Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಿಂಡಾಲ್ಕೋ ಕಂಪನಿಯಲ್ಲಿ ಮುತ್ಯಾನಟ್ಟಿ ಯುವಕ ಆತ್ಮಹತ್ಯೆ..!

ರಾಮಾಚಾರಿಗೆ 5 ಲಕ್ಷ ಕೊಟ್ಟರೂ ಪರ್ಮನೆಂಟ್ ಆಗದಿದ್ದಕ್ಕೆ ಪ್ರಾಣಬಿಟ್ಟ ತಳವಾರ.

Advertisement

ಹಿಂಡಾಲ್ಕೋ ಕಂಪನಿಯಲ್ಲಿ ಮುತ್ಯಾನಟ್ಟಿ ಯುವಕ ಆತ್ಮಹತ್ಯೆ..!

ರಾಮಾಚಾರಿಗೆ 5 ಲಕ್ಷ ಕೊಟ್ಟರೂ ಪರ್ಮನೆಂಟ್ ಆಗದಿದ್ದಕ್ಕೆ ಪ್ರಾಣಬಿಟ್ಟ ತಳವಾರ.

 

ರೊಚ್ಚಿಗೆದ್ದ ಮುತ್ಯಾನಟ್ಟಿ ಮಂದಿ, ಕಂಪನಿ ಮೇಲೆ ದಾಳಿ,  ಪುಡಿ ಪುಡಿಯಾದ ಕಚೇರಿ..?

ಬೆಳಗಾವಿ : ನೌಕರಿ ಖಾಯಂ ಗೊಳಿಸುವುದಾಗಿ ಹೇಳಿ ಯುವಕನಿಂದ ಐದು ಲಕ್ಷ ಲಪಟಾಯಿಸಿ, ಕೊನೆಗೆ ಹೆಚ್ಚಿನ ಶಿಕ್ಷಣ ಬೇಕೆಂದು ಹೇಳಿ ಹಣ ಮರಳಿಸದೆ ಯುವಕನಿಗೆ ಮೋಸ ಮಾಡಿದ್ದಕ್ಕಾಗಿ ಮನನೊಂದ ಯುವಕ ಬೆಳಗಾವಿಯ ನಗರದ ಹಿಂಡಾಲ್ಕೋ ಕಂಪನಿಯಲ್ಲಿ  ನೇಣು ಬಿಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಂದು ಬೆಳಗಿನ ಜಾವ ನಡೆದಿದೆ.

ಮುತ್ಯಾನಟ್ಟಿ ಗ್ರಾಮದ 31 ವರ್ಷದ ಶಂಕರ ತಳವಾರ ಆತ್ಮಹತ್ಯೆಗೆ ಶರಣಾದ ಯುವಕ.

ಅದೇ ಗ್ರಾಮದ ರಾಮಾಚಾರಿ ಹಾಲಭಾವಿ ಎಂಬಾತ ಯುವಕನಿಗೆ ಮೋಸ ಮಾಡಿರುವ ಆರೋಪಿ. 

ಆಗಿದ್ದೇನು..?

ಮುಖ್ಯಾನಟ್ಟಿ ಗ್ರಾಮದ ಶಂಕರ್ ತಳವಾರ ಎನ್ನುವ ಯುವಕ ನಾಲ್ಕು ವರ್ಷದ ಹಿಂದೆ ಹಿಂಡಾಲ್ಕೋ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ. ನಂತರ ಆತನನ್ನು ಅದೇ ಕಂಪನಿಯಲ್ಲಿ ಕಾಯಂಗೊಳಿಸುವುದಾಗಿ ಹೇಳಿ ಮುತ್ಯಾನಟ್ಟಿ ಗ್ರಾಮದ ರಾಮಾಚಾರಿ ಎಂಬ ಏಜೆಂಟ್ 5 ಲಕ್ಷ ಪಡೆದಿದ್ದ ಆದರೆ ಮೂರು ವರ್ಷ ಕಳೆದರೂ ಈತನ ನೌಕರಿ ಕಾಯಂ ಆಗಿರಲಿಲ್ಲ ಅದಕ್ಕಾಗಿ ಈತ ರಾಮಾಚಾರಿಗೆ ನೌಕರಿ ಕಾಯಂಗೊಳಿಸು ಇಲ್ಲ ಹಿಡಿದಿದ್ದ ಹಣ ವಾಪಸ ನೀಡುವಂತೆ ಕೇಳಿಕೊಂಡಿದ್ದ ಆದರೆ ಇದಕ್ಕೆ ರಾಮಾಚಾರಿ ಇಲ್ಲ ಸಲ್ಲದ ನೆಪ ಹೇಳಿ ಹಣ ಮರಳಿಸಲು ನಿರಾಕರಿಸಿದ್ದ. ಇತ್ತ ನೌಕರಿನೂ ಇಲ್ಲ, ಹಣವೂ ವಾಪಸ ಸಿಗದಿದ್ದಕ್ಕೆ ಮನನೊಂದು ಶಂಕರ್ ಇಂದು ಹಿಂಡಾಲ್ಕೋ ಕಂಪನಿಯಲ್ಲಿಯೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ಇತ್ತ ಯುವಕ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ತಕ್ಷಣ ಕಂಪನಿಗೆ ಬಂದ ಮುತ್ಯಾನಟ್ಟಿ ಗ್ರಾಮಸ್ಥರು ರೊಚ್ಚಿಗೆದ್ದು ಕಂಪನಿ ಮೇಲೆ ದಾರಿ ನಡೆಸಿದ್ದಾರೆ ಕಚೇರಿಗಳನ್ನು ಒಡೆದು ಧ್ವಂಸ ಮಾಡಿದ್ದಾರೆ. 

ವಿಷಯ ತಿಳಿಯುತ್ತಿದ್ದಂತೆ ಮಾಳಮಾರುತಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಗೊಳಿಸಿದ್ದಾರೆ. 

ಏಜೆಂಟ್ ರಾಮಾಚಾರಿ ನೌಕರಿ ಆಕಾಂಕ್ಷಿಗಳಾದ ಶಂಕರನಂತಹ ಹತ್ತಾರು ಯುವಕರಿಂದ ನೌಕರಿ ಖಾಯಂಗೊಳಿಸುವುದಾಗಿ ಹೇಳಿ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣವನ್ನು ವಸೂಲಿ ಮಾಡಿರುವುದಾಗಿ ತಿಳಿದು ಬಂದಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿಂಡಾಲ್ಕೋ ಕಂಪನಿಯಲ್ಲಿ ಮುತ್ಯಾನಟ್ಟಿ ಯುವಕ ಆತ್ಮಹತ್ಯೆ..!ಸಚಿವ ಸತೀಶ ಜಾರಕಿಹೊಳಿ ಸಹೋದರಿಯ ಪತಿಗೆ ಬಿಗ್ ಶಾಕ್ ನೀಡಿದ EDಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಭಾರಿ ಮಳೆ ಮುನ್ಸೂಚನೆ ; ಆರೆಂಜ್ ಅಲರ್ಟ್ ಘೋಷಣೆಪ್ರಭಾವಿ ಸಚಿವ ಸತೀಶ ಜಾರಕಿಹೊಳಿ ಅಳಿಯನಿಗೆ ಬಿಗ್ ಶಾಕ್ ನೀಡಿದ EDಯುವ ಮನಸ್ಸುಗಳಿಗೆ ಹಣಕಾಸಿನ ಅರಿವು’ : ವಿಶೇಷ ಉಪನ್ಯಾಸಅನೈತಿಕ ಸಂಬಂಧ : ಕೊಲೆಯಲ್ಲಿ ಅಂತ್ಯಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಪ್ರತಿಭಾ ಪುರಸ್ಕಾರದಲ್ಲಿ ನಾಗಶ್ರೀ ನಂದಗಾವಿಗೆ ಎಂ.ಕೆ. ನಂಬಿಯಾರ್ ಚಿನ್ನದ ಪದಕಟಿಎಂಸಿ ಆಂತರಿಕ ಕಲಹ ತಾರಕಕ್ಕೆ ; ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ; ನೂತನ ಅಧ್ಯಕ್ಷರ ನೇಮಕ…!ವಾಟ್ಸಾಪ್ ಜಾಗತಿಕ ಮುಖ್ಯಸ್ಥರಾಗಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕಲಕ್ಷ್ಮಣ ಸವದಿ ಡಿಸಿಎಂ ಆಗಿದ್ದವರು. ಕಷ್ಟ ಕಾಲದಲ್ಲಿ ಪಕ್ಷಕ್ಕೆ ಬಂದರು. ಅವರಿಗೆ ಮಾತು ಕೊಟ್ಟಿದ್ದೆವು. ಅವರು ಕೇಳುತ್ತಿದ್ದಾರೆ" ಎಂದ ಸಿಎಂ