Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಭೂಕಂಪಗಳಿಂದ ಹಿಡಿದು ಯುದ್ಧದ ವರೆಗೆ : ನಿಜವಾದ ಬಾಬಾ ವಂಗಾರ 2025ರ ಭವಿಷ್ಯವಾಣಿಗಳು ; 2026 ಕ್ಕೆ ಮುನ್ಸೂಚನೆ ಏನು ಗೊತ್ತೆ..?

ಬೆಂಗಳೂರು
ಮರಣ ಹೊಂದಿ ದಶಕಗಳ ನಂತರವೂ, ಬಾಬಾ ವಂಗಾ ಅವರ ಜಾಗತಿಕ ಭವಿಷ್ಯವಾಣಿಗಳು ಈಗಲೂ ನಿಜವಾಗುತ್ತಿದೆ ಎಂದು ಅವರ ಅನುಯಾಯಿಗಳು ಹೇಳುತ್ತಾರೆ. ಅಭಿಮಾನಿಗಳಿಂದ “ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್” ಎಂದು ಕರೆಯಲ್ಪಡುವ ಅಂಧ ಬಲ್ಗೇರಿಯನ್ ಅತೀಂದ್ರಿಯ ಮಹಿಳೆ ಬಾಬಾ ವಂಗಾ ಅವರು ನಿಖರ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿದ್ದಾರೆ. 2025 ರಲ್ಲಿ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪವು 1,700 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ನಂತರ ಹಾಗೂ ಮೂರು ದಿನಗಳ ಹಿಂದೆ ಅಪಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪವು 1,400ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ನಂತರ ಅವರ ಭವಿಷ್ಯವಾಣಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಘಟನೆಯು ಬಾಬಾ ವಂಗಾ ಅವರ ವಿನಾಶಕಾರಿ ಭೂಕಂಪನದ ಬಗ್ಗೆ ಹೇಳಿದ್ದ ಮುನ್ಸೂಚನೆಗಳಿಗೆ ಸಂಬಂಧಿಸಿದೆ.
ಈ ವರ್ಷದ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಅಶುಭಸೂಚಕಗಳಲ್ಲಿ ಒಂದಾಗಿದ್ದು, ಜನಸಂಖ್ಯೆಯನ್ನು ಧ್ವಂಸಗೊಳಿಸುವ “ಭೂಕಂಪಗಳು”, “ಯುರೋಪ್‌ನಲ್ಲಿ ಪ್ರಮುಖ ಸಂಘರ್ಷ” ಮತ್ತು ಜಾಗತಿಕ ಆರ್ಥಿಕತೆಗಳನ್ನೇ ಅಲುಗಾಡಿಸುವ ಆರ್ಥಿಕ ಕುಸಿತದ ಬಗ್ಗೆ ಅವರು ಎಚ್ಚರಿಸಿದ್ದಾರೆ. ಅವರ 2025 ರ ಭವಿಷ್ಯವಾಣಿಗಳು ಅಸಾಧಾರಣ ಅಪಾಯದ ವರ್ಷದ ಬಗ್ಗೆ ಹೇಳಿದೆ. ನೈಸರ್ಗಿಕ ವಿಪತ್ತುಗಳು, ರಾಜಕೀಯ ಅಶಾಂತಿ ಮತ್ತು ಆರ್ಥಿಕ ದುರ್ಬಲತೆ ಬಗ್ಗೆ ಮಾತನಾಡಿದ್ದಾರೆ.

2025ರಲ್ಲಿ ಈವರೆಗೆ ಏನಾಗಿದೆ…?
ಬಾಬಾ ವಂಗಾ ಅವರ ದೂರದೃಷ್ಟಿಗೆ ಸಾಕ್ಷಿಯಾಗಿ, ಭೂಕಂಪನ ದುರಂತದ ಎಚ್ಚರಿಕೆಗಳೊಂದಿಗೆ ಹೊಂದಿಕೆಯಾಗುವ ಮಾರಕ ಮ್ಯಾನ್ಮಾರ್ ಭೂಕಂಪ ಹಾಗೂ ಅಫಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ಏತನ್ಮಧ್ಯೆ, ಉಕ್ರೇನ್‌ ಹಾಗೂ ರಷ್ಯಾ ಯುದ್ಧದಲ್ಲಿ ಸಿಲುಕಿಕೊಂಡಿದೆ, ಖಂಡಗಳಾದ್ಯಂತ ರಾಜಕೀಯ ಧ್ರುವೀಕರಣವು ತೀವ್ರವಾಗುತ್ತಿದೆ. ಆರ್ಥಿಕ ವಲಯದಲ್ಲಿ ಅಮೆರಿಕದ ಸುಂಕಗಳು, ವ್ಯಾಪಾರ ಯುದ್ಧಗಳು ಮತ್ತು ಹಣದುಬ್ಬರದ ಆಘಾತಗಳಿಂದ ಮಾರುಕಟ್ಟೆಗಳು ಪ್ರಕ್ಷುಬ್ಧತೆಯನ್ನು ಎದುರಿಸುತ್ತಿವೆ.
2026 ಕ್ಕೆ ಬಾಬಾ ವಂಗಾ ಏನು ಭವಿಷ್ಯ ನುಡಿದಿದ್ದಾರೆ?
2025 ಬಾಬಾ ವಂಗಾ ಅವರ ಭವಿಷ್ಯ ವಿಪತ್ತಿನಿಂದ ಗುರುತಿಸಲ್ಪಟ್ಟಿದ್ದರೆ, 2026 ಕ್ಕೆ ಅವರ ಭವಿಷ್ಯವಾಣಿಯು ಯುರೋಪಿನಲ್ಲಿ ಪ್ರಾರಂಭವಾಗಿ ಅದು ಜಾಗತಿಕ ಯುದ್ಧದ ಸ್ಫೋಟವನ್ನು ಅವರು ಊಹಿಸಿದ್ದಾರೆ ಎಂದು ಹೇಳಲಾಗುತ್ತದೆ, ಇದು ಮಾನವಕುಲದ ಅವನತಿಯ ಆರಂಭವನ್ನು ಸೂಚಿಸುವಷ್ಟು ವಿನಾಶಕಾರಿ ಸಂಘರ್ಷವಾಗಬಹುದು ಎಂದು ಅವರು ಮುನ್ಸೂಚಿಸಿದ್ದಾರೆ. ಅನುಯಾಯಿಗಳು ಇದನ್ನು 2025 ರ ಪ್ರಾದೇಶಿಕ ಘರ್ಷಣೆಗಳಿಗಿಂತ ಹೆಚ್ಚಿನ ವಿಪತ್ತು ಎಂದು ವ್ಯಾಖ್ಯಾನಿಸುತ್ತಾರೆ. ಅವರು ಆರ್ಥಿಕತೆಯನ್ನು ದುರ್ಬಲಗೊಳಿಸುವ ಮತ್ತು ವಿಶ್ವದ ಅಡಿಪಾಯವನ್ನೇ ಅಲುಗಾಡಿಸುವ ಸಾಮರ್ಥ್ಯವಿರುವ ಯುದ್ಧವಾಗಿರಬಹುದು ಎಂದು ಊಹಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ