ಬೆಂಗಳೂರು : ಕರುನಾಡಿನ 24ನೇ ಮುಖ್ಯಮಂತ್ರಿಯಾಗಿ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ಬುಧವಾರ ಸಂಜೆ 4.05ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜತೆಗೆ, ತಮ್ಮ ನೂತನ ಸಂಪುಟಕ್ಕೆ ಬಹುತೇಕ 14 ಮಂದಿ ಸಚಿವರನ್ನು ಸೇರ್ಪಡೆಮಾಡಿಕೊಳ್ಳಲಿದ್ದಾರೆ. ಒಂದು ಡಿಸಿಎಂ ಹುದ್ದೆ ಸೃಷ್ಟಿಯಾಗಲಿದ್ದು, জে. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಆಗಲಿದ್ದಾರೆ.
2023ರ ಮೇ 20 ರಂದು ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಉಪಮುಖ್ಯ ಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್ ಅವರು, ಮುಖ್ಯ ಮಂತ್ರಿಯಾಗಿಯೂ ಅಜ್ಜಯ್ಯ ಅವರ ಹೆಸರಿನಲ್ಲೇ ಗೋಪ್ಯತಾವಿಧಿ ಸ್ವೀಕರಿಸುವ ಸಾಧ್ಯತೆಯಿದೆ ಎನ್ನುತ್ತವೆ ಅವರ ಆಪ್ತ ಮೂಲಗಳು. ನಾಡಿನ ನೂತನ ದೊರೆಗೆ ಪಟ್ಟ ಕಟ್ಟಲು ಲೋಕಭವನ ಸಕಲ ರೀತಿಯಿಂದಲೂ ಸಜ್ಜುಗೊಂಡಿದ್ದು, ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರಿಂದ ಮುಖ್ಯ ಮಂತ್ರಿ ಹಾಗೂ ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
ತನ್ಮೂಲಕ 1980ರ ದಶಕದಲ್ಲಿ ವಿದ್ಯಾ ರ್ಥಿ ಕಾಂಗ್ರೆಸ್ ಮೂಲಕ ರಾಜಕೀಯ ಸಂಘಟನೆ ಶುರು ಮಾಡಿದ ಡಿ.ಕೆ. ಶಿವಕುಮಾರ್ಅವರ ನಾಲ್ಕೂವರೆ ದಶಕಗಳ ಪರಿಶ್ರಮಕ್ಕೆ ಫಲ ದೊರೆತಂತಾಗಲಿದೆ. ಸಾತನೂರಿನಿಂದ ರಾಜಕೀಯ ಶುರು ಮಾಡಿ ಎಚ್.ಡಿ.ದೇವೇಗೌಡರಂತಹ ದಿಗ್ಗಜರೊಂದಿಗೆ ಸೆಣಸಾಡಿ 8 ಬಾರಿ ಶಾಸಕರಾಗಿ, 5 ಬಾರಿ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿ ಆಗಿ ನಾಲ್ಕೂವರೆ ದಶಕದಲ್ಲಿ ಹಲವು ಮೆಟ್ಟಿಲುಗ ಳನ್ನು ಡಿಕೆಶಿ ಹತ್ತಿದ್ದಾರೆ. ಕಾಂಗ್ರೆಸ್ ಪಾಲಿನ 'ಟ್ರಬಲ್ ಶೂಟರ್' ಎಂದೇ ಹೆಸರಾಗಿರುವ ಅವರು 3 ದಶಕಗಳಿಂದ ಕನಸು ಕಂಡಿದ ಕ್ಷಣ ಇಂದು ನನಸಾಗುತ್ತಿದೆ.
