ಹಾಸನ: ರಾಜ್ಯ, ದೇಶ, ವಿದೇಶಗಳಲ್ಲಿ ಸಂಭವಿಸಬಹುದಾದ ವಿದ್ಯಮಾನಗಳ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮುಂದಿನ 6 ತಿಂಗಳ ಬಗ್ಗೆ ಭವಿಷ್ಯ ನುಡಿದಿರುವ ಕೋಡಿಮಠದ ಶ್ರೀಗಳು, ದೇಶದಲ್ಲಿ ಮೇಘಸ್ಪೋಟವಾಗಲಿದೆ. ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಊಹಿಸಲಾಗದ ನೋವು ಭಾರತಕ್ಕೆ ಕಾಡಲಿದೆ ಎಂದು ಹೇಳಿದ್ದಾರೆ.
ಸಂಸದ ವಿ.ಸೋಮಣ್ಣ ಅವರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮುಂದಿನ 6 ತಿಂಗಳ ಬಗ್ಗೆ ಭವಿಷ್ಯ ನುಡಿದಿದ್ದು, ನಿರೀಕ್ಷೆಗೂ ಮೀರಿ ನೋವು ಭಾರತವನ್ನು ಕಾಡಲಿದೆ. ಅದರ ಜೊತೆಗೆ ರಾಜಕೀಯದಲ್ಲಿ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾವಣೆ ಆಗಲಿದೆ ಎಂದು ಭವಿಷ್ಯ ಹೇಳಿದ್ದಾರೆ.
ಸೋಳೆಯಾ ಮಗನುಟ್ಟಿ, ಆಳುವನು ಮುನಿಪುರವ ಯುದ್ಧವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು ಎಂದು ಗೂಡಾರ್ಥವಾಗಿ ಹೇಳಿದ್ದು, ಇದರ ಅರ್ಥ ಮುಂದಿನ ದಿನಗಳಲ್ಲಿ ಹೇಳುವುದಾಗಿ ಕುತೂಹಲ ಮೂಡಿಸಿದ್ದಾರೆ.
ದೇಶದಲ್ಲಿ ಈ ಬಾರಿ ಮಳೆ ಹೆಚ್ಚಾಗುತ್ತದೆ. ದೇಶದಲ್ಲಿ ಮೇಘ ಸ್ಫೋಟದಿಂದ ನೋವು ದೇಶವನ್ನು ಕಾಡಲಿದೆ. ಕಾರ್ಮೋಡ ಕವಿಯಲಿದೆ. ಜಗತ್ತಿನಲ್ಲಿ ಯುದ್ಧ ನಡೆಯಲಿದೆ. ಸಾಗರದಲ್ಲಿ ಜಲಸ್ಪೋಟ ಸಂಭವಿಸಲಿದೆ ಎಂದು ಹೇಳಿದರು. ಕೊರೊನಾ ಇನ್ನೊಂದು ರೂಪ ತಾಳಲಿದೆ, ಇದರಿಂದ ಸಾವು ನೋವು ಕಡಿಮೆ ಇದ್ದರೂ ಸಮಸ್ಯೆ ಇದ್ದೇ ಇದೆ. ರಾಜ್ಯ ಹಾಗೂ ದೇಶಕ್ಕೆ ಕಂಟಕ ಇದೆ ಎಂದು ಹೇಳಿದ್ದಾರೆ.