Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

2026 ಕ್ಕೆ ಅಗಸಗಿ ಲಕ್ಷ್ಮೀ ದೇವಿ ಜಾತ್ರೆ; ಕೋಣ- ಮೇಕೆ ಬಿಟ್ಟು ಜಾತ್ರೆಗೆ ಅದ್ದೂರಿ ಸಿದ್ಧತೆ..!

2026 ಕ್ಕೆ ಅಗಸಗಿ ಲಕ್ಷ್ಮೀ ದೇವಿ ಜಾತ್ರೆ ..?

ಕೋಣ- ಮೇಕೆ ಬಿಟ್ಟು ಜಾತ್ರೆಗೆ ಅದ್ದೂರಿ ಸಿದ್ದತೆ..!

ದಲಿತರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಕೋಣ- ಮೇಕೆ ಬಿಡುವ ಕಾರ್ಯಕ್ರಮ..!

ಬೆಳಗಾವಿ: ಅಗಸಗಿ ಗ್ರಾಮದೇವಿ ಶ್ರೀ ಲಕ್ಷ್ಮೀದೇವಿ ಜಾತ್ರೆಯ ಕೋಣ ಹಾಗೂ ಗಂಡು ಮೇಕೆ ಬಿಡುವ ಕಾರ್ಯಕ್ರಮ ನಿನ್ನೆ ಅದ್ದೂರಿಯಾಗಿ ನಡೆಯಿತು.

ನಿಗದಿಪಡಿಸಿದಂತೆ 11ವರ್ಷಕ್ಕೆ ಆಗಬೇಕಿದ್ದ ಜಾತ್ರೆ ನಾನಾ ಕಾರಣಾಂತರಗಳಿಂದ 7 ವರ್ಷ ತಡವಾಗಿತ್ತು. ಈಗ ಬಹುಪಾಲು ಜನರ ಆಶಯದಂತೆ ಬಹುಶಃ ಮುಂದಿನ ವರ್ಷ ಜಾತ್ರೆಯಾಗಿ 18 ವರ್ಷಗಳು ಪೂರೈಸುವ ಮುನ್ನ ಲಕ್ಷ್ಮಿ ದೇವಿ ಜಾತ್ರೆ ಮಾಡುವುದಾಗಿ ಗ್ರಾಮದ ಎಲ್ಲ ಸಮುದಾಯದವರು ಒಕ್ಕೂರೊಲಿನಿಂದ ಒಪ್ಪಂದಕ್ಕೆ ಬಂದರು. ನಿನ್ನೆ (ಮಂಗಳವಾರ) ಜಾತ್ರೆಯ ಪೂರ್ವ ಸಿದ್ದತೆ ನಿಯಮವಾಗಿ ಕೋಣ ಹಾಗೂ ಗಂಡು ಮೇಕೆ ಬಿಟ್ಟು ತಯಾರಿಗೆ ಸಜ್ಜಾದರು.

ನಿಯಮದಂತೆ ದಲಿತ ಸಮುದಾಯದ ಎಲ್ಲ ಜನ ಉತ್ಸಾಹ ಮತ್ತು ಹುರುಪಿನಿಂದ ಬಂದು ತಮ್ಮ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೆ ಎಲ್ಲ ಸಮುದಾಯದ ಜನ ಇಮ್ಮಡಿ ಉತ್ಸಾಹ ತೋರಿಸಿದರು.

[video width="848" height="478" mp4="https://janajeevala.com/wp-content/uploads/2025/04/VID-20250409-WA0083.mp4"][/video]

ಊರೆಲ್ಲ ಮೆರವಣಿಗೆ, ಭಂಡಾರಮಯವಾದ ಗ್ರಾಮ..!

ಕೋಣ-ಮೇಕೆ ಬಿಡುವಾಗ ಅವುಗಳನ್ನು ಊರೆಲ್ಲ ತಿರುಗಿಸಿ ಭಂಡಾರ ಹಚ್ಚುವ ಸಂಪ್ರದಾಯ. ಆದರೆ ಮುಂದಿನ ವರ್ಷದ ಜಾತ್ರೆಯ ಉತ್ಸಾಹಲ್ಲಿರುವ ಭಕ್ತರು ನಿನ್ನೆ ಸಂಪೂರ್ಣ ಗ್ರಾಮವನ್ನು ಭಂಡಾರದ ಬಣ್ಣಕ್ಕೆ ತಿರುಗಿಸಿದರು. ನೂರಾರು ಭಂಡಾರ ಚೀಲಗಳನ್ನು ತಂದ ಅಗಸಗಿ ಹಾಗೂ ಚಲವೇನಟ್ಟಿ ಗ್ರಾಮದ ಹಿರಿಯರು, ವಯಸ್ಕರು, ಮಹಿಳೆಯರು, ಮಕ್ಕಳು ಸೇರಿ ಎಲ್ಲರು ಭಂಡಾರು ಹಾರಿಸುತ್ತ ಡೋಳ್ಳು ಹಾಗೂ ಸಂಗೀತ ವಾದ್ಯಗಳಿಗೆ ಸಾಂಪ್ರದಾಯಿಕ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪ್ರಮುಖ ಗಲ್ಲಿಗಳಲ್ಲಿ ಮೆರವಣಿಗೆ ಮಾಡಲಾಯಿತು.

[video width="848" height="478" mp4="https://janajeevala.com/wp-content/uploads/2025/04/VID-20250409-WA0082.mp4"][/video]

ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಕಲಗೌಡ ಪಾಟೀಲ, ಗೌಡಪ್ಪ ಪಾಟೀಲ, ಬಸನಗೌಡ ಪಾಟೀಲ, ಸಿದ್ದಲಿಂಗ ಮುದ್ದಣ್ಣವರ ಹಾಗೂ ಬಡಿಗೇರ, ಮೇತ್ರಿ, ಕೊಲಕಾರ, ಕಾಂಬಳೆ ಮತ್ತು ಸುಣಗಾರ ಮನೆತನದವರು ನೇತೃತ್ವ ವಹಿಸಿದ್ದರು. ಗ್ರಾ ಪಂ ಅಧ್ಯಕ್ಷ ಅಮೃತ ಮುದ್ದಣ್ಣವರ, ಸದಸ್ಯರಾದ ಅಪ್ಪಯ್ಯಗೌಡ ಪಾಟೀಲ, ಬೈರು ಕಂಗ್ರಾಳಕರ, ಗುಂಡು ಕುರಿ, ಲಗಮಾ ಸನದಿ ಸೇರಿ ಎಲ್ಲ ಸದಸ್ಯರು ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, PKPS ಗೌಡಪ್ಪಾ ರುದ್ರಗೌಡ ಪಾಟೀಲ, ಮುಖಂಡರಾದ ಲಕ್ಷ್ಮಣ ಕಂಗ್ರಾಳಕರ, ಪರಶರಾಮ ಮೇತ್ರಿ, ಅಪ್ಪಯ್ಯಾ ಕೋಲಕಾರ, ವಿಲಾಸ ಪಾಟೀಲ, ರಾಹುಲ್ ಜಾಧವ, ವಿಠ್ಠಲ ಕೊಳಿ, ಜ್ಯೋತಿಭಾ ಘೇವಡಿ, ಕೆಂಪಣ್ಣಾ ಚುನಾರಿ, ಸಂತೋಷ ಲಾಡ, ನಂದು ಚಲವೇಟಕರ, ರಾಹುಲ ರೇಡೆಕರ ಸೇರಿದಂತೆ ಅಗಸಗಿ ಹಾಗೂ ಚಲವೆನಟ್ಟಿ ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡು ಅದ್ದೂರಿಯಾಗಿ ಮುಂದಿನ ವರ್ಷದ ಜಾತ್ರಾ ಸಿದ್ದತೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ