Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿಮರ್ಶಾ ಕಮ್ಮಟ : ಸಾಹಿತ್ಯ ವಿಮರ್ಶೆ ಎಂಬುದು ಅಂತಿಮವಾಗಿ ಲೋಕ ಗ್ರಹಿಕೆ

ಬೆಳಗಾವಿ : ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಜಿಲ್ಲಾ ಘಟಕವು ಕನ್ನಡ ಸಾಹಿತ್ಯ ಭವನ ವಿಶ್ವಸ್ಥಮಂಡಳಿಯ ಸಹಯೋಗದೊಂದಿಗೆ ಆಯೋಜಿಸಿದ್ದ ಒಂದು ದಿನದ ವಿಮರ್ಶಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಗುರುಪಾದ ಮರಿಗುದ್ದಿಯವರು ಸಾಹಿತ್ಯ ವಿಮರ್ಶೆ ಎನ್ನುವುದು ಅಂತಿಮವಾಗಿ ಲೋಕ ಗ್ರಹಿಕೆಯಾಗಿದೆ ಎಂದರು.

ಭಾರತೀಯರಲ್ಲಿ ವಿಮರ್ಶೆ ಎಂಬುದು ಕಾವ್ಯ ಮೀಮಾಂಸೆಯಾಗಿತ್ತು. ರಸ ,ಧ್ವನಿ ,ಅಲಂಕಾರ, ಔಚಿತ್ಯ ಗಳ ಚರ್ಚೆಯು ಬೆಳೆದು. ಆಧುನಿಕ ಕಾವ್ಯ ವಿಮರ್ಶೆಯ ಚರ್ಚೆಯಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ಮೀಮಾಂಸೆಗಳು ಬೆರೆತು ಬಿ.ಎಂ.ಶ್ರೀ ಯವರಿಂದ ಕುವೆಂಪು ಅವರ ದರ್ಶನ ಮೀಮಾಂಸೆಯ ತನಕ ಬೆಳೆದು ಬಂದ ಬಗೆಯನ್ನು ವಿವರಿಸಿದರು.

ಕಮ್ಮದ ಸಂಪನ್ಮೂಲ ವ್ಯಕ್ತಿ ಡಾ. ತಾರಿಣಿ ಶುಭದಾಯಿನಿ ಅವರು
‘ವಿಮರ್ಶೆ ಎಂಬುದು ಒಂದು ಬೌದ್ಧಿಕ ಚಟುವಟಿಕೆ ಅದು ಬುಧ್ದಿಯನ್ನು ಸಜನಾತ್ಮಕವಾಗಿಸುತ್ತದೆ.
ವಿಪುಲವಾದ ಓದು ವಿವಿಧ ಜ್ಞಾನ ಶಾಖೆಗಳ ಅರಿವು ವಿಮರ್ಶಕರಿಗೆ ಬೇಕು ‘ ಎಂದು ಹೇಳಿದರು.

ಪಾಶ್ಚಾತ್ಯ ಮೀಮಾಂಸೆಯ ದುರಂತ ನಾಟಕಗಳು ಸಂರಚನಾವಾದ ವಿರಚನವಾದ ಕೆಥಾರ್ಸಿ ಸ್ ತತ್ವಗಳನ್ನು ವಿವರಿಸುತ್ತ ಡೆರಿಡಾನ ವಿಚಾರಗಳಿಗೂ ಪ್ರವೇಶ ಕೊಟ್ಟರು ಇಂದಿನ ವಿಮರ್ಶೆಯಲ್ಲಿ ಸಾಹಿತ್ಯ ತತ್ವಗಳು ಸಂಸ್ಕೃತಿ ಗಳು ಸಂಗಮವಾಗಿ ಸಾಂಸ್ಕೃತಿಕ ವಿಮರ್ಶೆಯಾಗಿ ಬೆಳೆಯುತ್ತಿರುವ ಕನ್ನಡ ಆಧುನಿಕ ವಿಮರ್ಶೆಯ ಸುಳಿವುಗಳನ್ನು ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಡಾ.ಗುರುದೇವಿ ಹುಲೆಪ್ಪನವರಮಠ ವಿಮರ್ಶೆ ಅದರ ಇಂದಿನ ಅನಿವಾರ್ಯತೆ ಮತ್ತು ಉಪಯೋಗಗಳನ್ನು ವಿವರಿಸಿದರು.

ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಜಿಲ್ಲೆಯ ಅಧ್ಯಕ್ಷೆ ಡಾ. ಕೆ. ಆರ್. ಸಿದ್ದಗಂಗಮ್ಮ ಅಧ್ಯಕ್ಷತೆ ವಹಿಸಿ ವಿಮರ್ಶೆಯು ಟೀಕೆ ಪ್ರತಿಕ್ರಿಯೆಗಳಿಗಿಂತ ಮುಂದಿನದು .ಆರೋಗ್ಯಕರ ವಿಮರ್ಶೆ ಇಂದಿನ ಸಮಾಜದ ಅನಿವಾರ್ಯ ಎಂದರು.

ಆರ್.ಬಿ. ಕಟ್ಟಿ ಗೌ ಕಾರ್ಯದರ್ಶಿ ಕಸಾಭ ವಿಶ್ವಸ್ಥ ಮಂಡಳಿ ಇವರು ಸಮಾರೋಪ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.
40 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.
೧)ದೇವನೂರು ಮಹಾದೇವ
೨) ಡಿ. ವಿನಯ ಚಂದ್ರ
೩)ರಾಜಶೇಖರ ಹಳೆಮನಿ
೪)ಸವಿತಾ ನಾಗಭೂಷಣ್
೫)ನದೀಮ್ ಸನದಿ
೬)ಅಕ್ಷತಾ ಕೃಷ್ಣಮೂರ್ತಿ
ಇವರ ಕಥೆ ಮತ್ತು ಕವಿತೆಗಳನ್ನು ಪ್ರಾಯೋಗಿಕ ವಿಮರ್ಶೆ ಮಾಡಿದರು.

ಕ.ಲೇ.ಸಂ ನ ಉಪಾಧ್ಯಕ್ಷೆ ಜ್ಯೋತಿ ಬಾದಾಮಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ನಿರ್ಮಲಾ ಬಟ್ಟಲ ವಂದಿಸಿದರು ಡಾ.ನೀತಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ರಾಜನಂದಾ ಗಾರ್ಗಿ ಮತ್ತು ಸುಧಾ ಪಾಟೀಲ ನೋಂದಣಿ ಮಾಡಿಕೊಂಡರು. ಪುಷ್ಪ ಮುರಗೋಡ ಪ್ರಾರ್ಥಿಸಿದರು. ಡಾ.ರಂಜನಾ ಗೋಧಿ , ಶಶಿಧರ ಹೊಸಕೋಟೆ , ನೀಲಗಂಗಾ ಚರಂತಿಮಠ , ಲಲಿತಾ ಕೋಪರ್ಡೆ,
ಪ್ರೊ.ಸಿದ್ಧನಗೌಡ ಚೋಬಾರಿ, ಸುಮಿತ್ರಾ ಚೋಬಾರಿ, ಪ್ರೋ.ಶಿಂತ್ರಿ ಹಮೀದಾ ಬೇಗಂ ದೇಸಾಯಿ, ಪುಷ್ಪಾ ಮುರಗೋಡ, ಕವಿತಾ ಕುಸಗಲ್ಲ ಅನೇಕ ಗಣ್ಯರು ಶಿಬಿರಾರ್ಥಿ ಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಕಮ್ಮಟವನ್ನು ಯಶಸ್ವಿಗೊಳಿಸಿದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆಖ್ಯಾತ ನಟ ದರ್ಶನ್ ಗೆ ಇನ್ನೊಂದು ವರ್ಷ ಜಾಮೀನು ಇಲ್ಲ : ಸುಪ್ರೀಂ ಕೋರ್ಟ್ಸಿದ್ದಾಪುರ : ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ ; ಜನಗಣತಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವುಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದಾರುಣ ಸಾವುಒಂದೇ ಸಲ 224 ವಿಧಾನ ಸಭೆ ಸ್ಥಾನ ಗೆದ್ದು ಸಿಎಂ ಆಗುತ್ತೇನೆ ಎಂದಿದ್ದ ನೀಲಣ್ಣನವರಿಗೆ ಅಧಿಕಾರಿಗಳಿಂದ ಶಾಕ್ ..!ಉತ್ತರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಮಳೆಗೆ 100ಕ್ಕೂ ಹೆಚ್ಚು ಮಂದಿ ಸಾವುಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ