Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಭಾರತ ಪ್ರಜಾಪ್ರಭುತ್ವದ ಜನನಿ : ಸುಧಾಂಶು ತ್ರಿವೇದಿ

 

ಬೆಳಗಾವಿ:
ಪ್ರಪಂಚದಲ್ಲಿ ಪ್ರಜಾಪ್ರಭುತ್ವದ ಜನನ12 ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣ ಅನುಭವ ಮಂಟಪದೊಂದಿಗೆ ಜಾರಿಗೆ ತಂದಿರುವದು ಇತಿಹಾಸ. ಅದು ಇಂದು ಸಂಕಷ್ಟದಲ್ಲಿ ಇದೆ ಎಂದು ತಿಳಿಸುವ ಬುದ್ದಿಭ್ರಮಣೆ ಹೊಂದಿದವರು ಇದನ್ನು ತಿಳಿದುಕೊಳ್ಳಬೇಕು ಎಂದು ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರು ಬಸವಣ್ಣನವರನ್ನು ನೆನಪಿಸಿದರು.
‌‌
ಮಹಾನಗರದ ಉದ್ಯಮಭಾಗದ ಪೌಲ್ಟ್ರಿಯಲ್ಲಿ ನಡೆದ ಪ್ರಬುದ್ದರ ಗೋಷ್ಠಿಯಲ್ಲಿ ಮಾತನಾಡಿ, ಭಾರತದ ಜ್ಯೋತಿಶ್ಯಾಸ್ತ್ರ ಸಾವಿರಾರು ವರ್ಷಗಳ ಮುಂದಿನ ಭವಿಷ್ಯ ಹೇಳುವ ಸಂಕಲ್ಪ ಹೊಂದಿದ ಭಾರತದ ಸಂಸ್ಕೃತಿಯ ಬಗ್ಗೆ ಮಾತನಾಡುವವರು ಮೊದಲು ಈ ಭೂಮಿಯ ಸಂಸ್ಕೃತಿ ತಿಳಿದುಕೊಳ್ಳಬೇಕು.
ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇವಸ್ಥಾನಗಳ ಮೂರ್ತಿಯ ಮೇಲೆ ನಿರ್ದಿಷ್ಟ ದಿನ ಸೂರ್ಯನ ಬೆಳಕು ಸ್ಪರ್ಶಮಾಡುವ ಇಂಜನಿಯರಿಂಗ್ ವ್ಯವಸ್ಥೆ ಹೇಗಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಬರುವ ಮುಂದಿನ 25 ವರ್ಷಗಳಲ್ಲಿ ಐದು ಗುರಿಗಳ ಮೂಲಕ ಮುನ್ನುಗ್ಗೊಣ, ಭಾರತ ಪ್ರಪಂಚದ ಗುರುವಿನ ಸ್ಥಾನಕ್ಕೆ ಏರಲೆಬೇಕು. ದೇಶವಾಸಿಗಳ ತಲೆಯಲ್ಲಿರುವ ಗುಲಾಮಗಿರಿ ವ್ಯವಸ್ಥೆ ಹೋಗಲಾಡಿಸಬೇಕು. ಎಲ್ಲರೂ ಕಾಯಕಮಯವಾಗಬೇಕು. ಎಲ್ಲರೂ ಸೇರಿ ದೇಶದ ಅಭಿವೃದ್ಧಿಗೆ ಕೈ ಜೋಡಿಸುವದು ಎಂದರು.

ಪ್ರಕೃತಿಯಲ್ಲಿ ಬರುವ ಎಲ್ಲ ಜೀವಿಗಳಿಗೆ ತನ್ನ ದುಡಿಮೆಯ ಭಾಗದಲ್ಲಿ ನಿಡುತ್ತಾ ಉದಾತ್ತ ಜೀವನ ಸಾಗಿಸುವ ಕೃಷಿಕನ ಜೀವನ ನಮಗೆಲ್ಲ ಆದರ್ಶವಾಗಿದ್ದು ಆ ನಿಟ್ಟಿನಲ್ಲಿ ಮೋದಿಜಿಯವರು ತಮ್ಮ ಅಧಿಕಾರವಧಿಯಲ್ಲಿ ಜನಧನ್ ಖಾತೆ, ಬೆಟಿ ಪಡಾವೋ ಬೆಟಿ ಬಚಾವೋ, ಸ್ವಚ್ಛ ಭಾರತ ಕಾರ್ಯಕ್ರಮಗಳು ಯಾವ ರಾಜಕಾರಣದ ಉಪಯೋಗಕ್ಕಾಗಿ ಅಲ್ಲ ಎನ್ನುವದನ್ನು ಅರ್ಥೈಸಿಕೊಳ್ಳಬೇಕು.
ದೇಶದಲ್ಲಿ ಒಂದು ರುಪಾಯಿ ಭ್ರಷ್ಟಾಚಾರ ನಡೆಯದಂತೆ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ತಂದು ರಾಜೀವ ಗಾಂಧಿ ಅವರ ಕಾಲದ 85 ಪ್ರತಿಶತ ಭ್ರಷ್ಟಾಚಾರ ತಡೆಗಟ್ಟಲಾಗಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ಟಾಂಗ್ ಕೊಟ್ಟರು.

ಭಾರತ ಮೋದಿಯವರ ಕಾಲಘಟ್ಟದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಚೀನಾ, ಜಪಾನ್‌ ‌ದೇಶಗಳನ್ನು ಹಿಂದಕ್ಕೆ ಹಾಕಿದರೆ ಮೊಬೈಲ್ ಫೋನ್ ತಯಾರಿಕೆಯಲ್ಲಿ ದ್ವಿತೀಯ ಸ್ಥಾನದಲ್ಲಿ ಇದ್ದೆವೆ. ಜನತೆಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಭಿವೃದ್ಧಿ ನೀಡುವ ಮೂಲಕ ವಿಕಾಸಕ್ಕೆ ಮೊದಲನೆ ಅದ್ಯತೆ ನಿಡಲಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆ ಹರಿದು ಬರುತಿದ್ದು ದೇಶದಲ್ಲಿ ಕರ್ನಾಟಕ ಮೊದಲನೆ ಸ್ಥಾನದಲ್ಲಿದೆ.
ಕಾಶ್ಮೀರದಲ್ಲಿ 370 ರದ್ದುಮಾಡಿರುವದು, ಮಸೂದ ಅಜರ್ ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದ್ದು, ಗಡಿ ರೇಖೆಯಲ್ಲಿ ಚೀನಾ ದೇಶಕ್ಕೆ ಸೆಡ್ಡುಹೊಡಿದಿದ್ದು ಚೀನಾ ದೇಶಕ್ಕೆ ಭಾರತ ಸೆಡ್ಡು ಹೊಡೆದಿದೆ. ಭಾರತೀಯರಾಗಿ ನಾವೆಲ್ಲ ಮುಂದುವರೆಯೋಣ ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ‌ ಧನ ಮತ್ತು ಜ್ಞಾನದ ಪ್ರತಿಕವಾದ ಕಮಲಕ್ಕೆ‌ ತಮ್ಮ‌ ಮತ‌ ನಿಡುವ ಮೂಲಕ ಭಾರತವನ್ನು ಜಗದ್ಗುರುವನ್ನಾಗಿಸುವ ಸಂಕಲ್ಪ‌ಮಾಡೋಣ ಎಂದರು.
ರಾಜ್ಯ ವಕ್ತಾರ ಎಮ್.ಬಿ.ಝಿರಲಿ ಸ್ವಾಗತಿಸಿ ನಿರೂಪಿಸಿದರು. ಶಾಸಕ ಅಭಯ ಪಾಟೀಲ‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮೆಂದ್ರ ಪೋರವಾಲ್,ರಾಮ ಭಂಡಾರಿ ಇದ್ದರು. ಕಾರ್ಯಕ್ರಮದಲ್ಲಿ ನೂರಾರು ಉದ್ಯಮಿಗಳು, ಉಪನ್ಯಾಸಕರು, ಶಿಕ್ಷಣ ತಜ್ಞರು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ