Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ಹೆಣದ ಮೇಲೆ ಹಣದ ವ್ಯವಹಾರ ನಡೆಸುತ್ತಿರುವ ಬಾಗೇವಾಡಿ ಪೊಲೀಸಪ್ಪ..?

ಹೆಣದ ಮೇಲೆ ಹಣದ ವ್ಯವಹಾರ ನಡೆಸುತ್ತಿರುವ ಬಾಗೇವಾಡಿ ಪೊಲೀಸಪ್ಪ..?

ಈ ತರಾತುರಿ "ಮರಿ"ಗೆ ಸುಂದರವಾಗಿ ಹೊಳೆಯುವರಿಂದ ಸದಾ ಸಾಥ್..?

ಕಮೀಷನರಗೆ ಕಂಡೀಷನ್ ಹಾಕತ್ತನಂತೆ ಈ ಹವಾಲ್ದಾರ್..?

ಬೆಳಗಾವಿ: ಕೊಲೆ, ದರೋಡೆ, ಅತ್ಯಾಚಾರ ಮತ್ತು ಸಾಮಾಜಿಕ ಸ್ವಾಸ್ಥ್ಯ ಹದಗೆಡುವಂತಹ ಪ್ರಕರಣಗಳಲ್ಲಿ ಪೊಲೀಸರು ಭಾಗಿಯಾಗಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಬೆಳಗಾವಿ ಪೊಲೀಸರು ಒಂದು ಹೆಜ್ಜೆ ಮೇಲೆ ಮುಂದೆ ಹೋಗಿ ಹೆಣದ ಮೇಲೆ ಹಣದ ವ್ಯವಹಾರ ನಡೆಸುತ್ತಿರುವ ಆರೋಪ ಕೇಳಿಬರುತ್ತಿದೆ.

ದೊಂಬಿ, ಗಲಾಟೆ ಹಾಗೂ ಅಪಘಾತ,  ಅಪರಾಧಿಕ ಕೃತ್ಯಗಳಂತಹ ಪ್ರಕರಣಗಳಲ್ಲಿ ಸಮರ್ಪಕ ತನಿಖೆ ನಡೆಸಿ ನೊಂದವರಿಗೆ ಅಥವಾ ಅವರ ಕುಟುಂಬಕ್ಕೆ ನ್ಯಾಯಕೊಡಿಸಬೇಕಿರುವುದು ಪೊಲೀಸರ ಕರ್ತವ್ಯ. ಆದರೆ ಇದೆಲ್ಲವನ್ನೂ ಬದಿಗೊತ್ತಿ ನೊಂದವರ ಕಣ್ಣೀರನಲ್ಲಿ ಹಣದ ದಾಹ ತೀರಿಸಿಕೊಳ್ಳಲು ಹಿರೇಬಾಗೇವಾಡಿ ಠಾಣೆಯ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಬಹುತೇಕ ಪೊಲೀಸರು ಈ ದಿನ ಯಾವುದೇ ಗಲಾಟೆ, ಅಪರಾಧ ಕೃತ್ಯ ಹಾಗೂ ಅಪಘಾತಗಳು ನಡೆಯದಿರಲಿ ಎಂದು ದೇವರಲ್ಲಿ ಕೈ ಮುಗಿದು ಬೇಡಿಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿರುವುದನ್ನು ಪ್ರತಿನಿತ್ಯ ಕೇಳುತ್ತೆವೆ. ಆದರೆ ಇದಕ್ಕೆ ತದ್ವಿರುದ್ಧವಾಗಿರುವ ಬಾಗೇವಾಡಿ ಪೊಲೀಸರು ಅಪಘಾತ ನಡೆದರೆ ನಮಗೆ ಇಂತಿಷ್ಟು ಪರ್ಸೆಂಟಿಸ್ ಸಿಗುತ್ತದೆ ಎಂದು ಮನದಲ್ಲೇ ಬೇಡಿಕೊಳ್ಳುತ್ತಿದ್ದಾರೆ ಎಂದು ಅಪಘಾತ ಪ್ರಕರಣಗಳಲ್ಲಿ ನೊಂದ ಕುಟುಂಬಗಳು ಹಿಡಿಶಾಪ ಹಾಕುತ್ತಿದ್ದಾರೆ.

'ತುರ'ಕೆಗಿಂತ ಹೆಚ್ಚು ಕೆರೆದುಕೊಳ್ಳುತ್ತಿರುವ 'ಮರಿ'!

ಬಾಗೇವಾಡಿ ಠಾಣೆಯಲ್ಲಿ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆಯೋರ್ವ ನನಗೆ ಸಂಬಂದ ಇಲ್ಲದಿದ್ದರೂ ಅಪಘಾತ ನಡೆದರೆ ಸಾಕು ಶ್ರೀ ಕೃಷ್ಣನಂತೆ ಪ್ರತ್ಯೇಕ್ಷನಾಗಿ ನಾವು ತಿಳಿಸಿದ ವಕೀಲರಿಗೆ ಕೇಸ್ ಕೊಡಬೇಕು. ಇಲ್ಲವಾದಲ್ಲಿ ವಿಮೆ ಪಾವತಿ ಆಗದಂತೆ ರಿಪೋರ್ಟ್ ಸಿದ್ದಪಡಿಸುವುದಾಗಿ ನೊಂದ ಕುಟುಂಬಸ್ಥರಿಗೆ ಬೇದರಿಕೆ ಹಾಕುವ ಕೆಲಸ ಮಾಡುತ್ತಿರುವ ದೂರುಗಳು ಕೇಳಿ‌ ಬರುತ್ತಿವೆ. ಈತನ ಮಾತಿಗೆ ಸಮ್ಮತಿಸದಿದ್ದಲ್ಲಿ ಮೇಲಾಧಿಕಾರಿಗಳು ನಾನು ಹೇಳಿದಂತೆ ಕೇಳುತ್ತಾರೆ ನೋಡಿ ಈಗಲೇ ಹೇಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಠಾಣೆ ವ್ಯಾಪ್ತಿಯಲ್ಲಿ ಒಂದಿಲ್ಲೊಂದು ಅಪಘಾತ ನಡೆಯುತ್ತಲೆ ಇರುತ್ತವೆ. ಅದರಲ್ಲೂ ಅಂತರರಾಜ್ಯ ನೊಂದಣಿ ವಾಹನಗಳು ಅಪಘಾತ ನಡೆದರೆ ಈ ಒಏದೆ ಬಾಡೂಟ ಸವಿದಂತೆ. ಬೇರೆ ರಾಜ್ಯದ ವಾಹನ ಮಾಲೀಕರಿಗೆ ಮತ್ತು ಚಾಲಕರಿಗೆ ಇಲ್ಲಿನ ವ್ಯವಸ್ಥೆಯ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಳ್ಳುವ ಈತ ಇನ್ನಿಲ್ಲದ ಬೆದರಿಕೆ ಹಾಕಿ ನನಗೆ ಬೇಕಿರುವವರೆಗೆ ಕೇಸ್ ಕೊಡಲು ಒಪ್ಪಿಸುವ ಕರಗತ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಹೆಣದ ಮೇಲೆ ವ್ಯವಹಾರ? :

ಅಪಘಾತದಲ್ಲಿ ಮೃತಪಟ್ಟವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ನ ಶವಾಗಾರಕ್ಕೆ ತರಲಾಗುತ್ತದೆ. ಈ 'ಮರಿ' ಅಲ್ಲಿಯೇ ವ್ಯವಹಾರ ಕುದುರಿಸುತ್ತಿರುವ ಆರೋಪವೂ ಇದೆ. ಈತನ ಪ್ರತಿ ಮಾತಿಗೂ ಠಾಣಾಧಿಕಾರಿ ಕೊಲೆ ಬಸವನಂತೆ  ತಲೆ ಅಲ್ಲಾಡುಸುತ್ತಿರುವುದು. ಇನ್ನೂಳಿದ ಸಿಬ್ಬಂದಿಗೆ ಮುಜುಗರವನ್ನುಂಟು ಮಾಡುತ್ತಿದೆ. ಈತ ಈ ಮೊದಲು ಇದೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಇಂತಹ ಕೃತ್ಯಗಳಲ್ಲಿ ಭಾಗವಹಿಸುತ್ತಿರುವದರಿಂದ ಬೇರೆ ಠಾಣೆಗೆ ಕಳುಹಿಸಿದ್ದರು. ಇದೀಗ ಮತ್ತೆ ಇದೇ ಠಾಣೆಗೆ  ವಕ್ಕರಿಸಿಕೊಂಡಿರುವ ಈತನ ಕಾಟಕ್ಕೆ ಬೇಸತ್ತಿರುವ ಸ್ಥಳೀಯರು ಗೃಹ ಇಲಾಖೆಗೆ, ಗೃಹ ‌ಸಚಿವರಿಗೆ ಹಾಗೂ ಡಿಜಿ ಮತ್ತು ಐಜಿಪಿ ಅವರಿಗೆ ದೂರು ಕೊಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ