Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಪ್ನ ಬುಕ್ ಹೌಸ್ : ವಿಶಿಷ್ಟ ಕಾರ್ಯಕ್ರಮ -ರಿಯಾಯಿತಿ ದರದಲ್ಲಿ ಪುಸ್ತಕ

ಸಪ್ನ ಬೆಳಗಾವಿ ಶಾಖೆಯಲ್ಲಿ ಇದೇ ಭಾನುವಾರ, ದಿನಾಂಕ 6 ರಂದು ಹೆಸರಾಂತ ಸಾಹಿತಿಗಳಾದ ಹಂ.ಪ. ನಾಗರಾಜಯ್ಯ ಹಾಗೂ ಜಿ. ಮಲ್ಲೇಪುರಂ ವೆಂಕಟೇಶ ನಮ್ಮೊಂದಿಗಿರುತ್ತಾರೆ. ಕಾರ್ಯಕ್ರಮ ಸಂಜೆ 3.00 ಘಂಟೆಯಿಂದ 5.00
ವರೆಗಿರುತ್ತದೆ. ನಂತರದ ಭಾನುವಾರ ದಿನಾಂಕ 13 ರಂದು ಬೆಳಿಗ್ಗೆ 11 ಘಂಟೆಗೆ ಎ.ಆರ್ .ಮಣಿಕಾಂತ್ ರವರು ನಮ್ಮೊಂದಿಗಿರುತ್ತಾರೆ. ಇನ್ನಿತರ ಕನ್ನಡ ಕಾರ್ಯಕ್ರಮಗಳನ್ನು ಸಪ್ನ ಬುಕ್ ಹೌಸ್, ಬೆಳಗಾವಿ ಶಾಖೆಯ ವತಿಯಿಂದ ಆಯೋಜಿಸಲಿದ್ದೇವೆ.


 

ಬೆಳಗಾವಿ :
ಸಪ್ನ ಬುಕ್ ಹೌಸ್‌ ಈ ಸಲವೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಓದುಗರಿಗೆ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಭಾರತದ ಅತೀ ದೊಡ್ಡ ಪುಸ್ತಕ ಮಳಿಗೆ ಎಂದೇ ಹೆಸರಾಗಿರುವ ಸಪ್ನ ಬುಕ್ ಹೌಸ್, ಕನ್ನಡದಲ್ಲಿ 7000 ಕ್ಕೂ ಹೆಚ್ಚು ಪುಸ್ತಕಗಳನ್ನು ಪುಕಟಿಸಿದೆ. ಪ್ರತಿವರ್ಷವೂ ರಾಜ್ಯೋತ್ಸವಕ್ಕೆ ಕನ್ನಡದ ಪ್ರಮುಖ ಬರಹಗಾರರ ಪುಸ್ತಕಗಳ ಜೊತೆಗೆ ಹೊಸ ಬರಹಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಈ ವರ್ಷ ವಿಶೇಷವಾಗಿ 67 ಪುಸ್ತಕಗಳು ಹೊರಬರಲಿವೆ.

ಈ ಬಗ್ಗೆ ಬೆಳಗಾವಿ ಸಪ್ನ ವ್ಯವಸ್ಥಾಪಕ ರಘು ಎಂ.ವಿ. ಅವರು ಗುರುವಾರ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ಇಡೀ ತಿಂಗಳು ಕನ್ನಡ ಪುಸ್ತಕಗಳಿಗೆ ಶೇ. 10 ರಿಂದ 25ರ ತನಕ ವಿಶೇಷ ರಿಯಾಯತಿ ಇರುತ್ತದೆ. ಆಯ್ದ ಕನ್ನಡ ಪುಸ್ತಕಗಳಿಗೆ ಶೇ. 50 ರಷ್ಟು ರಿಯಾಯತಿಯಿರುತ್ತದೆ. ಈ ಅವಧಿಯಲ್ಲಿ ರೂ. 300 ಮೌಲ್ಯದ ಪುಸ್ತಕಗಳನ್ನು ಕೊಂಡವರಿಗೆ ವಿಶೇಷ ರಿಯಾಯತಿ ಕಾರ್ಡ್ ಕೊಡಲಾಗುತ್ತದೆ. ಈ ಕಾರ್ಡನ್ನು ಹೊಂದಿದವರು ಇಡೀ ವರ್ಷ ಶೇಕಡ 10 ರಿಯಾಯತಿಯಲ್ಲಿ ಕನ್ನಡ ಪುಸ್ತಕಗಳನ್ನು ಕೊಳ್ಳಬಹುದು ಎಂದು ಅವರು ತಿಳಿಸಿದರು.

ಸಪ್ನಾ 1957 ರಿಂದ ಭಾರತದ ಅತಿದೊಡ್ಡ ಬುಕ್ ಮಾಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಳಗಾವಿ ಕಲಾ ಉತ್ಸವ 2022 ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರಲ್ಲಿ ಭಾಗವಹಿಸಲು ಯಾವುದೇ ನಿರ್ಬಂಧ ಇಲ್ಲ. ಕಲಾ ಉತ್ಸವವು ಎಲ್ಲಾ ವಯೋಮಾನದವರಿಗೆ ಮುಕ್ತವಾಗಿದೆ. ಎಲ್ಲಾ ಕಲಾ ಸಲ್ಲಿಕೆಗಳನ್ನು ಎರಡು ವಿಭಾಗಗಳಲ್ಲಿ ವರ್ಗೀಕರಿಸಲಾಗುತ್ತದೆ. ವರ್ಗ 1 ವಿದ್ಯಾರ್ಥಿ ವರ್ಗ 10 ವರ್ಷಕ್ಕಿಂತ ಕಡಿಮೆ ಮತ್ತು ವರ್ಗ 2- 16 ಮೇಲ್ಪಟ್ಟ ವಯಸ್ಕರು ಭಾಗವಹಿಸಬಹುದು.

ವಯಸ್ಸಿನ ಮಿತಿ ಇಲ್ಲ.
ಉಚಿತ ನೋಂದಣಿ ಮತ್ತು ಭಾಗವಹಿಸಲು ಯಾವುದೇ ಶುಲ್ಕವಿಲ್ಲ.
ನೋಂದಣಿ ಮತ್ತು ಉಚಿತ ಭಾಗವಹಿಸುವಿಕೆ ಪ್ರಮಾಣ ಪತ್ರ ನೀಡಲಾಗುತ್ತದೆ.
ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿ
ಬೆಳಗಾವಿಯಲ್ಲಿ ನಡೆಯುವ ಕಲಾ ಉತ್ಸವದ ವಿಷಯವು ಭೂದೃಶ್ಯಗಳು, ಪರಂಪರೆ ಕೇಂದ್ರಗಳು, ಜನಪ್ರಿಯ ವ್ಯಕ್ತಿಗಳು ಇತ್ಯಾದಿ. ಕಲಾಕೃತಿಗಳು ಬೆಳಗಾವಿಗೆ ಸಂಬಂಧಿಸಿದ ಯಾವುದೇ ರೂಪದಲ್ಲಿರಬಹುದು. (ಉದಾಹರಣೆಗೆ ಪೆನೆಲ್ ವರ್ಕ್, ಪೋಸ್ಟರ್ ಬಣ್ಣ, ವಾಟರ್ ಕಲರ್ ಓರ್ಟ್, ಇದ್ದಿಲು ಕಲೆ, ಇತ್ಯಾದಿ)

ಅತ್ಯಾಕರ್ಷಕ ಪ್ರಶಸ್ತಿಗಳು ಮತ್ತು ಬಹುಮಾನಗಳು, ಅತ್ಯುತ್ತಮ ಕಲಾಕೃತಿಗಳನ್ನು ಎ ಆರ್ ಟಿ ನಲ್ಲಿ ಪ್ರದರ್ಶಿಸಲಾಗುವುದು.

ಲಭ್ಯವಿರುವ ಫಾರ್ಮ್ ಅನ್ನು ಸಂಗ್ರಹಿಸಿ ಮತ್ತು ಭರ್ತಿ ಮಾಡುವ ಮೂಲಕ ಕಲಾ ಉತ್ಸವದಲ್ಲಿ ನೋಂದಾಯಿಸಬಹುದು.

ನೋಂದಾಯಿಸಲು ಮತ್ತು ನೋಂದಾಯಿಸಲು ಕೊನೆಯ ದಿನಾಂಕ: ನವೆಂಬರ್ 30, 2022.

ಕಲಾಕೃತಿಯನ್ನು ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 10 (0831 4255499)ಅನ್ನು ಸಂಪರ್ಕಿಸಿ ಅಥವಾ
www.belagaviartfestival.com belagaviartfestival
ಇಲ್ಲಿಗೆ ಸಂಪರ್ಕಿಸಬಹುದು.

ನೋಂದಣಿ ಕಿಟ್ ಮತ್ತು ಫಾರ್ಮ್‌ಗಳನ್ನು ನೋಂದಾಯಿಸಲು ಮತ್ತು ಸಂಗ್ರಹಿಸಲು ವಿಳಾಸ:
ಸಪ್ನ ಬುಕ್ ಹೌಸ್, ಶ್ರೀ ಕೃಷ್ಣದೇವರಾಯ ವೃತ್ತ (ಕೊಲ್ಹಾಪುರ ವೃತ್ತ), ಹೋಟೆಲ್ ರಾಮದೇವ್ ಹತ್ತಿರ, ಬೆಳಗಾವಿ
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ