ಖಾನಾಪುರ : ನಗರದ ದುರ್ಗಾನಗರದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸಾಯಿಬಾಬಾ ದೇವಸ್ಥಾನದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಸಮಾರಂಭ ಅಪಾರ ಭಕ್ತಿ, ಶ್ರದ್ಧೆ ಮತ್ತು ಉತ್ಸಾಹದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಶಾಸಕ ವಿಠ್ಠಲ ಹಲಗೇಕರ ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರ ಏಕತೆ, ಭಕ್ತಿ ಮತ್ತು ಸೇವಾಭಾವವನ್ನು ಶ್ಲಾಘಿಸಿದರು.
ಶ್ರೀ ಸಾಯಿಬಾಬಾ ದೇವಸ್ಥಾನ ಈ ಪ್ರದೇಶದ ಜನರಿಗೆ ಶಾಂತಿ, ಭಕ್ತಿ ಹಾಗೂ ಸೌಹಾರ್ದತೆಯ ಕೇಂದ್ರವಾಗಲಿದೆ ಎಂದು ಹೇಳಿದರು.
ಅಮೃತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡರಾದ ಪ್ರಮೋದ ಕೋಚೇರಿ, ಸಂಜಯ ಕುಬಲ್, ಬಾಬುರಾವ್ ದೇಸಾಯಿ, ಗುಂಡು ತೋಪಿನಕಟ್ಟಿ, ಭರಮಾಣಿ ಪಾಟೀಲ,ಬಸವರಾಜ ಸಾಣಿಕೊಪ್ಪ, ಶ್ರೀಕಾಂತ ಇಟಗಿ, ಸುನೀಲ ಮಡ್ಡಿಮನಿ, ರಾಜು ರಾಯ್ಕಾ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆದ ಈ ಧಾರ್ಮಿಕ ಮಹೋತ್ಸವದಲ್ಲಿ ಮಂಗಳವಾರ ಭವ್ಯ ಮೆರವಣಿಗೆ, ಬುಧವಾರ ಹೋಮ-ಹವನ ಹಾಗೂ ವಿವಿಧ ಪೂಜಾ ವಿಧಿವಿಧಾನಗಳು, ಗುರುವಾರ ಬೆಳಿಗ್ಗೆ ಕಳಶಾರೋಹಣ ಮತ್ತು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನೆರವೇರಿದವು.
