Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅಗಸಗಿ ದೇವಸ್ಥಾನ ಪಂಚರು, ಪೊಲೀಸ್ ಪಾಟೀಲರಾದ ಬಸನಗೌಡ ನಿಂಗನಗೌಡ ಪಾಟೀಲ ನಿಧನ.

ಅಗಸಗಿ ದೇವಸ್ಥಾನ ಪಂಚರಾದ ಬಸನಗೌಡ ನಿಂಗನಗೌಡ ಪಾಟೀಲ ನಿಧನ.

ಬೆಳಗಾವಿ : ಅಗಸಗಿ ಗ್ರಾಮದ ದೇವಸ್ಥಾನ ಪಂಚರು, ಊರಿನ ಗೌಡರು ಹಾಗೂ ಪ್ರತಿಷ್ಠಿತ ಪೊಲೀಸ್ ಪಾಟೀಲ ಮನೆತನದ ಹಿರಿಯರಾದ ಬಸನಗೌಡ ನಿಂಗನಗೌಡ ಪಾಟೀಲ ಇಂದು ಸಾಯಂಕಾಲ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಇವರಿಗೆ 77 ವರ್ಷ ವಯಸ್ಸಾಗಿತ್ತು. 

ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಒರ್ವ ಪುತ್ರಿ , ಇಬ್ಬರು ಸಹೋದರರು, ಸೊಸೆಯಂದಿರು, ಅಳಿಯಂದಿರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.

ಮೃತರು ಗ್ರಾಮದ ಪೊಲೀಸ್ ಪಾಟೀಲರಾಗಿದ್ದು, ಗ್ರಾಮದ ಧಾರ್ಮಿಕ ,ಸಾಮಾಜಿಕ, ರಾಜಕೀಯ ಹಾಗೂ ಇತರೆ ಕಾರ್ಯಗಳಲ್ಲಿ ಪ್ರಮುಖರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದಾ ಸಾಮಾಜಿಕ ಕಳಕಳಿಯ ಉದ್ದೇಶಕ್ಕಾಗಿ ಶ್ರಮಿಸುವ ಕುಟುಂಬದ ಹಿರಿಯ ಜೀವಿಯಾಗಿದ್ದರು. ಕಿರಿಯ ಸಹೋದರ ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಅಧ್ಯಕ್ಷರಾಗಿದ್ದು,  ಹಿರಿಯ ಪುತ್ರ ಅಗಸಗಿ ಪ್ರೌಢಶಾಲೆಯಲ್ಲಿ ಸಿಬ್ಬಂದಿಯಾಗಿ, ಕಿರಿಯ ಪುತ್ರ ಕರ್ನಾಟಕ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಮುಂದಿನ ವರ್ಷ ನಡೆಯಲಿರುವ ಗ್ರಾಮದ ಲಕ್ಷ್ಮೀದೇವಿ ಜಾತ್ರೆಯ ಸಿದ್ಧತೆಗಾಗಿ ಬಸನಗೌಡ ಪಾಟೀಲ ಹಗಲಿರುಳು ಶ್ರಮಿಸುತ್ತಿದ್ದ ಇವರು ಹೃದಯಾಘಾತಕ್ಕೆ  ಬಲಿಯಾಗಿ ಮಂಗಳವಾರ ಸಂಜೆ ನಿಧನರಾದರು.

ಮೃತರ ಅಂತ್ಯಕ್ರಿಯೆ ನಾಳೆ (ಬುಧವಾರ ದಿ: 5 ಜುಲೈ) ಬೆಳಗ್ಗೆ 9 ಗಂಟೆಗೆ ಅಗಸಗಿ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಲಿದೆ.

ಮೃತರ ಅಗಲಿಕೆಗೆ ಅಗಸಗಿ , ಚಲವೇನಟ್ಟಿ, ಮಾಳೆನಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಗಸಗಿ ದೇವಸ್ಥಾನ ಪಂಚರು, ಪೊಲೀಸ್ ಪಾಟೀಲರಾದ ಬಸನಗೌಡ ನಿಂಗನಗೌಡ ಪಾಟೀಲ ನಿಧನ.ಮರಾಠಾ ಮಂಡಳ ಸಂಸ್ಥೆಯ ಉಪಾಧ್ಯಕ್ಷ ರಾಜೇಶ ಹಲಗೇಕರ ನಿಧನಸಿಎಂ ಡಿಕೆ ಶಿವಕುಮಾರ ಸಚಿವ ಸಂಪುಟದಲ್ಲಿ 9 ಜಿಲ್ಲೆಗಳ ಶಾಸಕರಿಗೆ ಸಿಗದ ಸಚಿವ ಸ್ಥಾನಸಚಿವ ಆಕಾಂಕ್ಷಿಗಳ ಅತೃಪ್ತಿ; ರಾಜೀನಾಮೆ ನೀಡಿದರೆ ಕ್ಷಣದಲ್ಲಿ ಅಂಗೀಕಾರ: ಸಿಎಂ ಡಿ ಕೆ ಶಿವಕುಮಾರ್ಬರ ಪರಿಸ್ಥಿತಿ ವೀಕ್ಷಣೆಗೆ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ: ಸಿಎಂ ಡಿಕೆಶಿ ಆದೇಶಲಕ್ಷ್ಮಣ ಸವದಿಯವರಿಗೆ ಕೊಟ್ಟ ಮಾತಿಗೆ ತಪ್ಪದ ಡಿಕೆಶಿ..!ಕೊನೆ ಕ್ಷಣದಲ್ಲಿ ಗಾಯತ್ರಿಗೆ ಕೈತಪ್ಪಿದ ಮಂತ್ರಿಗಿರಿ!ಬಿಜೆಪಿಗೆ ಬಿಗ್ ಶಾಕ್‌ ; ಉಪಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷರ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಸೋಲು ; ಪ್ರಶಾಂತ ಕಿಶೋರಗೆ ಗೆಲುವುಶಾಸಕ ಶಿವಣ್ಣನವರಿಗೆ ಕೈ ತಪ್ಪಿದ ಸಚಿವ ಸ್ಥಾನ: ಮತದಾರರಿಂದ 'ಗೋವಿಂದ' ಸ್ಟೇಟಸ್‌..!ನಕಲಿ ಅಂಕಪಟ್ಟಿ ಸಲ್ಲಿಸಿ ವಿಲೇಜ್ ಅಕೌಂಟೆಂಟ್ ಹುದ್ದೆ ಪಡೆದಿದ್ದ ನಾಲ್ವರಿಗೆ ಬಿಗ್ ಶಾಕ್ ನೀಡಿದ ಬೆಳಗಾವಿ ನ್ಯಾಯಾಲಯ