ಬೆಳಗಾವಿ: ಹಿಡಕಲ್ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಮರಳು ದಂದೆ ಅಡ್ಡೆಗಳ ಮೇಲೆ ಗುರುವಾರ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಿಕ, ಗೋಕಾಕ ಡಿಎಸ್ಪಿ ರವಿ ನಾಯಿಕ, ಹುಕ್ಕೇರಿ ತಹಶೀಲ್ದಾರ್ ಮಂಜುಳಾ ನಾಯಿಕ ನೇತೃತ್ವದಲ್ಲಿ ದಾಳಿ ನಡೆಯಿತು.
ಚಿಕ್ಕಲದಿನ್ನಿ ಅರಣ್ಯ ಪ್ರದೇಶದಲ್ಲಿ ಜೆಸಿಬಿ ಸಹಾಯದಿಂದ ಮಣ್ಣು ಅಗೆಯುತ್ತಿದ್ದ ಜೆಸಿಬಿ ಮತ್ತು ಟಾಟಾ ಸೊಮೊವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತರ ಪ್ರದೇಶದಲ್ಲಿನ ಮರಳನ್ನು ಜೆಸಿಬಿ ಸಹಾಯದಿಂದ ಸಮತಟ್ಟ ಮಾಡಿಸಲಾಗಿದೆ.
ಈ ಪ್ರದೇಶದಲ್ಲಿ ಮರಳು ದಂದೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ ಕಾರಣ ದಾಳಿ ನಡೆಯಿತು. ಯಮಕನಮರಡಿ ಸಿಪಿಐ ಜಾವೇದ್, ಮುಷಾಪುರಿ, ಯಮಕನಮರಡಿ ಕಂದಾಯ ನಿರೀಕ್ಷಕ ಸಿ.ಕೆ. ಕಲಕಾಂಬಕರ, ಪಾಶ್ಚಾಪುರ, ತಲಾಠಿ ಪ್ರಕಾಶ ನಾಯಿಕ, ಜಗದೀಶ ಕಿತ್ತೂರ, ಡಿ.ಎ. ಕಿಲ್ಲೆದಾರ ಇದ್ದರು.
ಮರಳು ಅಡ್ಡೆಗಳ ಮೇಲೆ ದಾಳಿ: ಜೆಸಿಬಿ ವಶಪಡಿಸಿಕೊಂಡ ಪೊಲೀಸರು
