ಬೆಳಗಾವಿ : ಕಳೆದ ಕೆಲ ದಿನಗಳಿಂದ ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಜೂನ್ ಮಳೆಯ ಪ್ರಮಾಣ ತೀರಾ ಕಡಿಮೆ ಇತ್ತು. ಆದರೆ ಇದೀಗ ವರುಣನ ಆರ್ಭಟ ಮತ್ತೆ ಆರಂಭವಾಗಿದೆ.
ಖಾನಾಪುರ ತಾಲೂನ ಅರಣ್ಯ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತದೆ. ಶುಕ್ರವಾರ ಬೆಳಿಗ್ಗೆಯಿಂದ ಹಬ್ಬನಹಟ್ಟಿಯ ಆಂಜನೇಯ ದೇವಾಲಯ ಮಲಪ್ರಭಾ ನದಿಯಲ್ಲಿ ಜಲಾವೃತಗೊಂಡಿದೆ. ಜೋರಾಗಿ ಮಳೆಯಾದರೆ ಈ ದೇವಸ್ಥಾನ ಮುಳುಗುತ್ತದೆ. ಈಗ ಮತ್ತೆ ಮುಳುಗಿದೆ.
ಕಣಕುಂಬಿ ಹಾಗೂ ಪಾರವಾಡ ಭಾಗದಲ್ಲಿ ಶುಕ್ರವಾರ 13 ಸೆಂ.ಮೀ ಮಳೆಯಾಗಿದ್ದು ಈ ಭಾಗದಲ್ಲಿ ಹುಟ್ಟಿ ಹರಿಯುವ ಮಲಪ್ರಭಾ ನದಿಗೆ ಜೀವಕಳೆ ಬಂದಿದೆ.
ಮಳೆ ಆರ್ಭಟಕ್ಕೆ ಪಟ್ಟಣದ ಹೊರವಲಯದ ರುಮೇವಾಡಿ ವೃತ್ತದಲ್ಲಿ ಮಳೆಯ ನೀರು ರಸ್ತೆ ಪಕ್ಕದ ವಾಣಿಜ್ಯ ಮಳಿಗೆಗಳು ಮತ್ತು ಮನೆಗಳಲ್ಲಿ ನುಗ್ಗಿದೆ.