Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಿಂಡಲಗಾ ಜೈಲಿನಲ್ಲಿ ಮುತ್ಯಾನಟ್ಟಿ ಖೈದಿ ಮೇಲೆ ಮಾರಣಾಂತಿಕ ಹಲ್ಲೆ..?

Advertisement
ಹಿಂಡಲಗಾ ಜೈಲಿನಲ್ಲಿ ಮುತ್ಯಾನಟ್ಟಿ ಖೈದಿ ಮೇಲೆ ಮಾರಣಾಂತಿಕ ಹಲ್ಲೆ..?

ಅಂಧೇರಿ ವಾರ್ಡನಲ್ಲಿ ಅಪರಾಧಿ ತಲೆ ಹೊಡೆದ ಮಂಗಳೂರಿನ ಆರೋಪಿ..?

ಎರಡು ತಿಂಗಳ ಹಿಂದಷ್ಟೇ ಹವಾಲ್ದಾರ ಮೇಲೆ ಹಲ್ಲೆ ಮಾಡಿ ಬಂದಿರುವ ಫಯಾನ್..!

ಬೆಳಗಾವಿ: ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆ ಅನುಭವಿಸುತ್ತಿರುವ ಮುತ್ಯಾನಟ್ಟಿ ಗ್ರಾಮದ ಸುರೇಶ್ ಬೆಳಗಾವಿ ಈತನನ್ನು ಮಂಗಳೂರು ಮೂಲದ ಮುಸ್ಲಿಂ ಆರೋಪಿ ಫಯಾನ್ ಎಂಬಾತ ಕ್ಷುಲ್ಲಕ ಕಾರಣಕ್ಕೆ ತಲೆಗೆ ಕಲ್ಲಿನಿಂದ ಜಜ್ಜಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವ ಘಟನೆ ಇಂದು ಮಧ್ಯಾಹ್ನ ಹಿಂಡಲಗಾ ಜೈಲಿನ ಅಂಧೇರಿ ವಾರ್ಡದಲ್ಲಿ ನಡೆದಿದೆ.

ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆ ಅನುಭವಿಸುತ್ತಿರುವ ಸುರೇಶ್ ಬೆಳಗಾವಿ (32) ಈತ ಜೈಲಿನ ಸಿಬ್ಬಂದಿಗಳೊಂದಿಗೆ ವಾಚ್ಮನ್ ಕೆಲಸ ಮಾಡುತ್ತಿದ್ದು, ಈ ಸಮಯದ ವೇಳೆ ಪಯಾನ್ ಎಂಬಾತನಿಗೆ ಸರಿಯಾಗಿ ಇರುವಂತೆ ಹೇಳಿದಾಗ ಆತ ಈತನ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.

ಮಂಗಳೂರಿನ ಮುಸ್ಲಿಂ ಯುವಕ ಪಯಾನ್ ಸೆಕ್ಷನ್ ಐಪಿಸಿ 38೦ ಅಡಿಯಲ್ಲಿ ಬಂಧೀತನಾಗಿ ಕಾರವಾರ ಜೈಲು ಸೇರಿದ್ದ ಎರಡು ತಿಂಗಳ ಹಿಂದಷ್ಟೇ ಕಾರ್ವಾರ ಜೈಲಿನ ಸಿಬ್ಬಂದಿ ಹವಾಲ್ದಾರ್ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಆತನನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಈಗ ಮತ್ತೆ ಎರಡು ತಿಂಗಳೊಳಗೆ ಆತ ಇಲ್ಲಿ ಮತ್ತೊಂದು ಅಪರಾಧ ಕೃತ್ಯ ಎಸಗಿದ್ದಾನೆ.

ಹಿಂಡಲಗಾ ಜೈಲಿನಲ್ಲಿ ಎಲ್ಲವೂ ಹಣದ ಮೇಲೆ ನಡೆಯುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಜೈಲಿನಲ್ಲಿಯೂ ಅಪರಾಧಿಗಳಿಗೆ ರಾಜಾತಿಥ್ಯ ಸಿಗುತ್ತಿದ್ದು ಹಣಕೊಡದವರಿಗೆ ಸುರಕ್ಷತೆ ಇಲ್ಲದಂತಾಗಿದೆ.

ಕ್ರಮ ಕೈಗೊಳ್ಳುತ್ತಾರೆ ಕಡಕ್ ಅಧಿಕಾರಿ..?

ಸದಾ ಕೆಟ್ಟ ಕೆಲಸಗಳಿಂದ ಸುದ್ದಿಯಲ್ಲಿರುವ ಹಿಂಡಲಗಾ ಜೈಲಿನಲ್ಲಿ ಇಂತಹ ಘಟನೆಗಳು ತಿಂಗಳಿನಲ್ಲಿ ಒಂದೆರಡು ನಡೆದೆ ನಡೆಯುತ್ತವೆ. ಇವುಗಳನ್ನು ಮಟ್ಟ ಹಾಕಲು ಹಿರಿಯ ಅಧಿಕಾರಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ್ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ  ಗುಡುಗುಡಿಕೆಶಿ ಸಂಪುಟದಲ್ಲಿ ಖಾತೆ ಅಸಮಾಧಾನ ತೀವ್ರ : ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಮುನಿಯಪ್ಪ ಬಹಿರಂಗ ಅಸಮಾಧಾನ !ಉದಯಕುಮಾರಗೆ ಪ್ರತಿಷ್ಠಿತ ಪ್ರಶಸ್ತಿಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಕಾನೂನು ಉತ್ಸವದಲ್ಲಿ ಸಾಧನೆ : ಸಾಧಕರಿಗೆ ಸನ್ಮಾನರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆಬಿಜೆಪಿಗೆ ಆಘಾತ ; ಪಕ್ಷಕ್ಕೆ ರಾಜೀನಾಮೆ ನೀಡಿದ ತಮಿಳುನಾಡಿನ ಪ್ರಭಾವಿ ನಾಯಕ ಅಣ್ಣಾಮಲೈ