Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೋರೆಯವರ ಹೆಜ್ಜೆ ಐತಿಹಾಸಿಕ ಹಾಗೂ ಅನುಕರಣೀಯ !

" ಆಟವನ್ನು ಇನ್ನೂ ಚೆನ್ನಾಗಿ ಆಡುತ್ತಿರುವಾಗಲೇ
ಆಟವನ್ನು ಬಿಟ್ಟುಕೊಟ್ಟು ನಿರ್ಗಮಿಸು " ಎಂಬ ಮಾತು
ಇಂಗ್ಲೀಷ್ ನಲ್ಲಿದೆ. ಈ ಮಾತು ಕೆ ಎಲ್ ಈ ಸಂಸ್ಥೆಯ ರೂವಾರಿ ಶ್ರೀ ಪ್ರಭಾಕರ ಕೋರೆ ಅವರಿಗೆ ಚೆನ್ನಾಗಿ
ಅನ್ವಯಿಸುತ್ತದೆ.
ಇದೀಗ ನಡೆದ ಕೆ ಎಲ್ ಈ ಚುನಾವಣೆಯ
ಫಲಿತಾಂಶ ಪ್ರಕಟವಾಗಿದೆ. ಅವರು ಪ್ರಕಟಿತ ಪಟ್ಟಿಯಲ್ಲಿ
ಅವರಿಲ್ಲ. ಅವರ ಮಗಳು ಹಾಗೂ ಮಗ ಇದ್ದಾರೆ.
ಕೆ ಎಲ್ ಈ ಸಂಸ್ಥೆಯ ಅಧ್ಯಕ್ಷರಾಗಿ ಕೋರೆಯವರ ಸಹೋದರ ದಿ. ಚಿದಾನಂದ ಕೊರೆಯವರು
ಸೇವೆ ಸಲ್ಲಿಸುತ್ತಿದ್ದ ಕಾಲದಿಂದಲೂ ಸಂಸ್ಥೆಯನ್ನು ಅತ್ಯಂತ
ಸಮೀಪದಿಂದ ನಾನು ಬಲ್ಲೆ. 1980 ರ ದಶಕದ
ಆರಂಭದಲ್ಲಿ ಬೈಲಹೊಂಗಲದ ಹಿರಿಯ ಮುತ್ಸದ್ದಿ
ಶ್ರೀ ಶಿವಾನಂದ ಕೌಜಲಗಿ ಅವರು ನಮ್ಮ ರಾಮದುರ್ಗ
ಮನೆಯಲ್ಲಿ ಎರಡು ಕೆ ಎಲ್ ಈ ಸದಸ್ಯತ್ವಗಳನ್ನು
ಕೊಟ್ಟಿದ್ದರು. ನನ್ನ ತಂದೆ ದಿ. ಯಂಕಪ್ಪಾ ಚಂದರಗಿ ಹಾಗೂ
ನನ್ನ ಅಣ್ಣ ಶ್ರೀ ಮಾರುತಿ ಚಂದರಗಿ. ಕೇವಲ 200 ರೂ. ಶುಲ್ಕ. ಬೆಳಗಾವಿಯಲ್ಲಿ ಪತ್ರಕರ್ತನ್ನಾಗಿ ಕೆಲಸ
ಆರಂಭಿಸಿದ್ದ ನಾನು ಸದಸ್ಯತ್ವವೇ ಬೇಡ ಎಂದಿದ್ದೆ. ನನ್ನ
ತಂದೆ 1999 ರಲ್ಲಿ ನಿಧನರಾದರು. ನನ್ನ ಅಣ್ಣನ
ಸದಸ್ಯತ್ವ ಇದೆ.
40 ವರ್ಷಗಳ ಸುದೀರ್ಘ ಸೇವೆಯ ನಂತರ
ಕೊರೆಯವರು ನಿರ್ದೇಶಕ ಸ್ಥಾನದಿಂದ ಹೊರಗೆ
ಬಂದಿದ್ದಾರೆ. ಅವರ ಸ್ಥಾನವನ್ನು ಯಾರು ತುಂಬುತ್ತಾರೆ
ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಾರೇ ತುಂಬಿದರು ಸಹ
ಕೊರೆಯವರ ಗೈರು ಹಾಜರಿ ಅಲ್ಲಿ ಎದ್ದು ಕಾಣುವದು
ಪಕ್ಕಾ. ಅವರು ಸ್ವತಃ ಇರುವದಕ್ಕೂ ಬೇರೆಯವರಿಂದ
ಕೆಲಸ ಮಾಡಿಸುವದಕ್ಕೂ ವ್ಯತ್ಯಾಸವಿದ್ದೇ ಇದೆ.
ಕೊರೆಯವರ ಶಿಸ್ತು ಹಾಗೂ ಕ್ರಿಯಾಶೀಲತೆಯ
ಪರಿಣಾಮವಾಗಿಯೇ ಸಂಸ್ಥೆಯು ಆಕಾಶದೆತ್ತರಕ್ಕೆ
ಬೆಳೆದಿದೆ. ಅವರ ಸೇವೆಯನ್ನು ಸಮಾಜ ಇನ್ನೂ
ಪಡೆಯಬೇಕಾಗಿದೆ. ಸತತವಾಗಿ ಒದ್ದಾಡುತ್ತಲೇ ಇರುವದೇ
ಅವರ ಆರೋಗ್ಯದ ಗುಟ್ಟೂ ಹೌದು.
ಕೊರೆಯವರಿಗೆ ದೇವರು ಇನ್ನೂ ಹೆಚ್ಚಿನ ಆರೋಗ್ಯ ಕೊಡಲಿ, ಅವರ ಸೇವೆ ಸಮಾಜಕ್ಕೆ ಸಿಗಲಿ ಎಂದು
ಪ್ರಾಂಜಲ ಮನಸ್ಸಿನಿಂದ ಹಾರೈಸುತ್ತೇನೆ.

ಅಶೋಕ ಚಂದರಗಿ
ಬೆಳಗಾವಿ
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ