಕೌಶಲ್ಯಗಳನ್ನು ಕಲಿಯುವ ಅವಶ್ಯಕತೆ ಇದೆ ಕೃಷ್ಣನಿಗೆ ಬೆಣ್ಣೆಯನ್ನು ಕದೆಯುತ್ತಿದ್ದ ಎಂದು ಹೇಳುತ್ತಾರೆ. ವಾಸ್ತವಾಗಿ ಶ್ರೀ ಕೃಷ್ಣನು ಒಳ್ಳೆಯ ಗುಣಗಳೆಂಬ ಬೆಣ್ಣೆಯನ್ನು ಕದಿಯುತ್ತಿದ್ದ. ಆದ್ದರಿಂದ ಸರ್ವಗುಣ ಸಂಪಣ್ಣ 16 ಕಲೆಗಳಿಂದ ಸಂಪೂರ್ಣ ಮರ್ಯಾದ ಪುರುಷೋತ್ತಮ ಎಂದು ಗಾಯನ ಇದೆ. ಆದ್ದರಿಂದ ತಾವು ಸಹ ಶ್ರೀಕೃಷ್ಣನಂತೆ ಆಗಬೇಕು ಎಂದರು. 
     
 ಅನುರಾಧ ಅಕ್ಕನವರು ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಪಿ ಪಿ ಟಿ ಮುಖಾಂತರ ತಿಳಿಸಿಕೊಟ್ಟರು.
ಬಿಕೆ ಶೀತಲಕ್ಕನವರು ಸಂಸ್ಥೆಯ ಪರಿಚಯ ನೀಡಿದರು. ರೂಪ ಅಕ್ಕನವರು ಎಲ್ಲರಿಗೂ ರಾಜಯೋಗದ ಮೆಡಿಟೇಶನ್ ಅನುಭೂತಿ ಮಾಡಿಸಿದರು. ಬಿಕೆ ಮಹೇಶ್ ಅಣ್ಣನವರು ಸಾಫ್ಟ್ ಕಿಲ್ಸ್ ಮತ್ತು ಹಾರ್ಡ್ ಕಿಲ್ಸ್ ಬಗ್ಗೆ ತಿಳಿಸಿಕೊಟ್ಟರು. 
       
ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ದರ್ಶನ್ ಕುಲಕರ್ಣಿ, ಇಂಟೀರಿಯರ್ ಡಿಸೈನರ್ ಗೌತಮಿ ಕುಲಕರ್ಣಿ, ಮಿಥುನ್ ಕಪಿಲೇಶ್ವರಿ, ವಿಜಯ್ ಸೇರವಾಳ್ಕರ್, ಶಿವಲೀಲಾ, ಶೋಭಾ, ಪಾರ್ವತಿ,  ಮಹಾದೇವಿ, ಅಂಬರಶೇಟ್, ಮನೋಹರ್ , ದೀಪಕ್ , ಸತೀಶ್, ಅಜಿತ್, ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಡಳಿತದಲ್ಲಿ ಇನ್ಮುಂದೆ 'ಬಂಗಾಳಿ' ಕಡ್ಡಾಯ: ಪಶ್ಚಿಮ ಬಂಗಾಳ ಸಿಎಂ ಸುವೇಂದು ಘೋಷಣೆಕೌಶಲ್ಯ ಅಭಿವೃದ್ಧಿ ಯುವಕರ ಭವಿಷ್ಯದ ಕೀಲಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಾರ್ಯ ಸ್ತುತ್ಯಾರ್ಹ : ಪ್ರೊ. ಹೊಸಕೋಟಿಬಿಸಿಸಿಐ ಚುನಾವಣೆ : ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆಒಡೆಸಾ ಬಂದರಿನಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: ನಾಲ್ವರು ಭಾರತೀಯರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರಸಿಜೆಪಿ ನಾಯಕರ ಜೊತೆ ಸೌಹಾರ್ದಯುತ ಮಾತುಕತೆ ಬಳಿಕ ಧರಣಿ ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರದ ಮನವಿನ್ಯಾನೋ ಜಾಥಾ-2026' ಕಾರ್ಯಕ್ರಮಜಿಮ್ ಖಾನಾ ಕ್ಲಬ್‌ನಲ್ಲಿ ನಡೆದ ಫೈರಿಂಗ್ ಪ್ರಕರಣದ ಆರೋಪಿ ಬಂಧನಬರಪೀಡಿತ ಜಿಲ್ಲೆ ಎಂದು ಘೋಷಿಸಲು ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ