Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕ್ರಿಕೆಟ್ ಪೋರ ವೈಭವ್ ಸೂರ್ಯವಂಶಿಗೆ ಕೊನೆಗೂ ಸಿಕ್ತು ಅವಕಾಶ

ಮ್ಯಾಂಚೆಸ್ಟರ್:‌ ಇಂಗ್ಲೆಂಡ್‌ ವಿರುದ್ದದ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದ್ದು, 15 ವರ್ಷದ ಪೋರ ವೈಭವ್‌ ಸೂರ್ಯವಂಶಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ವೈಭವ್‌ ಸೂರ್ಯವಂಶಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಕ್ಯಾಪ್‌ ಪಡೆದಿದ್ದಾರೆ.

ಉಪ ನಾಯಕ ತಿಲಕ್‌ ವರ್ಮಾ ಅವರು ವೈಭವ್‌ ಸೂರ್ಯವಂಶಿ ಅವರಿಗೆ ಟೀಂ ಇಂಡಿಯಾ ಕ್ಯಾಪ್‌ ನೀಡಿ ಶುಭ ಹಾರೈಸಿ‌ದರು. ಐರ್ಲೆಂಡ್‌ ಸರಣಿ, ಇಂಗ್ಲೆಂಡ್‌ ವಿರುದ್ದ ಮೊದಲ ಪಂದ್ಯದಲ್ಲಿ ವಿಫಲರಾದ ಸಂಜು ಸ್ಯಾಮ್ಸನ್‌ ಬದಲಿಗೆ ವೈಭವ್‌ ಅವಕಾಶ ಪಡೆದರು.

15 ವರ್ಷ 99 ದಿನಗಳ ವಯಸ್ಸಿನ ಸೂರ್ಯವಂಶಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ಪುರುಷ ಕ್ರಿಕೆಟಿಗ ಎಂಬ ದಾಖಲೆ ಬರೆದರು.

ಈ ಹಿಂದಿನ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು, ಅವರು 1989 ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 16 ವರ್ಷ 205 ದಿನಗಳಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ್ದರು.

ಸೂರ್ಯವಂಶಿ ಭಾರತ ಪರ ಟಿ20 ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಆಗಿದ್ದಾರೆ. ಹಿಂದಿನ ದಾಖಲೆಯನ್ನು ಶಫಾಲಿ ವರ್ಮಾ ಹೊಂದಿದ್ದರು, ಅವರು ಸೆಪ್ಟೆಂಬರ್ 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 15 ವರ್ಷ 239 ದಿನ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದರು. ಪುರುಷರಲ್ಲಿ ವಾಷಿಂಗ್ಟನ್ ಸುಂದರ್, ಡಿಸೆಂಬರ್ 2017 ರಲ್ಲಿ ಶ್ರೀಲಂಕಾ ವಿರುದ್ಧ 18 ವರ್ಷ 80 ದಿನ ವಯಸ್ಸಿನಲ್ಲಿ ಹಿಂದಿನ ದಾಖಲೆಯನ್ನು ಹೊಂದಿದ್ದರು.

ಮ್ಯಾಂಚೆಸ್ಟರ್‌ ನಲ್ಲಿ ಟಾಸ್‌ ಗೆದ್ದ ಭಾರತ ತಂಡವು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದೆ.

ಭಾರತ ತಂಡ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿ.ಕೀ), ಶ್ರೇಯಸ್ ಅಯ್ಯರ್ (ನಾ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ಕೌಜಲಗಿ ದಳವಾಯಿ ಪ್ರೌಢಶಾಲೆಯಲ್ಲಿ ಆಚಾರ್ಯ 108 ವಿದಿತ್ ಮಹಾರಾಜರ ವಾಸ್ತವ್ಯ: ವಿದ್ಯಾರ್ಥಿಗಳಿಗೆ ಮಂಗಲ ಆಶೀರ್ವಚನಕ್ರಿಕೆಟ್ ಪೋರ ವೈಭವ್ ಸೂರ್ಯವಂಶಿಗೆ ಕೊನೆಗೂ ಸಿಕ್ತು ಅವಕಾಶಜುಲೈ 20ರಿಂದ ಆಗಸ್ಟ್ 13ರ ವರೆಗೆ ಸಂಸತ್ತಿನ ಮುಂಗಾರು ಅಧಿವೇಶನಇ-ರಿಕ್ಷಾ ಬ್ಯಾಟರಿ ಸ್ಥಗಿತಗೊಳಿಸಬಲ್ಲ ಆ್ಯಪ್‌ಗಳ ತೆರವಿಗೆ ಗೂಗಲ್‌, ಆಪಲ್‌ಗೆ ಕೇಂದ್ರ ಸರ್ಕಾರದ ಸೂಚನೆತೃಣಮೂಲ Vs ತೃಣಮೂಲ ಕದನ ತೀವ್ರ : ಪಕ್ಷದ ಪ್ರಧಾನ ಕಚೇರಿಯನ್ನೇ ತಮ್ಮ ವಶಕ್ಕೆ ತೆಗೆದುಕೊಂಡ ಬಂಡಾಯ ಗುಂಪುನಾಗರಿಕ ಸೇವೆ ಪರೀಕ್ಷೆ ಬಗ್ಗೆ ಜಾಗೃತಿ ಪ್ರವೇಶ ಪರೀಕ್ಷೆ ದಿನಾಂಕ ನಿಗದಿಉಗ್ರರಿಗೆ ಬೆಂಬಲ ನೀಡೋದು ನಿಲ್ಲುವವರೆಗೂ ಸಿಂಧು ಜಲ ಒಪ್ಪಂದ ಅಮಾನತಿನಲ್ಲೇ ಇರಲಿದೆ : ಪಾಕ್‌ಗೆ ಭಾರತದ ಖಡಕ್ ಸಂದೇಶಪಂಜಾಬ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು : ಸಮಸ್ಯೆ ಬಗೆಹರಿಸಲು ಹೈಕಮಾಂಡ್‌ಗೆ ಚನ್ನಿ ಬಣದ ಗಡುವು; ಅಮಿತ್ ಶಾ ಭೇಟಿಯಾದ ರಾಂಧವಾಅದೇ ಮಾತ್ರೆ ; ಅಮೆರಿಕದಲ್ಲಿ ₹85 ಸಾವಿರ…ಭಾರತದಲ್ಲಿ ₹35 ! ‘ನಮ್ಮನ್ನು ದರೋಡೆ ಮಾಡಲಾಗ್ತಿದೆ ಎಂದ ಅಮೆರಿಕ ಮಹಿಳೆಸೋರುತ್ತಿದ್ದ ಗಣಿಕೊಪ್ಪ ಶಾಲೆಗೆ ಹಲವರಿಂದ ದೇಣಿಗೆ