ಬೆಳಗಾವಿ : ಇಂತಹ ಭಕ್ತಿ ಸಂಗೀತದ ಕಾರ್ಯಕ್ರಮ ಆಗಿಂದಾಗ್ಗೆ ನಡೆಯುತ್ತಿರಬೇಕು. ಇದು ಇಂದಿನ ಯಾಂತ್ರಿಕ ಜೀವನದಿಂದ ಹೊರ ಬರುವ ಸುಲಭ ಉಪಾಯ ಎಂದು ಖ್ಯಾತ ಸಂಗೀತ ವಿದ್ವಾನ್ ಎಂ.ಜಿ. ರಾವ್ ಹೇಳಿದರು.
ನಗರದ ನಾದ ಸುಧಾ ಸುಗಮ ಸಂಗೀತ ಶಾಲೆಯಲ್ಲಿ ಆಯೋಜಿಸಲಾಗಿದ್ದ ಅಧಿಕ ಜೇಷ್ಠ ಮಾಸದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲಾ ಮಕ್ಕಳು ತುಂಬಾ ಭಕ್ತಿ ಪೂರ್ವಕವಾಗಿ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ತರದ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಆಧ್ಯಾತ್ಮಿಕದ ಅರಿವು ಮೂಡಿಸುವುದರ ಜೊತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಂತಾಗುತ್ತದೆ ಎಂದು ಹೇಳಿದರು.
ಸಂಗೀತ ಶಾಲೆಯ ಎಲ್ಲಾ ಮಕ್ಕಳು ಕನ್ನಡ, ಹಿಂದಿ ಹಾಗೂ ಮರಾಠಿ ಭಕ್ತಿಗೀತೆಗಳನ್ನು ಭಕ್ತಿ ಭಾವದಿಂದ ಹಾಡಿದರು.
ಸಂಗೀತ ಶಾಲೆಯ ಸಂಸ್ಥಾಪಕ ಡಾ.ಸತ್ಯನಾರಾಯಣ್ ಅವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಉಮಾ ಮನವಾಡಿ ವಂದಿಸಿದರು.
