ಬೆಳಗಾವಿ: ಜಿಲ್ಲೆಯ ಖ್ಯಾತ ಕವಿಗಳಾಗಿರುವ ಕವಿ ಎಸ್ .ಡಿ. ಇಂಚಲ ಮತ್ತು ಕವಿ ಉಳುವೀಶ ಹುಲೆಪ್ಪನವರಮಠ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಕಾವ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.
ಕವಿ ಎಸ್ ಡಿ ಇಂಚಲ ರಾಜ್ಯಪ್ರಶಸ್ತಿಗೆ 2025 ರಲ್ಲಿ ಪ್ರಕಟಗೊಂಡಿರುವ ಯಾವುದೇ ಸ್ವರಚಿತ ಪ್ರೌಢ ಕವನ ಸಂಕಲನವಾಗಿರಬೇಕು. ಅಂತೆಯೆ ಕವಿ ಉಳುವೀಶ ಹುಲೆಪ್ಪನವರಮಠ ರಾಜ್ಯಮಟ್ಟದ ಪ್ರಶಸ್ತಿಗೆ 2025ರಲ್ಲಿ ಪ್ರಕಟಿಕೊಂಡಿರುವ ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟಿರುವ ಸ್ವರಚಿತ ಕವನ ಸಂಕಲನವಾಗಿರಬೇಕು. ಕವನ ಸಂಕಲನಗಳು ಯಾವುದೇ ಸಂಪಾದಿತ ಕೃತಿಗಳಾಗಿರಬಾರದು. ಪ್ರತಿಯೊಂದು ಪ್ರಶಸ್ತಿಗೂ ಮೂರು ಪ್ರತ್ಯೇಕ ಕವನ ಸಂಕಲಗಳನ್ನು ಕಳುಹಿಸಿಕೊಡಬೇಕು. ಕವನ ಕೃತಿ ಕಳುಹಿಸುವ ಕೊನೆಯ ದಿನಾಂಕ ಜೂನ 15, 2026.
ವಿಳಾಸ: ಡಾ. ಮಹೇಶ ಗುರನಗೌಡರ, ಪ್ರಾಧ್ಯಾಪಕರು, ಕನ್ನಡ ವಿಭಾಗ, ಲಿಂಗರಾಜ ಮಹಾವಿದ್ಯಾಲಯ, ತ್ಯಾಗವೀರ ಶಿರಸಂಗಿ ಲಿಂಗರಾಜ ರಸ್ತೆ, ಬೆಳಗಾವಿ, ಮೊಬೈಲ್ ಸಂಖ್ಯೆ 9972053882 ಇವರನ್ನು ಸಂಪರ್ಕಿಸಬಹುದು ಎಂದು ಸಮಿತಿಯ ಅಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
