Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ದೇವರ ಮತ್ತು ಭಕ್ತನ ನಡುವಿನ ನಾದ ಸೇತುವೆ ಕಂಸಾಳೆ: ಪ್ರೊ. ಎಸ್ ಸಿ ಪಾಟೀಲ

ಬೆಳಗಾವಿ : ಇದು ಭಕ್ತಿ, ಸೌಂದರ್ಯ ಪ್ರಧಾನವಾದ ಕಲೆ. ದೇವರ ಮತ್ತು ಭಕ್ತನ ನಡುವಿನ ನಾದ ಸೇತುವೆ ಕಂಸಾಳೆ ಎಂದು ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ ಅಭಿಪ್ರಾಯಪಟ್ಟರು.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವು ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ನಿಮಿತ್ತ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂಸಾಳೆ ಗಾಯನ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಂಸಾಳೆ ಗಾಯನವು ನಮ್ಮ ನೆಲದ ಸೊಬಗು. ಅದು ಜಾನಪದ ಸಂಪತ್ತು. ನಾಡಿನ ಪರಂಪರೆ, ಇತಿಹಾಸ , ಸಂಸ್ಕೃತಿಯ ಸತ್ವ ಎಲ್ಲವೂ ಜಾನಪದದಲ್ಲಿ ಹುದುಗಿದೆ. ಸಾವಿರಾರು ವರ್ಷಗಳಿಂದ ನಮ್ಮ ಜನಜೀವನವನ್ನು ರಸಪೂರ್ಣವೂ, ಜೀವಂತವೂ ಆಗಿ ಉಳಿಸಿಕೊಂಡು ಬಂದಿದೆ ಈ ಕಲೆ. ಈ ಕಲೆಯು ಶ್ರೋತೃಗಳನ್ನು ಭಕ್ತಿ ಪರಾಕಾಷ್ಠೆಗೆ ಒಯ್ಯುತ್ತದೆ. ಇಂತಹ ಅಮೋಘವಾದ ಕಲೆಯನ್ನು ಜಾಗತೀಕರಣೋತ್ತರ ಸಂದರ್ಭದಲ್ಲಿ ಅದನ್ನು ಆರಾಧಿಸಿ, ಆಸ್ವಾದಿಸಿ ಅದರ ಪರಂಪರೆಯನ್ನು ನಾವೆಲ್ಲ ಉಳಿಸಬೇಕು ಎಂದರು.

ನಾಡಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಒಂಬತ್ತು ಜನರ ತಂಡವು ವಿಶೇಷವಾದ ಪ್ರದರ್ಶನ ನೀಡಿತು. ಮಲೆಮಾದೇಶ್ವರ ಚಾರಿತ್ರಿಕ ಅಂಶಗಳನ್ನು ತಮ್ಮ ಹಾಡುಗಳಲ್ಲಿ ತಂದು ಹಾಡಿದ ಸಂದರ್ಭದಲ್ಲಿ ಪ್ರೇಕ್ಷಕರು ಮಂತ್ರ ಮುಗ್ಧರಾದರು. ಮಲೆಮಾದೇಶ್ವರ ಜೀವಂತಿಕೆಯನ್ನು ಅವರ ಹಾಡುಗಳಲ್ಲಿ ಇತ್ತು. ಸಂಗೀತ, ಸಾಹಿತ್ಯ, ನೃತ್ಯಗಳಿಂದ ನೆರೆದವರನ್ನು ರಂಜಿಸಿದರು.
ಉಪಪ್ರಾಚಾರ್ಯ ಅರ್ಜುನ ಜಂಬಗಿ ಸ್ವಾಗತಿಸಿದರು. ಉಪನ್ಯಾಸಕಿ ಲಾವಣ್ಯ ಗುಂಜಾಳ ನಿರೂಪಿಸಿ, ವಂದಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆವಿದ್ಯಾರ್ಥಿಗಳು  ಎನ್ ಸಿಸಿ   ಮಹತ್ವ ಮತ್ತು ಅದರ ಉಪಯೋಗ ಹಾಗೂ ಅನುಕೂಲಗಳ  ಮಾಹಿತಿ ಪಡೆಯಬೇಕು: ಪ್ರೊ . ಹನುಮಂತ ಬನ್ನೂರಇನ್ನಿಬ್ಬರಿಗೆ ಉಪ ಮುಖ್ಯಮಂತ್ರಿ ಹುದ್ದೆ ?ಈಜಲು ಬಾರದ ಕಾರಣ ಕೃಷಿ ಹೊಂಡದಲ್ಲಿ ಮುಳುಗಿ ಸಾವುನೀಟ್ ಪರೀಕ್ಷೆಯಲ್ಲಿ ಹೊಸಮನಿ ಸಹೋದರಿಯರ ಸಾಧನೆಹಾವು ಕಡಿತ ಔಷಧ: ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ