Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಯಾರು ಹಿತವರು ಲೋಕಸಭೆಗೆ..?

 

ನಮ್ಮದು ಪ್ರಜಾಪ್ರಭುತ್ವವುಳ್ಳ ರಾಷ್ಟ್ರ. ಇಲ್ಲಿ ಪ್ರಜೆಗಳೇ ನಮ್ಮ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವ ನಿರ್ಣಾಯಕರು. ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಅವರು ಹೊಣೆಗಾರಿಕೆಯಿಂದ ಮತದಾನ ಮಾಡಬೇಕು, ಲೋಕಸಭೆಗೆ ಚುನಾವಣೆಗಳು ಬಂದವು. ಎಲ್ಲರಿಗೂ ಸ್ಪರ್ಧಿಸುವ ಅಧಿಕಾರ ಇದೆ. ಆದರೆ ಯಾರನ್ನು ಆಯ್ಕೆ ಮಾಡಬೇಕೆನ್ನುವುದು ಮತದಾರರ ಹಕ್ಕು.

ಬರೀ ಅಗರ್ಭ ಶ್ರೀಮಂತರು, ಕೋಟ್ಯಾಧೀಶರು, ಉದ್ದಿಮೆದಾರರು, ಅಪಾರ ಬಂಡವಾಳ ತೊಡಗಿಸಿ ಮತದಾರರನ್ನು ಖರೀದಿಸುವ ಅರ್ಥಾತ್ ಆಸೆ ಆಮಿಷಗಳನ್ನು ಒಡ್ಡಿ ಕಾಣಿಕೆಗಳನ್ನು ನೀಡಿ ಆಯ್ಕೆಯಾಗುವಂತಾಗಬಾರದು. ಹಣವಿಲ್ಲದ ದುರ್ಬಲರು, ಬುದ್ಧಿಜೀವಿಗಳು, ರಾಷ್ಟ್ರದ ಕುರಿತು ಚಿಂತನೆ ಮಾಡುವವರು, ಧೈರ್ಯಶೀಲರು,ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಬಲ್ಲವರು,ಅರಳು ಹುರಿದಂತೆ ಮಾತನಾಡಬಲ್ಲವರು ಕೂಡ ಆಯ್ಕೆಯಾದಾಗ ಮಾತ್ರ ನಮ್ಮ ಲೋಕಸಭೆಗೆ ಒಂದು ಬೆಲೆ ಪ್ರಾಪ್ತವಾಗುತ್ತದೆ.

ಪ್ರಸಕ್ತದಲ್ಲಿ ಲೋಕಸಭೆಯಲ್ಲಿ ಬಾಯಿ ತೆರೆಯದ ಸಂಸದರು ಇದ್ದಾರೆ. ತಮ್ಮ ಮಾತೃಭಾಷೆ ಬಿಟ್ಟು ಬೇರೆ ಭಾಷೆ ಅರಿಯದವರು ಇದ್ದಾರೆ. ಕೆಲವರು ಬರಿ ಮ್ಯಾಟ್ರಿಕ್ ಪಾಸ್, ಪಿಯು ಫೇಲ್, ಅಪರಾಧಗಳ ಆರೋಪ ಹೊತ್ತವರು ಇದ್ದಾರೆ. ನಮ್ಮ ಕರ್ನಾಟಕದಿಂದ ಆಯ್ಕೆಯಾಗಿ ಹೋದವರಲ್ಲಿ ಎಷ್ಟು ಸಂಸದರು ಸಮರ್ಥವಾಗಿ ಹಿಂದಿ ಮಾತನಾಡಲು ಶಕ್ತರಾಗಿದ್ದಾರೆ ಹೇಳಿ? ಮಾತನಾಡಲಿಕ್ಕೇ ಸಾಧ್ಯವಾಗದಿದ್ದರೆ ಬರಿ ಸರಕಾರಿ ಸೌಲಭ್ಯಗಳಿಗಾಗಿ, ತಮ್ಮ ಹಿತ ರಕ್ಷಣೆಗಾಗಿ ಸಂಸದರಾಗಬೇಕೇ ಹೇಳಿ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ಭಾಷಾ ಜ್ಞಾನವನ್ನು ಪರಿಶೀಲಿಸಲಿ.

ಪ್ರಾ.ಬಿ.ಎಸ್.ಗವಿಮಠ
ಹಿರಿಯ ಸಾಹಿತಿ,ಬೆಳಗಾವಿ
ಬುಧವಾರ ೦೩/೦೧/೨೦೨೪
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ