ಖಾನಾಪುರ: ಪಟ್ಟಣದ ಸಮಾದೇವಿ ಗಲ್ಲಿಯ ನಿವಾಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮಾವ (ಪತಿಯ ತಂದೆ) ಗುರುಸಿದ್ಧಪ್ಪ ಸಿದ್ಧಪ್ಪ ಹೆಬ್ಬಾಳಕರ (95) ಬುಧವಾರ ನಿಧನರಾದರು. ಅರಣ್ಯ ಗುತ್ತಿಗೆದಾರರಾಗಿದ್ದ ಮೃತರು ಸ್ಥಳೀಯ ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಹಾಗೂ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರಿಗೆ ಸಚಿವೆ ಲಕ್ಷ್ಮೀ ಅವರ ಪತಿ ರವೀಂದ್ರ ಹೆಬ್ಬಾಳಕರ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ.
ತಾಲ್ಲೂಕಿನ ಜನರಿಗೆ ಜಿ.ಎಸ್ ಹೆಬ್ಬಾಳಕರ ಎಂದೇ ಚಿರಪರಿಚಿತರಾಗಿದ್ದ ಗುರುಸಿದ್ಧಪ್ಪ ಅವರ ನಿಧನಕ್ಕೆ ಸ್ಥಳೀಯ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅರವಿಂದ ಪಾಟೀಲ, ಪ.ಪಂ ಅಧ್ಯಕ್ಷೆ ಮೀನಾಕ್ಷಿ ಬೈಲೂರಕರ, ಸ್ಥಾಯಿ ಸಮಿತಿಯ ಅಧ್ಯಕ್ಷ ಅಪ್ಪಯ್ಯ ಕೋಡೊಳಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಹಾಂತೇಶ ರಾಹೂತ ಸೇರಿದಂತೆ ತಾಲ್ಲೂಕಿನ ಗಣ್ಯರು ಕಂಬನಿ ಮಿಡಿದಿದ್ದಾರೆ.