Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಎರಡನೆಯ ಪತಿಯಿಂದಲೂ ಜೀವನಾಂಶ ಕೇಳಬಹುದು: ಸುಪ್ರೀಂ ಕೋರ್ಟ್

Advertisement
 

ನವದೆಹಲಿ: ಮೊದಲ ಮದುವೆಯು ಕಾನೂನಿನ
ಪ್ರಕಾರ ಚಾಲ್ತಿಯಲ್ಲಿ ಇದ್ದರೂ, ಎರಡನೆಯ ಪತಿಯಿಂದ ಜೀವನಾಂಶ ಕೇಳುವ ಹಕ್ಕು ಮಹಿಳೆಗೆ ಅಪರಾಧ ದಂಡಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125ರ ಅಡಿಯಲ್ಲಿ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮ ಅವರು ಇರುವ ವಿಭಾಗೀಯ ಪೀಠವು, ಸೆಕ್ಷನ್ 125ರ ಅಡಿಯಲ್ಲಿ ಸಿಗುವ ಜೀವನಾಂಶವು ಮಹಿಳೆ ಪಡೆದುಕೊಳ್ಳುವ ಸೌಲಭ್ಯವಲ್ಲ; ಅದು ಪತಿಯ ಪಾಲಿನ ಕರ್ತವ್ಯ ಎಂದು ಹೇಳಿದೆ.

ಮಹಿಳೆ ಮತ್ತು ಪ್ರತಿವಾದಿ ಪುರುಷ ವಿವಾಹಿತರಂತೆ ಇದ್ದರು, ಇಬ್ಬರೂ ಒಟ್ಟಾಗಿ ಮಗುವನ್ನು ಸಲಹುತ್ತಿದ್ದರು. ಹೀಗಾಗಿ, ಜೀವನಾಂಶದ ಪ್ರಯೋಜನವು ಮಹಿಳೆಗೂ ಸಿಗಬೇಕು ಎಂದು ಆಕೆಯ ಪರ ವಕೀಲರು ವಾದಿಸಿದ್ದರು. ಮಹಿಳೆಗೆ ಮೊದಲೇ ಒಂದು ಮದುವೆ ಆಗಿದೆ ಎಂಬುದನ್ನು ಎರಡನೆಯ ಪತಿಯಿಂದ ಮುಚ್ಚಿಟ್ಟಿರಲಿಲ್ಲ ಎಂದು ತಿಳಿಸಿದ್ದರು.

ಮೊದಲ ಮದುವೆಯು ಊರ್ಜಿತದಲ್ಲಿ ಇದ್ದಾಗ, ಆಕೆಯ ತನ್ನ ಕಕ್ಷಿದಾರನ ಪತ್ನಿ ಎಂದು ಪರಿಗಣಿತಳಾಗುವುದಿಲ್ಲ. ಹೀಗಾಗಿ ಆಕೆಯು ಸೆಕ್ಷನ್ 125 ಅಡಿಯಲ್ಲಿ ಜೀವನಾಂಶ ಕೇಳಲು ಅವಕಾಶವಿಲ್ಲ ಎಂದು ಪುರುಷನ (ಎರಡನೆಯ ಪತಿ) ಪರ ವಕೀಲರು ವಾದಿಸಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ್ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ  ಗುಡುಗುಡಿಕೆಶಿ ಸಂಪುಟದಲ್ಲಿ ಖಾತೆ ಅಸಮಾಧಾನ ತೀವ್ರ : ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಮುನಿಯಪ್ಪ ಬಹಿರಂಗ ಅಸಮಾಧಾನ !ಉದಯಕುಮಾರಗೆ ಪ್ರತಿಷ್ಠಿತ ಪ್ರಶಸ್ತಿಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಕಾನೂನು ಉತ್ಸವದಲ್ಲಿ ಸಾಧನೆ : ಸಾಧಕರಿಗೆ ಸನ್ಮಾನರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆಬಿಜೆಪಿಗೆ ಆಘಾತ ; ಪಕ್ಷಕ್ಕೆ ರಾಜೀನಾಮೆ ನೀಡಿದ ತಮಿಳುನಾಡಿನ ಪ್ರಭಾವಿ ನಾಯಕ ಅಣ್ಣಾಮಲೈ