Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಉಪ್ಪಾರ ಸಮಾಜದ ಜನರಿಗೆ ಮಹತ್ವದ ಮನವಿ

ಬೆಳಗಾವಿ :ರಾಜ್ಯದಲ್ಲಿ ದಿನಾಂಕ 22-09-2025ರಿಂದ ಮನೆ ಮನೆ ಜಾತಿ ಸಮೀಕ್ಷೆ ನಡೆಯಲಿದ್ದು, ಈ ಸಮೀಕ್ಷೆಯಲ್ಲಿ ಉಪ್ಪಾರ ಸಮಾಜದ ಸುಮಾರು 25-30 ಉಪಜಾತಿಗಳು ಗುರುತಿಸಲ್ಪಟ್ಟಿವೆ.

ಉದಾಹರಣೆಗೆ: ಕೂಲಿ ಉಪ್ಪಾರ, ಎಲೆ ಉಪ್ಪಾರ, ಗಾರೆ ಉಪ್ಪಾರ, ಹಳ್ಳಿ ಉಪ್ಪಾರ, ಕಲ್ಲುಕುಟಿಗ ಉಪ್ಪಾರ, ಲಿಂಗಾಯತ ಉಪ್ಪಾರ, ಲೋನರಿ, ಮೇಲುಗಾರಾ, ಮೇಲು ಸಕ್ಕರೆ ಶೆಟ್ಟಿ, ಮೇಲು ಸಕ್ಕರೆ ಉಪ್ಪಾರ, ನಾಮದ ಉಪಹಾರ, ಸಾಧು ಶೆಟ್ಟಿ, ಸಗರ, ಸುಣ್ಣ ಉಪ್ಪಾರ, ಉಪನಾಡು, ಉಪ್ಪಳಿಗ, ಉಪ್ಪಾರ ಬಲಿಜ, ಉಪ್ಪಾರ/ಉಪ್ಪೇರ, ಉಪ್ಪಾರ ಗೌಂಡಿ, ಉಪ್ಪಾರ ಗೌಡ, ಉಪ್ಪಾರ ಶೆಟ್ಟಿ, ಉಪ್ಪಿನ ಕೊಳಗ ಮುಂತಾದ ಅನೇಕ ಉಪಜಾತಿಗಳು.

ಹೆಚ್ಚು ಹೆಸರುಗಳಿಂದ ಗೊಂದಲ ಉಂಟಾಗದಂತೆ ಸಮಾಜದ ಬಂಧುಗಳು, ಗುರುಹಿರಿಯರು, ಯುವಕರು ಮತ್ತು ಸಂಘಟನೆಗಳ ಪ್ರತಿನಿಧಿಗಳು ಒಗ್ಗೂಡಿ ಸಾಮಾನ್ಯ ಅಭಿಯಾನ ನಡೆಸಬೇಕು ಎಂದು ಜಿಲ್ಲಾ ಮಟ್ಟದ ಜಗೃತಿ ಹಾಗೂ ಉಸ್ತುವಾರಿ ಸಮಿತಿ ನಾಮನಿರ್ದೇಶಿತ ಸದಸ್ಯರು ಉಪ್ಪಾರ ಸಮಾಜದ ಮುಖಂಡ ಬಸವರಾಜ ಆಯಟ್ಟಿ ಮನವಿ ಮಾಡಿದ್ದಾರೆ.

“ಪ್ರತಿ ಮನೆಯವರು ಜಾತಿ ಕಾಲಮ್ನಲ್ಲಿ ಸ್ಪಷ್ಟವಾಗಿ ‘ಉಪ್ಪಾರ’ ಎಂದು ಬರೆಸಿಕೊಳ್ಳಬೇಕು. ಯಾರೂ ಜಾತಿಯಿಂದ ವಂಚಿತರಾಗಬಾರದು. ನಮ್ಮ ಜನಸಂಖ್ಯೆ ನಿಖರವಾಗಿ ದಾಖಲಾದರೆ ಮಾತ್ರ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳು ದೊರಕುತ್ತವೆ ಮತ್ತು ಮೀಸಲಾತಿ ಹೆಚ್ಚುವರಿ ಲಭ್ಯವಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.

ಅದೇ ವೇಳೆ, ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ಜಮೀನು, ಮನೆ ಅಥವಾ ಆಸ್ತಿ ಇಲ್ಲದಿದ್ದರೆ “ಇಲ್ಲ” ಎಂದು, ಶಿಕ್ಷಣ ಓದಿಲ್ಲದಿದ್ದರೆ “ಅನಕ್ಷರಸ್ಥ” ಎಂದು, ಉದ್ಯೋಗವಿಲ್ಲದಿದ್ದರೆ ಅದನ್ನೂ ಸ್ಪಷ್ಟವಾಗಿ ದಾಖಲಿಸುವಂತೆ ಮನವಿ ಮಾಡಲಾಗಿದೆ.

“ನಿಖರ ಮಾಹಿತಿ ನೀಡಿದರೆ ಮಾತ್ರ ಸಮಾಜಕ್ಕೆ ಸರಿಯಾದ ಸೌಲಭ್ಯಗಳು ಮುಂದುವರಿಯುತ್ತವೆ ಮತ್ತು ಮೀಸಲಾತಿ ಉಳಿಯುತ್ತದೆ” ಎಂದು ಬಸವರಾಜ ಆಯಟ್ಟಿ ಒತ್ತಿಹೇಳಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ