ಬೆಳಗಾವಿ : ಬೆಳಗಾವಿ ಮಹಾಂತೇಶನಗರ ಕೆಎಂಎಫ್ ಡೈರಿ ಬಳಿ ಗುಂಡಿನ ದಾಳಿ ನಡೆದಿದೆ.
ಟಿಳಕವಾಡಿ ದ್ವಾರಕಾ ನಗರ ಐದನೇ ಕ್ರಾಸ್ ನಿವಾಸಿ ಪ್ರಣೀತ್ ಕುಮಾರ್( 31) ಎಂಬ ಯುವಕನ ಮೇಲೆ ಈ ದಾಳಿ ನಡೆದಿದೆ. ಇದರಿಂದ ಪ್ರಣಿತ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ವೈಯಕ್ತಿಕ ದ್ವೇಷ ಕಾರಣಕ್ಕೆ ಈ ದಾಳಿ ನಡೆದಿರುವ ಬಗ್ಗೆ ಅನುಮಾನ ಇದೆ.
ದೇಹಕ್ಕೆ ತಾಗಿದ ಗುಂಡುಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಬಂದ ಗಾಯಾಳು ಈಗ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
[video width="1280" height="720" mp4="https://janajeevala.com/wp-content/uploads/2024/11/WhatsApp-Video-2024-11-27-at-23.13.36_f012fd34.mp4"][/video]