ಬೆಳಗಾವಿ: ನಗರ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಅವರಿಂದ 10.31 ಲಕ್ಷ ಬೆಲೆಯ ಹೆರಾಯಿನ್ ನ್ನು ವಶಪಡಿಸಿಕೊಂಡಿದ್ದಾರೆ.
ರೈಲ್ವೆ ಕ್ವಾಟ್ರಸ್ ನ ನಿಖಿಲ್ ನಾರಾಯಣ ಬಳ್ಳಾರಿ (24), ಮುಜಾವರಗಲ್ಲಿಯ ಕಪಿಲ್ ಗಜಾನನ ಹೊಸೂರು (18) ಮತ್ತು ಆಕಾಶ ಆನಂದ ಸಾಳುಂಕೆ( 34) ಬಂಧಿತರು. ಇವರು ಬೆಳಗಾವಿಯ ತಾಂಗಡಿಗಲ್ಲಿ ಮಹದೇವ ಮಂದಿರ ಬಳಿ ಎಂಬ ಮಾದಕ ವಸ್ತುವಾದ ಹೆರಾಯಿನ್ ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಪಿಐ ಮಂಜುನಾಥ ನಾಯಕ ಅವರ ಮಾರ್ಗದರ್ಶನದಲ್ಲಿ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ.
