ಬೆಳಗಾವಿ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಇಲ್ಲಿಯ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರಹ್ಲಾದ ಆಚಾರ್ಯ ಯಜುರ್ವೇದಿ ಅವರಿಗೆ ಪಿಎಚ್ ಡಿ ನೀಡಿದೆ.
ಎ ಕ್ರಿಟಿಕಲ್ ಸ್ಟಡಿ ಆಫ್ ಲಾ ರಿಲೇಟಿಂಗ್ ಟು ಪ್ರೊಫೆಷನಲ್ ನೆಗ್ಲಿಜೆನ್ಸ್ ಇನ್ ಇಂಡಿಯಾ ವಿಷಯವಾಗಿ ಅವರು ಪ್ರಬಂಧ ಮಂಡಿಸಿದ್ದರು. ಅವರಿಗೆ ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಡೀನ್ ಡಾ.ರತ್ನಾ ಭರಮ ಗೌಡರ ಅವರು ಮಾರ್ಗದರ್ಶನ ನೀಡಿದ್ದರು.