Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸೃಷ್ಟಿ ಸಮಷ್ಟಿಯ ಆದಿ.... ಚಿಗುರು ಚೈತನ್ಯದ ಮೂಲ ಯುಗಾದಿ

 

ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು ಸೃಷ್ಟಿಕರ್ತನಾದ ಪರಬ್ರಹ್ಮನು ಸಮಸ್ತ ಬ್ರಹ್ಮಾಂಡವನ್ನು ಸೃಷ್ಟಿಸಿ ಪೂರ್ಣಗೊಳಿಸಿದನೆಂದು ಪ್ರತೀತಿ.

ನಾವು ಪ್ರಕೃತಿ ಮಾತೆಯ ಮಡಿಲಿನ ಅತ್ಯಂತ ಬುದ್ಧಿವಂತ ಸೃಷ್ಟಿಯಾದ ಕಾರಣ ; ಈ ದಿನದಂದು ಸುತ್ತಲಿನ ನಿಸರ್ಗವನ್ನು ಸೂಕ್ಷ್ಮ ವಾಗಿ ಅವಲೋಕಿಸಿದಾಗ ಹೊಸ ಚೈತನ್ಯದ ಅನುಭವ ಖಂಡಿತವಾಗಿಯೂ ನಮ್ಮ ಇಂದ್ರಿಯ ಮತ್ತು ಮನಸ್ಸುಗಳಿಗೆ ನಿಲುಕುತ್ತದೆ. ಮಾವು -ಬೇವು ಹೊಂಗೆಯಂಥ ಮರಗಳತ್ತ ಸುಮ್ಮನೇ ಒಮ್ಮೆ ದೃಷ್ಟಿ ಹೊರಳಿದಾಗ ಹೊಸತನದ ನವಿರುಭಾವ ಮನಸ್ಸನ್ನು ಆವರಿಸುತ್ತದೆ. ಬಹುಶಃ ಈ ಹೊಸತನ ಪ್ರತಿ ವರ್ಷವೂ ಪುನರಾವರ್ತನೆಯಾಗಿ ಹಲವಾರು ದಶಕಗಳನ್ನು ಕಂಡ ಸಸ್ಯ ಸಂಕುಲಕ್ಕೆ ನವ ಪಲ್ಲವಗಳ ಉಡುಗೆ ಸಂಭ್ರಮವನ್ನು ತುಂಬದಿದ್ದರೆ
ಜಗತ್ತು ಏಕತಾನತೆಯಿಂದ ಹಳೆಯ ಬೇರು- ಬಿಳಲುಗಳಲ್ಲಿ ಅಂತೆಯೇ ಜಿಡ್ಡುಗಟ್ಟಿದ ಮನಸ್ಸುಗಳ ಜಂಜಡಗಳಲ್ಲಿ ಸೊರಗಿ ನವನಾವೀನ್ಯ ವೆಂಬುದು ಮರೀಚಿಕೆಯಾಗುತ್ತಿತ್ತು.

ಸೃಷ್ಟಿಯಿಂದ ಪ್ರೇರೇಪಿತ ಗೊಂಡ ಹೊಸ ಚಿಗುರು -ಹೊಸತನಗಳಿಗೆ ಮೈ -ಮನಗಳನ್ನು ಅರ್ಪಣೆಗೊಂಡು ಚೇತನ ಉಕ್ಕಿನೆ ಕೊರಡು- ಕೊನರಿಸುವ ;ಕೊರಡಾದ ಭಾವನೆಗಳಲ್ಲಿ ಪ್ರೀತಿ -ಕರುಣೆ ಸಂತೋಷದ ಪರಿಪೂರ್ಣ ಭಾವವನ್ನು ಪುನಃ ಪುನಃ ಸ್ಫುರಿಸುವಂತೆ ನಮ್ಮೆಲ್ಲರ ಜೀವನದಲ್ಲಿ ಹೊಸ ಸಂವತ್ಸರದ ಆಗಮನದೊಂದಿಗೆ ಹೊಸತನಕ್ಕಾಗಿ ತುಡಿಯುವಂತೆ ಮಾಡುವ ಈ ಸೃಷ್ಟಿಗೂ ಮತ್ತು ಸೃಷ್ಟಿಕರ್ತನಿಗೂ ಕೃತಜ್ಞತಾ ಭಾವದಿಂದ ನಮನಗಳನ್ನು ಸಲ್ಲಿಸುವ ಈ ದಿನವನ್ನು ಪರಿಸರದ ಕಾಳಜಿಯೊಂದಿಗೆ ಪ್ರಾರಂಭನೆ ಮುಂಬರುವ ಹೊಸ ಶೋಭಕೃತ್ ಸಂವತ್ಸರನವು ಎಲ್ಲರ ಬಾಳಲ್ಲಿ ಹೊಸತನ ಸಮೃದ್ಧಿ ಸಾಧನೆಗಳಿಗೆ ನಾಂದಿಯಾಗಲಿ ಎಂದು ಹಾರೈಸುತ್ತಾ .
‌‌ಎಲ್ಲರಿಗೂ
ಬೇವು ಬೆಲ್ಲದ ಜೀವನದಲ್ಲಿ ಬೇವಿನಯುಗ ಷಣಾರ್ಥವಾಗಿ ಬೆಲ್ಲದ ಪಾಲು ಸಾರಸಗಟಾಗಿ ದಕ್ಕಲೆಂದು ಶುಭ ಕೋರುತ್ತಾ ನವಯುಗವು ಸರ್ವರ ಬಾಳಲ್ಲಿ ನವ ಚೈತನ್ಯ ತುಂಬಲಿ.
ಯುಗಾದಿಯ ಸಂಭ್ರಮದ ಶುಭಾಷಯಗಳೊತುಂಬಲಿ

ಡಾ. ‌ಶ್ರೀದೇವಿ ಆನಂದ ಪೂಜಾರಿ
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ