ಬೆಳಗಾವಿ : ಹಿರಿಯ ಹಾರ್ಮೋನಿಯಂ ವಾದಕ ಪಂಡಿತ್ ಅಪ್ಪಾಸಾಹೇಬ್ ಜಲಗಾಂವ್ಕರ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಸಂವಾದಿನಿ ಕಲಾ ಮಂಚ್ ಮತ್ತು ಸಾಹಿತ್ಯ ಸಂಗೀತ ಕಲಾ ಮಂಚ್ ಸಹಯೋಗದೊಂದಿಗೆ ನಿಗ್ಡಿಯಲ್ಲಿ “ಸ್ವರಸಮನ್ವಯ್” ಎಂಬ ವಿಶಿಷ್ಟ ಸಂಗೀತ ಕಚೇರಿಯನ್ನು ಆಯೋಜಿಸಲಾಗಿತ್ತು.
ಬೆಳಗಾವಿಯ ಪ್ರಸಿದ್ಧ ಸಂವಾದಿನಿ ವಾದಕ ಡಾ. ಸುಧಾಂಶು ಕುಲಕರ್ಣಿ ಅವರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಹಾರ್ಮೋನಿಯಂ ಸಂಪ್ರದಾಯಕ್ಕೆ ನೀಡಿದ ಗಮನಾರ್ಹ ಕೊಡುಗೆಗಾಗಿ ದಿವಂಗತ ಪಂಡಿತ್ ಅಪ್ಪಾಸಾಹೇಬ್ ಜಲಗಾಂವ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯನ್ನು ಪ್ರಸಿದ್ಧ ಪಿಟೀಲು ವಾದಕ ಪಂಡಿತ್ ಅತುಲ್ ಕುಮಾರ್ ಉಪಾಧ್ಯೆ ಪ್ರದಾನ ಮಾಡಿದರು.
ಸಂವಾದಿನಿ ಕಲಾ ಮಂಚ್ ಅಧ್ಯಕ್ಷ ಸಂತೋಷ ಘಂಟ್ ಅವರು ರೂಪಿಸಿದ ಈ ಕಾರ್ಯಕ್ರಮ ಪ್ರೇಕ್ಷಕರಿಗೆ ಹಾರ್ಮೋನಿಯಂನ ಶ್ರೀಮಂತ ಸಂಪ್ರದಾಯ ಮತ್ತು ವಿವಿಧ ವಾದ್ಯಗಳ ಸುಮಧುರ ಸಂಗಮದ ವಿಶಿಷ್ಟ ಅನುಭವವನ್ನು ನೀಡಿತು.
ನಿಗ್ಡಿ ಪ್ರಾಧಿಕಾರದ ಜಿ.ಡಿ. ಮದ್ಗುಲ್ಕರ್ ರಂಗಮಂದಿರದಲ್ಲಿ ನಡೆಯಿತು.
ಪ್ರಸಿದ್ಧ ಹಾರ್ಮೋನಿಯಂ ವಾದಕ ಡಾ. ಪಂಡಿತ್ ಸುಧಾಂಶು ಕುಲಕರ್ಣಿ ಅವರಿಂದ ವಿಶೇಷ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಸಿದ್ಧ ಗಾಯಕಿ ಡಾ. ರಾಧಿಕಾ ಜೋಶಿ ಪ್ರದರ್ಶಿಸಿದ ಶಾಸ್ತ್ರೀಯ ಗಾಯನಕ್ಕೆ ಪ್ರೇಕ್ಷಕರು ಮಾರುಹೋದರು. ಅವರ ಗಾಯನಕ್ಕೆ ಸುರೇಶ ಫಡ್ತಾರೆ ಹಾರ್ಮೋನಿಯಂನಲ್ಲಿ ಮತ್ತು ಪಾರ್ಥ ತರಬದ್ಕರ್ ತಬಲಾದಲ್ಲಿ ಸಾಥ್ ನೀಡಿದರು.
ಡಾ. ಪಂಡಿತ್ ಸುಧಾಂಶು ಕುಲಕರ್ಣಿ ಅವರಿಂದ ವಿಶೇಷ ಹಾರ್ಮೋನಿಯಂ ಪ್ರದರ್ಶನ ನಡೆಯಿತು. ವಿನಾಯಕ ಗುರವ್ ತಬಲಾದಲ್ಲಿ ಅವರ ವಾದನಕ್ಕೆ ಪರಿಣಾಮಕಾರಿ ಪಕ್ಕವಾದ್ಯ ನೀಡಿದರು.
ಡಾ. ರಾಧಿಕಾ ಜೋಶಿ, ರಾಕೇಶ್ ಶ್ರೀವಾಸ್ತವ, ಡಾ. ಅವಂತಿಕಾ ಸಿನ್ಹಾ, ಸಂತೋಷ ಘಂಟ್, ಡಾ. ಸುಧಾಂಶು ಕುಲಕರ್ಣಿ ಉಪಸ್ಥಿತರಿದ್ದರು.
ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಾನು ಇನ್ನೂ ವಿದ್ಯಾರ್ಥಿಯಾಗಿದ್ದೇನೆ ಮತ್ತು ಅನ್ವೇಷಕನಾಗಿ ಈ ಪ್ರಯಾಣ ಹೀಗೆಯೇ ಮುಂದುವರಿಯುತ್ತದೆ ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ಪಂಡಿತ್ ಸುಧಾಂಶು ಕುಲಕರ್ಣಿ ಹೇಳಿದರು.


