ಹಿಂಡಾಲ್ಕೋ ಕಂಪನಿಯಲ್ಲಿ ಮುತ್ಯಾನಟ್ಟಿ ಯುವಕ ಆತ್ಮಹತ್ಯೆ..!
ರಾಮಾಚಾರಿಗೆ 5 ಲಕ್ಷ ಕೊಟ್ಟರೂ ಪರ್ಮನೆಂಟ್ ಆಗದಿದ್ದಕ್ಕೆ ಪ್ರಾಣಬಿಟ್ಟ ತಳವಾರ.
ರೊಚ್ಚಿಗೆದ್ದ ಮುತ್ಯಾನಟ್ಟಿ ಮಂದಿ, ಕಂಪನಿ ಮೇಲೆ ದಾಳಿ, ಪುಡಿ ಪುಡಿಯಾದ ಕಚೇರಿ..?
ಬೆಳಗಾವಿ : ನೌಕರಿ ಖಾಯಂ ಗೊಳಿಸುವುದಾಗಿ ಹೇಳಿ ಯುವಕನಿಂದ ಐದು ಲಕ್ಷ ಲಪಟಾಯಿಸಿ, ಕೊನೆಗೆ ಹೆಚ್ಚಿನ ಶಿಕ್ಷಣ ಬೇಕೆಂದು ಹೇಳಿ ಹಣ ಮರಳಿಸದೆ ಯುವಕನಿಗೆ ಮೋಸ ಮಾಡಿದ್ದಕ್ಕಾಗಿ ಮನನೊಂದ ಯುವಕ ಬೆಳಗಾವಿಯ ನಗರದ ಹಿಂಡಾಲ್ಕೋ ಕಂಪನಿಯಲ್ಲಿ ನೇಣು ಬಿಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಂದು ಬೆಳಗಿನ ಜಾವ ನಡೆದಿದೆ.
ಮುತ್ಯಾನಟ್ಟಿ ಗ್ರಾಮದ 31 ವರ್ಷದ ಶಂಕರ ತಳವಾರ ಆತ್ಮಹತ್ಯೆಗೆ ಶರಣಾದ ಯುವಕ.
ಅದೇ ಗ್ರಾಮದ ರಾಮಾಚಾರಿ ಹಾಲಭಾವಿ ಎಂಬಾತ ಯುವಕನಿಗೆ ಮೋಸ ಮಾಡಿರುವ ಆರೋಪಿ.
ಆಗಿದ್ದೇನು..?
ಮುಖ್ಯಾನಟ್ಟಿ ಗ್ರಾಮದ ಶಂಕರ್ ತಳವಾರ ಎನ್ನುವ ಯುವಕ ನಾಲ್ಕು ವರ್ಷದ ಹಿಂದೆ ಹಿಂಡಾಲ್ಕೋ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ. ನಂತರ ಆತನನ್ನು ಅದೇ ಕಂಪನಿಯಲ್ಲಿ ಕಾಯಂಗೊಳಿಸುವುದಾಗಿ ಹೇಳಿ ಮುತ್ಯಾನಟ್ಟಿ ಗ್ರಾಮದ ರಾಮಾಚಾರಿ ಎಂಬ ಏಜೆಂಟ್ 5 ಲಕ್ಷ ಪಡೆದಿದ್ದ ಆದರೆ ಮೂರು ವರ್ಷ ಕಳೆದರೂ ಈತನ ನೌಕರಿ ಕಾಯಂ ಆಗಿರಲಿಲ್ಲ ಅದಕ್ಕಾಗಿ ಈತ ರಾಮಾಚಾರಿಗೆ ನೌಕರಿ ಕಾಯಂಗೊಳಿಸು ಇಲ್ಲ ಹಿಡಿದಿದ್ದ ಹಣ ವಾಪಸ ನೀಡುವಂತೆ ಕೇಳಿಕೊಂಡಿದ್ದ ಆದರೆ ಇದಕ್ಕೆ ರಾಮಾಚಾರಿ ಇಲ್ಲ ಸಲ್ಲದ ನೆಪ ಹೇಳಿ ಹಣ ಮರಳಿಸಲು ನಿರಾಕರಿಸಿದ್ದ. ಇತ್ತ ನೌಕರಿನೂ ಇಲ್ಲ, ಹಣವೂ ವಾಪಸ ಸಿಗದಿದ್ದಕ್ಕೆ ಮನನೊಂದು ಶಂಕರ್ ಇಂದು ಹಿಂಡಾಲ್ಕೋ ಕಂಪನಿಯಲ್ಲಿಯೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.
ಇತ್ತ ಯುವಕ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ತಕ್ಷಣ ಕಂಪನಿಗೆ ಬಂದ ಮುತ್ಯಾನಟ್ಟಿ ಗ್ರಾಮಸ್ಥರು ರೊಚ್ಚಿಗೆದ್ದು ಕಂಪನಿ ಮೇಲೆ ದಾರಿ ನಡೆಸಿದ್ದಾರೆ ಕಚೇರಿಗಳನ್ನು ಒಡೆದು ಧ್ವಂಸ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮಾಳಮಾರುತಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಗೊಳಿಸಿದ್ದಾರೆ.
ಏಜೆಂಟ್ ರಾಮಾಚಾರಿ ನೌಕರಿ ಆಕಾಂಕ್ಷಿಗಳಾದ ಶಂಕರನಂತಹ ಹತ್ತಾರು ಯುವಕರಿಂದ ನೌಕರಿ ಖಾಯಂಗೊಳಿಸುವುದಾಗಿ ಹೇಳಿ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣವನ್ನು ವಸೂಲಿ ಮಾಡಿರುವುದಾಗಿ ತಿಳಿದು ಬಂದಿದೆ.
