Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿಚಿತ್ರ ಕಳ್ಳತನ : ದೇವರ ಕ್ಷಮೆ ಕೋರಿ ದೇವಾಲಯದ ಹುಂಡಿ ದೋಚಿದ ಕಳ್ಳರು…!

ನಾಗಪುರ : ವಿಚಿತ್ರ ಕಳ್ಳತನದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳತನಕ್ಕೂ ಮುನ್ನ ದೇವರ ಮುಂದೆ ಕ್ಷಮೆ ಕೋರಿ ಇಬ್ಬರು ಅಪರಿಚಿತರು ಬಳಿಕ ದೇವಾಲಯಗಳ ಹುಂಡಿಗಳನ್ನು ಒಡೆದು ಹಣ ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.
ಈ ಕಳ್ಳತನವು ನಾಗಪುರದ ಮಾಲ್ಧಕ್ಕಾ ಪ್ರದೇಶದಲ್ಲಿರುವ ಶೀತ್ಲಾ ಮಾತಾ ದೇವಾಲಯ ಹಾಗೂ ಶಿವ ದೇವಾಲಯಗಳಲ್ಲಿ ನಡೆದಿದೆ. ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಜುಲೈ 27ರ ಸಂಜೆ ದೇವಾಲಯದ ಬಾಗಿಲುಗಳನ್ನು ಬೀಗ ಹಾಕಿ ತೆರಳಿದ್ದರು. ಆದರೆ ಮರುದಿನ ಬೆಳಗ್ಗೆ ದೇವಾಲಯಕ್ಕೆ ಬಂದಾಗ ಮುಖ್ಯ ದ್ವಾರದ ಬೀಗ ಮುರಿದಿರುವುದು ಕಂಡುಬಂದಿದೆ.

ಅವರು ಒಳಗೆ ಪ್ರವೇಶಿಸಿದಾಗ ಎರಡೂ ದೇವಾಲಯಗಳ ಹುಂಡಿಗಳ ಬೀಗಗಳನ್ನು ಒಡೆದು, ಅದರಲ್ಲಿದ್ದ ನಗದನ್ನು ಕಳವು ಮಾಡಿರುವುದು ಪತ್ತೆಯಾಗಿದೆ.
ನಂತರ ದೇವಾಲಯದ ಒಳಗಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ರಾತ್ರಿ ವೇಳೆ ಇಬ್ಬರು ಅಪರಿಚಿತರು ದೇವಾಲಯದೊಳಗೆ ಪ್ರವೇಶಿಸಿರುವುದು ದಾಖಲಾಗಿದೆ. ವಿಚಿತ್ರವೆಂದರೆ ಕಳ್ಳತನ ನಡೆಸುವ ಮೊದಲು ಆರೋಪಿಗಳಲ್ಲಿ ಒಬ್ಬಾತ ದೇವರ ಎದುರು ಕೈಮುಗಿದು, ಕಿವಿ ಹಿಡಿದು ಕ್ಷಮೆ ಯಾಚಿಸಿದ್ದಾನೆ. ಅದೇ ಸಮಯದಲ್ಲಿ ಆತನ ಸಹಚರ ಹುಂಡಿಯ ಬೀಗ ಮುರಿದಿದ್ದಾನೆ.ʼ


ಮತ್ತೊಬ್ಬ ಸುತ್ತಮುತ್ತ ಯಾರಾದರೂ ಬರುತ್ತಿದ್ದಾರೆಯೇ ಎಂದು ನಿಂತು ನೋಡುತ್ತಿದ್ದಾನೆ. ಬಳಿಕ ಇಬ್ಬರೂ ಹುಂಡಿಗಳ ಬೀಗಗಳನ್ನು ಒಡೆದು, ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಅಂದಾಜು ₹6,000 ರಿಂದ ₹7,000 ನಗದನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ದೇವಾಲಯದ ಆಡಳಿತ ಮಂಡಳಿಯವರು ನೀಡಿದ ದೂರಿನ ಆಧಾರದ ಮೇಲೆ ಲಕಡ್ಗಂಜ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಚಿತ್ರ ಕಳ್ಳತನ : ದೇವರ ಕ್ಷಮೆ ಕೋರಿ ದೇವಾಲಯದ ಹುಂಡಿ ದೋಚಿದ ಕಳ್ಳರು…!ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸಿ:  ಕೇಂದ್ರ ಸಚಿವರೊಂದಿಗೆ ಸಂಸದ ಶೆಟ್ಟರ ಚರ್ಚೆಮಾಜಿ ಬಸ್ ಚಾಲಕನ ಮನೆಯಲ್ಲಿ ₹28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ….!ಕರ್ನಾಟಕದ 5 ಜಿಲ್ಲೆಗಳಲ್ಲಿ ಭಾರಿ ಗಾಳಿ ಮಳೆಯ ಮುನ್ಸೂಚನೆ ; ಆರೆಂಜ್‌ ಅಲರ್ಟ್‌ ಘೋಷಣೆತೀವ್ರ ಚರ್ಚೆಯ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕಾರಕಾವೇರಿ ವಿಚಾರವಾಗಿ ಭಾನುವಾರ ಸರ್ವಪಕ್ಷ ಸಭೆ: ಸಂಪುಟ ಇಲ್ಲದೇ ಯಡಿಯೂರಪ್ಪ ಒಬ್ಬರೇ ಅಧಿಕಾರ ಅನುಭವಿಸಲಿಲ್ಲವೇ?: ಸಿಎಂಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಕರ್ನಾಟಕದಲ್ಲಿ 84.31 ಲಕ್ಷ ʼಎಎಸ್‍ಡಿಡಿಒʼ ಮತದಾರರುಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸಿ:  ಕೇಂದ್ರ ಸಚಿವರೊಂದಿಗೆ ಸಂಸದ ಶೆಟ್ಟರ ಚರ್ಚೆಅಜಿಂಕ್ಯ ರಹಾನೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿನಿಪ್ಪಾಣಿ ರಾಷ್ಟ್ರೀಯ  ಹೆದ್ದಾರಿ ಕುಸಿತ : ಭಾರಿ ವೈರಲ್