Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ನಾಗರಿಕ ಸೇವೆ ಪರೀಕ್ಷೆ ಬಗ್ಗೆ ಜಾಗೃತಿ ಪ್ರವೇಶ ಪರೀಕ್ಷೆ ದಿನಾಂಕ ನಿಗದಿ

ಬೆಳಗಾವಿ:  ಕರ್ನಾಟಕದ ಉತ್ತರ ಭಾಗದಲ್ಲಿ ನಾಗರಿಕ ಸೇವೆ ಪರೀಕ್ಷೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಸಮುತ್ಕರ್ಷದಿಂದ ಪ್ರಸಕ್ತ ವರ್ಷದ ‘ಶ್ರದ್ಧಾ-ಮೇಧಾ’ ಪ್ರಿ-IAS ಫೌಂಡೇಶನ್ ಕೋರ್ಸ್ ಸಂಬಂಧಿತ ಪ್ರವೇಶ ಪರೀಕ್ಷೆಯು ಇದೆ ಜುಲೈ 5 ಮತ್ತು 12 ರಂದು ಬೆಳಗಾವಿ ನಗರದಲ್ಲಿ ಜರುಗಲಿದೆ.

 

ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳ ಪ್ರಾರಂಭಿಕ ಪರಿಚಯದ ತರಗತಿಗಳನ್ನು ನಡೆಸಲಾಗುವುದು. ಈ ಕೋರ್ಸ್ ಮೌಲ್ಯಾಧಾರಿತ ಶಿಕ್ಷಣ, ವ್ಯಕ್ತಿತ್ವ ವಿಕಸನ, ನಾಯಕತ್ವ ಅಭಿವೃದ್ಧಿ ಮತ್ತು ನಾಗರಿಕ ಸೇವೆ-ಆಧಾರಿತ ತರಬೇತಿಯ ಮೂಲಕ ಚಿಕ್ಕ ವಯಸ್ಸಿನಿಂದಲೇ ಆತ್ಮವಿಶ್ವಾಸ, ಶಿಸ್ತು, ಸಂವಹನ ಕೌಶಲ್ಯ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಗುರಿ ಹೊಂದಿದೆ.

ಈ ಪ್ರವೇಶ ಪರೀಕ್ಷೆಗೆ ಬೆಳಗಾವಿ ನಗರದ  6ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.

 

ಕೋರ್ಸ್‌ಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ಜುಲೈ 5 ಮತ್ತು 12 ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:00 ರವರೆಗೆ ನಡೆಸಲಾಗುತ್ತದೆ. ಬೆಳಗಾವಿಯ ಹಿಂದವಾಡಿ ಆದರ್ಶ ನಗರದ ಕೆ.ಎಲ್.ಎಸ್ ಐಎಂಇಆರ್ ಕಾಲೇಜಿನಲ್ಲಿ ಮತ್ತು ಸುಭಾಷನಗರದ ಮರಾಠ ಮಂಡಳ ಪ್ರಿ ಯೂನಿವರ್ಸಿಟಿ ಕಾಲೇಜಿನಲ್ಲಿ  ಪ್ರವೇಶ ಪರೀಕ್ಷೆಗಳು ಜರುಗಲಿವೆ.

ಆಸಕ್ತರು ಹೆಚ್ಚಿನ ಮಾಹಿತಿಗೆ ಹೆಚ್ಚಿನ ಮಾಹಿತಿಗಾಗಿ 9611823047,   95270 21101 9481527694 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇ-ರಿಕ್ಷಾ ಬ್ಯಾಟರಿ ಸ್ಥಗಿತಗೊಳಿಸಬಲ್ಲ ಆ್ಯಪ್‌ಗಳ ತೆರವಿಗೆ ಗೂಗಲ್‌, ಆಪಲ್‌ಗೆ ಕೇಂದ್ರ ಸರ್ಕಾರದ ಸೂಚನೆತೃಣಮೂಲ Vs ತೃಣಮೂಲ ಕದನ ತೀವ್ರ : ಪಕ್ಷದ ಪ್ರಧಾನ ಕಚೇರಿಯನ್ನೇ ತಮ್ಮ ವಶಕ್ಕೆ ತೆಗೆದುಕೊಂಡ ಬಂಡಾಯ ಗುಂಪುನಾಗರಿಕ ಸೇವೆ ಪರೀಕ್ಷೆ ಬಗ್ಗೆ ಜಾಗೃತಿ ಪ್ರವೇಶ ಪರೀಕ್ಷೆ ದಿನಾಂಕ ನಿಗದಿಉಗ್ರರಿಗೆ ಬೆಂಬಲ ನೀಡೋದು ನಿಲ್ಲುವವರೆಗೂ ಸಿಂಧು ಜಲ ಒಪ್ಪಂದ ಅಮಾನತಿನಲ್ಲೇ ಇರಲಿದೆ : ಪಾಕ್‌ಗೆ ಭಾರತದ ಖಡಕ್ ಸಂದೇಶಪಂಜಾಬ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು : ಸಮಸ್ಯೆ ಬಗೆಹರಿಸಲು ಹೈಕಮಾಂಡ್‌ಗೆ ಚನ್ನಿ ಬಣದ ಗಡುವು; ಅಮಿತ್ ಶಾ ಭೇಟಿಯಾದ ರಾಂಧವಾಅದೇ ಮಾತ್ರೆ ; ಅಮೆರಿಕದಲ್ಲಿ ₹85 ಸಾವಿರ…ಭಾರತದಲ್ಲಿ ₹35 ! ‘ನಮ್ಮನ್ನು ದರೋಡೆ ಮಾಡಲಾಗ್ತಿದೆ ಎಂದ ಅಮೆರಿಕ ಮಹಿಳೆಸೋರುತ್ತಿದ್ದ ಗಣಿಕೊಪ್ಪ ಶಾಲೆಗೆ ಹಲವರಿಂದ ದೇಣಿಗೆಸೋರುತ್ತಿದ್ದ ಗಣಿಕೊಪ್ಪ ಶಾಲೆಗೆ ಹಲವರಿಂದ ದೇಣಿಗೆಬೆಳಗಾವಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಪುಂಡಲೀಕ ಚವಾಣ  ಅಧಿಕಾರ ಸ್ವೀಕಾರಬೆಳಗಾವಿಯ ಜಲಪಾತಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ