ಬೆಳಗಾವಿ : ಬೆಳಗಾವಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಪುಂಡಲೀಕ ಚವಾಣ ಅಧಿಕಾರ ಸ್ವೀಕರಿಸಿದರು.
ನೂತನ ಬಿಇಒ ಮಾತನಾಡಿ , ಬೆಳಗಾವಿ ಗ್ರಾಮೀಣ ವಲಯ ಜಿಲ್ಲೆಯಲ್ಲಿ ಅತ್ಯಂತ ವಿಸ್ತಾರವಾದ ವಲಯ. ಭಾಷಾ ವೈವಿಧ್ಯತೆಯಿಂದ ಕೂಡಿದೆ. ಅತಿ ಹೆಚ್ಚಿನ ಶಿಕ್ಷಕರನ್ನು ಹೊಂದಿದ್ದು ಶೈಕ್ಷಣಿಕವಾಗಿ ಬದಲಾವಣೆ ತರಲು ಎಲ್ಲರ ಸಹಾಯ ಸಹಕಾರದೊಂದಿಗೆ ಶ್ರಮಿಸುವೆ ಎಂದರು.
ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಪುಂಡಲೀಕ ಚವಾಣ ಮಾತನಾಡಿ, ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಮತ್ತು ಶಿಕ್ಷಣ ಇಲಾಖೆಯ ವಿವಿಧ ಹಂತಗಳಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವವಿದೆ. ಸಿಬ್ಬಂದಿಗಳು ಈ ಕ್ಷೇತ್ರದ ಶಿಕ್ಷಣಕ್ಕೆ ಶ್ರಮಿಸೋಣ ಎಂದು ತಿಳಿಸಿದರು.
ಡಯಟ್ ಅಧಿಕಾರಿಗಳಾಗಿ ಸಲೀಮ ನದಾಫ,ಕಲ್ಮೇಶ ಸುಣದೋಳಿ, ಎಂ. ಎಸ್. ಮೇದಾರ, ಶ್ರೀದೇವಿ ನಾಗನೂರ, ರಾಜಶೇಖರ ಚಳಗೇರಿ, ಭೂಷಣ ಪತ್ತಾರ, ಸತೀಶ ರಣದೋರೆ, ಸಾಧನಾ ಬದ್ರಿ, ಅಶೋಕ ಖೋತ, ಕ್ಷೇತ್ರ ಸಮನ್ವಯಾಧಿಕಾರಿ ಅಧಿಕಾರಿ ದಾನಮ್ಮ ಜಳಕಿ, ಚಂದ್ರು ಕೋಲಕಾರ ಸೇರಿದಂತೆ ವಿವಿಧ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಮತ್ತು ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.