ಅಹಮದಾಬಾದ್ : ಭರೂಚ್ ನಿವಾಸಿಯಾಗಿರುವ ಭೂಮಿ ಚೌಹಾಣ್ ಅವರು ಗುರುವಾರ ಏರ್ ಇಂಡಿಯಾ ವಿಮಾನದ ಮೂಲಕ ಲಂಡನ್ಗೆ ತೆರಳಬೇಕಿತ್ತು. ಕಾರಿನಲ್ಲಿ ವಿಮಾನ ನಿಲ್ದಾಣದತ್ತ ಹೊರಟಿದ್ದರು. ಆದರೆ ಅಹಮದಾಬಾದ್ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಭೂಮಿ ಅವರು ವಿಮಾನ ನಿಲ್ದಾಣಕ್ಕೆ ತಲುಪುವಷ್ಟರಲ್ಲಿ ಹತ್ತು ನಿಮಿಷ ತಡವಾಗಿತ್ತು ಆದರೆ ಅಷ್ಟು ಹೊತ್ತಿಗಾಗಲೇ ವಿಮಾನ ಟೇಕ್ ಆಫ್ ಆಗಿತ್ತು. ಇದರಿಂದ ನಿರಾಸೆಗೊಂಡ ಭೂಮಿ ಅವರಿಗೆ ಕೆಲವೇ ನಿಮಿಷದಲ್ಲಿ ವಿಮಾನ ಅವಘಡ ಸಂಭವಿಸಿರುವ ಸುದ್ದಿ ಸಿಕ್ಕಿದೆ. ಇದನ್ನು ಕೇಳುತ್ತಿದ್ದಂತೆ ಆಘಾತಕ್ಕೆ ಒಳಗಾಗಿದ್ದಾರೆ. ನಿಜಕ್ಕೂ ಇದು ನನ್ನ ಪುನರ್ಜನ್ಮ, ಟ್ರಾಫಿಕ್ ಜಾಮ್ ನಿಂದಾಗಿ ನನ್ನ ಜೀವ ಉಳಿಯಿತು ಎಂದು ಹೇಳಿಕೊಂಡಿದ್ದಾರೆ.
ಟ್ರಾಫಿಕ್ ನಿಂದ ವಿಮಾನ ದುರಂತದಲ್ಲಿ ಬಚಾವ್ ಆದ ಸುದೈವಿ ಮಹಿಳೆ..!
