ಬೆಳಗಾವಿ: ಮೂಲ್ಯ ಯಾನೆ ಕುಲಾಲರ ಸಂಘದ 26 ನೇ ವಾರ್ಷಿಕ ಮಹಾಸಭೆ ಫೆಬ್ರವರಿ 1 ರಂದು ನಗರದ ಪೊಲೀಸ್ ಹೆಡ್ ಕ್ವಾಟರ್ಸ್ ಆವರಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 8 ಕ್ಕೆ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. 9 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ನಂತರ ನಡೆಯುವ ಸಭೆಯಲ್ಲಿ ಖ್ಯಾತ ಪರಿಸರ ಪ್ರೇಮಿ ಡಾ.ಶಿವಾಜಿ ಕಾಗಣೇಕರ, ಧರ್ಮ ಜಾಗರಣ ಸಮನ್ವಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ದಿಲೀಪ್ ವೇರ್ಣೇಕರ, ನಿವೃತ್ತ ಸಿಪಿಐ ಶ್ರೀನಿವಾಸ ಹಾಂಡ, ಮೂಲ್ಯರ ಸಂಘದ ಸ್ಥಾಪಕ ಅಧ್ಯಕ್ಷ ಟಿ.ಕೆ. ಮೂಲ್ಯ, ಸಲಹೆಗಾರ ರೋಹಿತ್ ಕುಲಾಲ್, ಗೌರವ ಅಧ್ಯಕ್ಷ ಸತೀಶ ಮೂಲ್ಯ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ಜಗದೀಶ ಕುಲಾಲ ಅಧ್ಯಕ್ಷತೆ ವಹಿಸುವರು. ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


