ಕೊಲ್ಲಾಪುರ : ಇಲ್ಲಿನ ನಿವಾಸಿ ಮಧುಕರರಾವ್ ಬಲವಂತರಾವ್ ನಿಂಬಾಳ್ಕರ್ (87 ವರ್ಷ) ಸೋಮವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.ಮೃತರು ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ತಂದೆ. ಖಾನಾಪುರದ ಮಾಜಿ ಶಾಸಕಿ ಮತ್ತು ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರು ತಮ್ಮ ಮಾವನವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಮಧುಕರರಾವ್ ಬಲವಂತರಾವ್ ನಿಂಬಾಳ್ಕರ್
ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕೊಲ್ಲಾಪುರದ ಪಂಚಗಂಗೆಯ ದಡದಲ್ಲಿರುವ ಶಿವಾಜಿ ಪೂಲ್ನ ವೈಕುಂಠಭೂಮಿಯಲ್ಲಿ ನೆರವೇರಿಸಲಾಗುವುದು.