Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೊಸ ರಾಜಕೀಯ ಪಕ್ಷ ಘೋಷಿಸಿದ ಕವಿತಾ: ಬಿಆರ್‌ಎಸ್ ತೊರೆದು ಟಿಆರ್‌ಎಸ್’ ಪಕ್ಷ ಸ್ಥಾಪನೆ

ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರ ಪುತ್ರಿ ಕಲ್ವಕುಂಟ್ಲ ಕವಿತಾ ಅವರು ತಮ್ಮ ತಂದೆಯ ನೇತೃತ್ವದ ಭಾರತ ರಾಷ್ಟ್ರ ಸಮಿತಿ (BRS)ಪಕ್ಷದಿಂದ ಅಧಿಕೃತವಾಗಿ ಹೊರಬಂದು, ‘ತೆಲಂಗಾಣ ರಾಷ್ಟ್ರ ಸೇನಾ’ (TRS) ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ.

ಮೇಡ್ಚಲ್ ಜಿಲ್ಲೆಯ ಮುನಿರಾಬಾದ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಹಸ್ರಾರು ಬೆಂಬಲಿಗರ ಸಮ್ಮುಖದಲ್ಲಿ ಕವಿತಾ ಅವರು ಪಕ್ಷದ ಹೆಸರು, ಧ್ವಜ ಮತ್ತು ಕಾರ್ಯಸೂಚಿಯನ್ನು ಅನಾವರಣಗೊಳಿಸಿದರು.

ತೆಲಂಗಾಣದ ಅಸ್ಮಿತೆ ಮತ್ತು ಹೋರಾಟದ ಸಂಕೇತವಾಗಿದ್ದ ‘ಟಿಆರ್‌ಎಸ್’ (TRS) ಹೆಸರನ್ನೇ ಕವಿತಾ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಕೆಸಿಆರ್ ಅವರು ‘ತೆಲಂಗಾಣ ರಾಷ್ಟ್ರ ಸಮಿತಿ’ಯನ್ನು ‘ಭಾರತ ರಾಷ್ಟ್ರ ಸಮಿತಿ’ (BRS) ಎಂದು ಬದಲಿಸಿದ್ದರು. ಈಗ ಕವಿತಾ ಅದೇ ಹೆಸರನ್ನು (ಸೇನಾ ಎಂದು ಬದಲಿಸಿ) ಮರಳಿ ಪಡೆದಿದ್ದಾರೆ.

ಬೃಹತ್ ಸಮಾವೇಶ:

ತೆಲಂಗಾಣದ 33 ಜಿಲ್ಲೆಗಳಿಂದ ಸುಮಾರು 50,000ಕ್ಕೂ ಹೆಚ್ಚು ಬೆಂಬಲಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತೆಲಂಗಾಣ ಚಳವಳಿಯ ಪ್ರಮುಖ ವ್ಯಕ್ತಿ ಪ್ರೊ. ಕೆ. ಜಯಶಂಕರ ಅವರ ಹೆಸರಿಡಲಾದ 20 ಎಕರೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಿತು.

ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಅಮಾನತುಗೊಂಡಿದ್ದ ಕವಿತಾ, ಸೆಪ್ಟೆಂಬರ್ 3, 2025 ರಂದು ಬಿಆರ್‌ಎಸ್ ಮತ್ತು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಈಗ ತಂದೆ ಕೆಸಿಆರ್ ಮತ್ತು ಸಹೋದರ ಕೆಟಿ ರಾಮರಾವ್‌ ಜೊತೆಗಿನ ಅವರ ರಾಜಕೀಯ ಸಂಬಂಧ ಸಂಪೂರ್ಣವಾಗಿ ಕಡಿದುಹೋದಂತಿದೆ.

ಕವಿತಾ ವಾದವೇನು?

“ತೆಲಂಗಾಣದ ಪ್ರಾದೇಶಿಕ ಗುರಿಗಳನ್ನು ಈಡೇರಿಸಲು ಟಿಆರ್‌ಎಸ್ ಸ್ಥಾಪನೆಯಾಗಿತ್ತು. ಆದರೆ ಕೆಸಿಆರ್ ಅವರು ರಾಷ್ಟ್ರೀಯ ರಾಜಕೀಯದ ಆಸೆಯಿಂದ ಪಕ್ಷದ ಹೆಸರು ಬದಲಿಸಿ ಜನರೊಂದಿಗಿನ ಸಂಬಂಧವನ್ನು ಕಳೆದುಕೊಂಡರು ಎಂದು ಕವಿತಾ ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ಎರಡೂ ಪಕ್ಷಗಳು ರಾಜ್ಯದ ನೀರು, ಉದ್ಯೋಗ ಮತ್ತು ಸಂಪನ್ಮೂಲಗಳ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂದು ಅವರು ಆರೋಪಿಸಿದ್ದಾರೆ.

ಮುಂದಿನ ಹಾದಿ:

48 ವರ್ಷದ ಕವಿತಾ ಅವರು ಯುವಕರು, ಮಹಿಳೆಯರು ಮತ್ತು ರೈತರನ್ನು ಕೇಂದ್ರೀಕರಿಸಿ ರಾಜಕೀಯ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ. 2029ರ ವಿಧಾನಸಭಾ ಚುನಾವಣೆಗೆ ಸಾಕಷ್ಟು ಸಮಯವಿರುವುದರಿಂದ, ಈ ಹೊಸ ‘ಟಿಆರ್‌ಎಸ್’ ಪಕ್ಷವು ತೆಲಂಗಾಣ ರಾಜಕೀಯದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತದೆಯೇ ಅಥವಾ ಕೇವಲ ಒಂದು ಸಣ್ಣ ಗುಂಪಾಗಿ ಉಳಿಯುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
DDPI ಲೀಲಾವತಿ ಹಿರೇಮಠ ಅವರಿಗೆ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದಿಂದ ಆತ್ಮೀಯ ಸನ್ಮಾನಹೊಸ ರಾಜಕೀಯ ಪಕ್ಷ ಘೋಷಿಸಿದ ಕವಿತಾ: ಬಿಆರ್‌ಎಸ್ ತೊರೆದು ಟಿಆರ್‌ಎಸ್’ ಪಕ್ಷ ಸ್ಥಾಪನೆಎಎಪಿ ಬಂಡಾಯದ ಒಳನೋಟ : ಸಂಸದರ ಸಾಮೂಹಿಕ ಪಕ್ಷಾಂತರಕ್ಕೆ ರಾಘವ ಚಡ್ಡಾ ಸ್ಕೆಚ್ ಹಾಕಿದ್ದು ಹೇಗೆ ?ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವುಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದ ಪ್ರಕರಣ ; ಕಾಲೇಜಿನ ಮೂವರು ಅಮಾನತುಸಚಿವ ಸುಧಾಕರ ಆರೋಗ್ಯ ಸ್ಥಿತಿ ಗಂಭೀರಸಚಿವ ಸುಧಾಕರ ಆರೋಗ್ಯ ಸ್ಥಿತಿ ಗಂಭೀರಕೊಹ್ಲಿ, ಪಡಿಕ್ಕಲ್ ಅಬ್ಬರ : ತವರಲ್ಲಿ ಗೆದ್ದು ಬೀಗದ ಅರ್‌ಸಿಬಿ ಶಾಸಕರ ಎದುರೇ ಮೃತ್ಯು : ಗೃಹಪ್ರವೇಶದಲ್ಲಿ ಭಾಗಿಯಾಗಿದ್ದ ವೇಳೆ ಲಕ್ಷ್ಮಣ ಸವದಿ ಆಪ್ತನಿಗೆ ಬಂದೆರಗಿದ ಸಾವುಶಾಸಕರ ಎದುರೇ ಮೃತ್ಯು : ಗೃಹಪ್ರವೇಶದಲ್ಲಿ ಭಾಗಿಯಾಗಿದ್ದ ವೇಳೆ ಲಕ್ಷ್ಮಣ ಸವದಿ ಆಪ್ತನಿಗೆ ಬಂದೆರಗಿದ ಸಾವು