ಬೆಳಗಾವಿ : ತನ್ಮಯ ಚಿಂತನ ಚಾವಡಿ ರಾಮತೀರ್ಥನಗರದ ವತಿಯಿಂದ ಸ.ರಾ.ಸುಳಕೂಡೆ ಅವರು ರಚಿಸಿದ ಸಮಾಲೋಚನೆ ಚುಟುಕುಗಳ ಸಂಕಲನ ಅವಲೋಕನ ಕಾರ್ಯಕ್ರಮ. ದಿನಾಂಕ 20.06.2026 ರ ಶನಿವಾರ ಬೆಳಿಗ್ಗೆ 11.00ಗಂಟೆಗೆ ಲಕ್ಷೀ ಪ್ರಿಂಟಿಂಗ್ ಪ್ರೆಸ್ ಸಭಾಂಗಣ ಅಟೋನಗರದಲ್ಲಿ ಜರುಗಲಿದೆ. ಅಧ್ಯಕ್ಷತೆಯನ್ನು ಸೋಮಶೇಖರ ದೇಸಾಯಿ, ಕಿತ್ತೂರ ಸಂಸ್ಥಾನದ ವಂಶಜರು.ವಹಿಸುವರು. ಪುಸ್ತಕ ಅವಲೋಕನವನ್ನು ಹಿರಿಯ ಸಾಹಿತಿಗಳಾದ ಎಲ್. ಎಸ್. ಶಾಸ್ತ್ರಿ, ಎಂ.ವೈ. ಮೆಣಸಿನಕಾಯಿ, ಬಿ.ಬಿ ಮಠಪತಿ ಮಾಡುವರು. ಎ.ಎಂ. ಕೆಂಪಿಗೌಡರ, ವಿಜಯ ಮುಚಳಂಬಿ ಆಗಮಿಸಲಿದ್ದಾರೆ. ಸ ರಾ ಸುಳಕೂಡೆ ಉಪಸ್ಥಿತರಿರುವವರು.
