Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಎಂ.ಕೆ. ನಂಬಿಯಾರ್ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಸಿಂಬಯೋಸಿಸ್ ಕಾನೂನು ಮಹಾವಿದ್ಯಾಲಯ ವಿಜೇತ

ಬೆಳಗಾವಿ : ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ, ಬೆಳಗಾವಿಯು ಮಾರ್ಚ್ 7 ರಿಂದ 9 ರವರೆಗೆ 15ನೇ ಎಮ್.ಕೆ. ನಂಬಿಯಾರ್ ಸ್ಮಾರಕ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ( ಮೂಟ್ ಕೋರ್ಟ್) ಸ್ಪರ್ಧೆಯನ್ನು ಆಯೋಜಿಸಿತ್ತು .

ಸಮಾರೋಪ ಸಮಾರಂಭಕ್ಕೆ ನ್ಯಾಯಮೂರ್ತಿ ಜಿ. ಬಸವರಾಜ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಕಾನೂನು ಶಿಕ್ಷಣದಲ್ಲಿ ಮೂಟ್ ಕೋರ್ಟ್ ಬಹಳ ಅವಶ್ಯಕವಾಗಿದ್ದು, ಇದು ವಿದ್ಯಾರ್ಥಿಗಳಿಗೆ ಪ್ರಕರಣಗಳ ಕುರಿತು ಆಲೋಚನೆ, ವಿಶ್ಲೇಷಣೆ, ಸಂಶೋಧನೆ ಮಾಡಲು ಸಹಾಯ ಮಾಡುತ್ತದೆ ಮತ್ತು ವೃತ್ತಿಪರ ವಕೀಲರಂತೆ ವಾದಿಸಲು ಅವಕಾಶ ಒದಗಿಸುತ್ತದೆ ಎಂದು ಅವರು ಹೇಳಿದರು.

ಕೆ ಎಲ್ ಎಸ್ ಜಿ.ಐ.ಟಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವ್ಕರ್ ಮಾತನಾಡಿ, ಈ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮಹತ್ವವನ್ನು ವಿವರಿಸಿದರು.

ಸಿಂಬಯೋಸಿಸ್ ಕಾನೂನು ಮಹಾವಿದ್ಯಾಲಯ, ನೋಯ್ಡಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರೂ .50,000 ನಗದು ಹಾಗೂ ಟ್ರೋಫಿ ಗೆದ್ದಿತು. ತಮಿಳುನಾಡಿನ ಸೇಲಂನ ಸೆಂಟ್ರಲ್ ಕಾನೂನು ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆದು ರೂ. 30,000 ನಗದು ಹಾಗೂ ಟ್ರೋಫಿ ಪಡೆದರು.

ಸರ್ವ ಶ್ರೇಷ್ಟ ಪುರುಷ ವಾದಿ ಪ್ರಶಸ್ತಿ ಬೆಂಗಳೂರಿನ ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಅನ್ಮೋಲ್ ಶ್ರಾಫ್ ಅವರಿಗೆ ಲಭಿಸಿದ್ದು, ಅವರು ರೂ. 15,000 ನಗದು ಹಾಗೂ ಟ್ರೋಫಿ ಪಡೆದರು.
ಸರ್ವ ಶ್ರೇಷ್ಠ ಪುರುಷ ವಾದಿ, ಮಹಿಳಾ ವಾದಿ ಪ್ರಶಸ್ತಿ ತಮಿಳುನಾಡಿನ ಸೇಲಂನ ಸೆಂಟ್ರಲ್ ಕಾನೂನು ಮಹಾವಿದ್ಯಾಲಯದ ಗೋಪಿಕಾ ಪಿ.ಆರ್. ಅವರಿಗೆ ದೊರಕಿದ್ದು, ರೂ. 15,000 ನಗದು ಹಾಗೂ ಟ್ರೋಫಿ ಗೆದ್ದರು.

ಎ ಎನ್ ಪೋದ್ದಾರ ಅತ್ಯುತ್ತಮ ವಾದಿ ಪ್ರಶಸ್ತಿಯ ಮೊತ್ತ ರೂ. 6,050 ನಗದು ಅನ್ನು ಅನ್ಮೋಲ್ ಶ್ರಾಫ್ ಹಾಗೂ ಗೋಪಿಕಾ ಪಿ.ಆರ್. ಇಬ್ಬರೂ ಹಂಚಿಕೊಂಡರು.

ಅತ್ಯುತ್ತಮ ಸಂಶೋಧಕ ಪ್ರಶಸ್ತಿ ತಮಿಳುನಾಡಿನ ಶಾಸ್ತ್ರ ಡೀಮ್ಡ್ ಯುನಿವರ್ಸಿಟಿಯ ಮೀರಾ ಶ್ರೀಕಾಂತ್ ಅವರಿಗೆ ನೀಡಲಾಯಿತು. ಅವರು ರೂ. 10,000 ನಗದು ಹಾಗೂ ಟ್ರೋಫಿ ಪಡೆದರು.

ಪ್ರಾಧ್ಯಾಪಕ ಡಾ. ಪ್ರಸನ್ನಕುಮಾರ್ , ಸ್ವಾಗತಿಸಿದರು. ಮೂಟ್ ಕೋರ್ಟ್ ವಿಭಾಗದ ಅಧ್ಯಕ್ಷೆ ಪ್ರೊ. ಅಶ್ವಿನಿ ಪರಬ್ ಪ್ರಶಸ್ತಿಗಳನ್ನು ಘೋಷಿಸಿದರು. ಕಾರ್ಯಕ್ರಮದ ಕಾರ್ಯದರ್ಶಿ ಮೃಣಾಲ್ ಕಾಮತ್ ವಂದಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್.ಎಚ್. ಹವಾಲ್ದಾರ್, ಆಡಳಿತ ಮಂಡಳಿ ಸದಸ್ಯರು, ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ