Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅನೈತಿಕ ಸಂಬಂಧ : ಕೊಲೆಯಲ್ಲಿ ಅಂತ್ಯ

Advertisement

ಬೆಳಗಾವಿ: ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಆಕೆಯ ಪತಿ ಹಾಗೂ ಆತನ ಸ್ನೇಹಿತರು ಸೇರಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಂಕೇಶ್ವರದಲ್ಲಿ ನಡೆದಿದೆ.

ಈ ಕುರಿತು ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಸಂಕೇಶ್ವರ ಪಟ್ಟಣದ ಜನತಾ ಪ್ಲಾಟ್ ನಿವಾಸಿ ಬಾಬು ಭೂಸಗೋಳ (35) ಕೊಲೆಯಾಗಿದ್ದು, ಆರೋಪಿಗಳು ಬಾಬು ಅವರ ತಲೆ ಕಲ್ಲಿನಿಂದ ಜಜ್ಜಿ ಹಾಗೂ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅನೈತಿಕ ಸಂಬಂಧ ಹಾಗೂ ಹಳೆ ದ್ವೇಷ ಹಿನ್ನೆಯಲ್ಲಿ ಬಾಬು ಅವರ ಕೊಲೆಯಾಗಿದೆ ಎಂದರು.

ವರ್ಷಾ (35) ಎಂಬಾಕೆ ತನ್ನ ಗಂಡ ಸುಬ್ಬರಾವ್ ಬಿಟ್ಟು ಹೋಗಿ ಕೊಲೆಯಾದ ಬಾಬು ಜೊತೆ ಸಂಬಂಧ ಹೊಂದಿದ್ದಳು. ಜೊತೆಗೆ ಬಾಬುಗೆ ಸಂಕೇಶ್ವರ ಜನತಾ ಪ್ಲಾಟ್ ಮರಡಿ ಕುಟುಂಬಸ್ಥರ ಜೊತೆ ದಾರಿ ವಿಚಾರವಾಗಿ ಜಗಳವಾಗಿತ್ತು.‌ ವರ್ಷಾ ಪತಿ ಮತ್ತು ಮರಡಿ ಗ್ಯಾಂಗ್ ಸ್ನೇಹಿತರು ಕೂಡ. ಹಾಗಾಗಿ ವರ್ಷಾ ಪತಿ ಹಾಗೂ ಮರಡಿ ಗ್ಯಾಂಗ್ ಸೇರಿಕೊಂಡು ಈ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸಂಕೇಶ್ವರ ಠಾಣೆಯ ಪೊಲೀಸರು ತಕ್ಷಣವೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು. 

ವರ್ಷಾ ಪತಿ ಸುಬ್ಬರಾವ್, ಅಕ್ಷಯ ಮರಡಿ (24), ಪವನ ಮರಡಿ (23), ಅನಿಲ ಮರಡಿ (27) ಸಂದೀಪ ಮರಡಿ (32) ಹಾಗೂ ಮರಡಿ ಕುಟುಂಬದ ಜೊತೆ ಕೆಲಸ ಮಾಡುತ್ತಿದ್ದ ಅಭಿಷೇಕ (23) ಎಂಬಾತ ಸೇರಿ ಕೊಲೆ ಮಾಡಿದ್ದಾರೆ. ಈ ಅಭಿಷೇಕ ಬಾಬು ಕೊಲೆಯಾದ ದಿನ ಬಾಬು ಮೇಲೆ ನಿಗಾ ಇಟ್ಟು ಉಳಿದ ಐದು ಜನ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ.  ಈ ಕೊಲೆಗೆ ಅನೈತಿಕ‌ ಸಂಭಂದ ಕಾರಣವಲ್ಲ ಬದಲಾಗಿ ಈ ಹಿಂದೆಯು ಬಾಬು ಮೇಲೆ ಈ ಮರಡಿ ಗ್ಯಾಂಗ್ ಸಾಕಷ್ಟು ಸಲ ಕೊಲೆಗೆ ಯತ್ನಿಸಿದೆ. ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ಆರೋಪಿಸಲಾಗಿದೆ.‌ ಸದ್ಯ ಎಲ್ಲಾ ಆರೋಪಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮತ್ತೆ ಬೇರೆ ಯಾರಾದರು ಭಾಗಿ ಆಗಿದ್ದಾರಾ ಎನ್ನುವುದು ನೋಡಬೇಕಾಗಿದೆ ಎಂದು  ಅವರು ತಿಳಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವ ಮನಸ್ಸುಗಳಿಗೆ ಹಣಕಾಸಿನ ಅರಿವು’ : ವಿಶೇಷ ಉಪನ್ಯಾಸಅನೈತಿಕ ಸಂಬಂಧ : ಕೊಲೆಯಲ್ಲಿ ಅಂತ್ಯಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಪ್ರತಿಭಾ ಪುರಸ್ಕಾರದಲ್ಲಿ ನಾಗಶ್ರೀ ನಂದಗಾವಿಗೆ ಎಂ.ಕೆ. ನಂಬಿಯಾರ್ ಚಿನ್ನದ ಪದಕಟಿಎಂಸಿ ಆಂತರಿಕ ಕಲಹ ತಾರಕಕ್ಕೆ ; ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ; ನೂತನ ಅಧ್ಯಕ್ಷರ ನೇಮಕ…!ವಾಟ್ಸಾಪ್ ಜಾಗತಿಕ ಮುಖ್ಯಸ್ಥರಾಗಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕಲಕ್ಷ್ಮಣ ಸವದಿ ಡಿಸಿಎಂ ಆಗಿದ್ದವರು. ಕಷ್ಟ ಕಾಲದಲ್ಲಿ ಪಕ್ಷಕ್ಕೆ ಬಂದರು. ಅವರಿಗೆ ಮಾತು ಕೊಟ್ಟಿದ್ದೆವು. ಅವರು ಕೇಳುತ್ತಿದ್ದಾರೆ" ಎಂದ ಸಿಎಂಡಾ.ಪ್ರಭಾಕರ ಕೋರೆಯವರಿಗೆ ಮಂಗಳವಾರ ಪದ್ಮಶ್ರೀ ಪ್ರಶಸ್ತಿ ಪ್ರದಾನಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಿ : ಗಾಣಿಗ ಸಮಾಜದ ಶಾಸಕರಿಗೆ ಸ್ಥಾನಮಾನ ನೀಡಲು ಹಕ್ಕೋತ್ತಾಯ ಮಂಡಿಸಿದ ಗಾಣಿಗ ಸಮಾಜದ ಮುಖಂಡರುಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿ: ಬೆಂಬಲಿಗರ ಪ್ರತಿಭಟನೆಇನ್ನುಂದೆ  ಗೃಹಕಚೇರಿ 'ಕೃಷ್ಣಾ' ದಲ್ಲಿ ಸಿಎಂ ಭೇಟಿ : ಸದಾಶಿವನಗರ ನಿವಾಸಕ್ಕೆ ಬಾರದಂತೆ ಮನವಿ