ಬೆಳಗಾವಿ : ಗಣಿಕೊಪ್ಪ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸುಮಾರು 111 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಶಾಲೆಯ ಮೇಲ್ಛಾವಣೆ ಭಾರಿ ಮಳೆಯಿಂದಾಗಿ ಸೋರುತ್ತಿತ್ತು. ಇದರಿಂದಾಗಿ ಮಕ್ಕಳಿಗೆ ಮಧ್ಯಾಹ್ನ ಭೋಜನ ಕುಳಿತುಕೊಳ್ಳಲು ಕಷ್ಟವಾಗುತ್ತಿದ್ದು ಭೋಜನಾಲಯ ಶೆಡ್ ನಿರ್ಮಿಸುವ ಕಾರ್ಯಕ್ಕೆ ಗುರುವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ ವತಿಯಿಂದ ರೂ. 30000/- ಹಾಗೂ ಶಿಕ್ಷಣ ಪ್ರೇಮಿ ಡಾ. ನಾರಾಯಣ ನಾಯ್ಕ ರೂ. 20000/- , ಆನಂದ ರಾವ್ ರೂ. 10000/- , ಕನಸು ಟ್ರಸ್ಟ್ ಬೆಳಗಾವಿ ರೂ. 10000/- , ಅಶೋಕ ಹಲಗಲಿ ರೂ. 20000/-, ಬೀನಾ ಆಚಾರ್ ರೂ. 15000/-
ದೇಣಿಗೆ ನೀಡಿದ್ದಾರೆ. ಎಲ್ಲ ಸಹೃದಯಗಳಿಗೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದು, ಮತ್ತೆ ಯಾರಾದರೂ ದಾನಿಗಳು ಸಹಾಯ ಮಾಡುವರಿದ್ದರೆ ದಯವಿಟ್ಟು ಈ ಮೊಬೈಲ್ 9845942535 ನಂಬರ್ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.