ಬೆಳಗಾವಿ: ಕರ್ನಾಟಕದ ಉತ್ತರ ಭಾಗದಲ್ಲಿ ನಾಗರಿಕ ಸೇವೆ ಪರೀಕ್ಷೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಸಮುತ್ಕರ್ಷದಿಂದ ಪ್ರಸಕ್ತ ವರ್ಷದ ‘ಶ್ರದ್ಧಾ-ಮೇಧಾ’ ಪ್ರಿ-IAS ಫೌಂಡೇಶನ್ ಕೋರ್ಸ್ ಸಂಬಂಧಿತ ಪ್ರವೇಶ ಪರೀಕ್ಷೆಯು ಇದೆ ಜುಲೈ 5 ಮತ್ತು 12 ರಂದು ಬೆಳಗಾವಿ ನಗರದಲ್ಲಿ ಜರುಗಲಿದೆ.
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳ ಪ್ರಾರಂಭಿಕ ಪರಿಚಯದ ತರಗತಿಗಳನ್ನು ನಡೆಸಲಾಗುವುದು. ಈ ಕೋರ್ಸ್ ಮೌಲ್ಯಾಧಾರಿತ ಶಿಕ್ಷಣ, ವ್ಯಕ್ತಿತ್ವ ವಿಕಸನ, ನಾಯಕತ್ವ ಅಭಿವೃದ್ಧಿ ಮತ್ತು ನಾಗರಿಕ ಸೇವೆ-ಆಧಾರಿತ ತರಬೇತಿಯ ಮೂಲಕ ಚಿಕ್ಕ ವಯಸ್ಸಿನಿಂದಲೇ ಆತ್ಮವಿಶ್ವಾಸ, ಶಿಸ್ತು, ಸಂವಹನ ಕೌಶಲ್ಯ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಗುರಿ ಹೊಂದಿದೆ.
ಈ ಪ್ರವೇಶ ಪರೀಕ್ಷೆಗೆ ಬೆಳಗಾವಿ ನಗರದ 6ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.
ಕೋರ್ಸ್ಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ಜುಲೈ 5 ಮತ್ತು 12 ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:00 ರವರೆಗೆ ನಡೆಸಲಾಗುತ್ತದೆ. ಬೆಳಗಾವಿಯ ಹಿಂದವಾಡಿ ಆದರ್ಶ ನಗರದ ಕೆ.ಎಲ್.ಎಸ್ ಐಎಂಇಆರ್ ಕಾಲೇಜಿನಲ್ಲಿ ಮತ್ತು ಸುಭಾಷನಗರದ ಮರಾಠ ಮಂಡಳ ಪ್ರಿ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆಗಳು ಜರುಗಲಿವೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಹೆಚ್ಚಿನ ಮಾಹಿತಿಗಾಗಿ 9611823047, 95270 21101 9481527694 ಸಂಖ್ಯೆಗಳನ್ನು ಸಂಪರ್ಕಿಸಬಹುದು.