ಬೆಳಗಾವಿ: ಜೂನ: ಹನ್ನೆರಡನೆಯ ಶತಮಾನದ ಶರಣರು ಜನಸಾಮಾನ್ಯರಿಗೆ ಹತ್ತಿರವಾದ ಸರಳಕನ್ನಡದಲ್ಲಿ ಸಾಹಿತ್ಯವನ್ನು ರಚಿಸಿದರು. ಕನ್ನಡ ಕಲಿಕೆಗೆ ಹೆಚ್ಚು ಆದ್ಯತೆ ನೀಡಿದ್ದು ಉಲ್ಲೇಖಾರ್ಹವೆನಿಸಿದೆ. ಹಾಗಾಗೀ ಎಲ್ಲವರ್ಗದ ಅಸಂಖ್ಯ ಶರಣ ಶರಣೆಯರು ಅದ್ಭುತವಾದ ವಚನಗಳ ರಚನೆ ಮಾಡಿದ್ದು ವಚನಗಳಿಂದ ತಿಳಿಯುತ್ತದೆ. ಅವರ ಶೈಕ್ಷಣಿಕ ಪರಿಕಲ್ಪನೆಗೆ ವಚನಗಳೇ ಸಾಕ್ಷಿಯಾಗಿವೆ ಎಂದು ಸರಕಾರಿ ಶಿಕ್ಷಣ ತರಬೇತಿ ಕೇಂದ್ರದ ಉಪನ್ಯಾಸಕಿ ಡಾ. ವಿದ್ಯಾವತಿ ಕುಂದರಗಿ ಹೇಳಿದರು.
ಅವರು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ವಚನ ಸಾಹಿತ್ಯದಲ್ಲಿ ಶಿಕ್ಷಣದ ಪರಿಕಲ್ಪನೆ ವಿಷಯ ಕುರಿತು ಉಪನ್ಯಾಸ ನೀಡಿದರು. ಸಮಾಜದಲ್ಲಿ ಸಮಾನತೆಯನ್ನು ತರಲು ಮಾಡಿದ ಶರಣರ ಕ್ರಾಂತಿ ಜಾಗತಿಕ ನೆಲೆಯಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿತು. ಅನುಭವ ಮಂಟಪವು ಅನುಭಾವ ಸಾಹಿತ್ಯಕ್ಕೆ ವ್ಯಾಖ್ಯಾನ ಬರೆಯಿತು. ಮಾತ್ರವಲ್ಲದೆ ಶಿಕ್ಷಣದ ಮಹತ್ವದ ಕೇಂದ್ರವೆನಿಸಿತ್ತು. ಕಾಯಕ ದಾಸೋಹವನ್ನು ಕಡ್ಡಾಯಗೊಳಿಸಿದ್ದ ಶರಣರು ಎಲ್ಲ ವರ್ಗವರು ಮುಕ್ತವಾಗಿ ಶಿಕ್ಷಣ ಪಡೆಯುವಂತೆ ಮಾಡಿದ್ದರ ಫಲವೇ ಅಮೂಲ್ಯವಾದ ಅನುಭಾವ ಸಾಹಿತ್ಯ ಮೂಡಿಬರಲು ಸಾಧ್ಯವಾಯಿತು. ಶಿಕ್ಷಣದಲ್ಲಿ ಅವರು ನೀಡಿದ ಸಮಾನತೆ ಇಂದಿಗೂ ಅನುಕರಣೀಯವೆನಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಶರಣರ ವಿಚಾರಗಳು ಲೋಕಪೂಜ್ಯನೀಯವೆನಿಸಿವೆ. ನಮ್ಮ ಒತ್ತಡದ ಬದುಕಿಗೆ ಅವು ದಿವ್ಯೌಷಧಿಗಳಾಗಿವೆ. ಮಹಾಸಭೆಯು ತನ್ನ ರಚನಾತ್ಮಕ ಕರ್ಯಗಳಿಂದ ಸಮಾಜಮುಖಿಯಾಗಿ ಕರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಹಿರಿಯ ಚಿಂತಕಿ ಡಾ.ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡಿ, ಶರಣರು ನೀಡಿದ ವಿಶ್ವಮಾನವೀಯತೆ ಸಂದೇಶಗಳು ಜೀವನಕ್ಕೆ ಸೋಪಾನವೆನಿಸಿವೆ. ಅವುಗಳನ್ನು ನಿತ್ಯ ಬದುಕಿಗೆ ಅಳವಡಿಸಿಕೊಳ್ಳಬೇಕು. ವಚನಗಳಲ್ಲಿ ಬದುಕಿನ ಎಲ್ಲ ಮುಖಗಳ ದರ್ಶನವಿದೆ. ಪ್ರಕೃತಿಯ ಚರಾಚರದಲ್ಲಿ ದೈವತ್ವವನ್ನು ಕಂಡ ಅವರು ಭವ್ಯಮಾನವರಾದರು. ಅವರ ದರ್ಶನಸಾರವನ್ನು ಅರಿತುಕೊಳ್ಳೋಣವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆಎಲ್ಇ ಸಂಗೀತ ಮಹಾವಿದ್ಯಾಲಯದ ಡಾ.ಸುನೀತಾ ಪಾಟೀಲ, ದುರ್ಗಾ ನಾಡಕರ್ಣಿ, ಡಾ.ವಿದ್ಯಾವತಿ ಕುಂದರಗಿ ಅವರನ್ನು ಸತ್ಕರಿಸಲಾಯಿತು. ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಪ್ರಸಾದ ಹಿರೇಮಠ, ಆರ್.ಪಿ.ಪಾಟೀಲ, ಪ್ರಕಾಶ ಬಾಳೇಕುಂದ್ರಿ, ವಿ.ಕೆ.ಪಾಟೀಲ, ಜ್ಯೋತಿ ಬದಾಮಿ, ಸರೋಜನಿ ನಿಶಾನದಾರ, ವಿದ್ಯಾ ಗೌಡರ, ವಿದ್ಯಾ ಹುಂಡೇಕರ ಉಪಸ್ಥಿತರಿದ್ದರು. ಶಾರದಾ ಪ್ರಸಾದ ಹಿರೇಮಠ ವಚನ ಪ್ರಾರ್ಥನೆ ಮಾಡಿದರು. ಪ್ರಸಾದ ಹಿರೇಮಠ ಸ್ವಾಗತಿಸಿದರು. ಶೈಲಾ ಸಂಸುದ್ದಿ ಪರಿಚಯಿಸಿದರು. ಪ್ರೇಮಾ ಪಾನಶೆಟ್ಟಿ ವಚನ ವಿಶ್ಲೇಷಣೆ ಮಾಡಿದರು. ಶ್ವೇತಾ ಹೆದ್ದೂರಶೆಟ್ಟಿ ನಿರೂಪಿಸಿದರು. ಮಹಾಂತೇಶ ಮೆಣಸಿನಕಾಯಿ ವಂದಿಸಿದರು.
