Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಾಗವಾಡ ಗ್ರೇಡ್-2 ತಹಶೀಲ್ದಾರ ಆಗಿ ರಾಕೇಶ್ ಬುವಾ ನೇಮಕ..!


  • ತಹಶಿಲ್ದಾರ ಬಡ್ತಿ ಪಡೆದ ಕಾಕತಿ ನಾಡಕಛೇರಿ ದಶಕದ DT..!


ಬೆಳಗಾವಿ : ತಾಲೂಕಿನ ಕಾಕತಿ ನಾಡ ಕಛೇರಿಯಲ್ಲಿ 10 ವರ್ಷಗಳ ಕಾಲ ಉಪತಹಶೀಲ್ದಾರರಾಗಿ ಪರಿಪೂರ್ಣವಾಗಿ ಕಾರ್ಯನಿರ್ವಹಿಸಿ ಜನಮನ ಗೆದ್ದು, ಇತ್ತೀಚಿಗೆ 6 ತಿಂಗಳ ಹಿಂದಷ್ಟೇ ಯಮಕನಮರಡಿ ನಾಡ ಕಛೇರಿ ಉಪತಹಶೀಲ್ದಾರ ಆಗಿ ವರ್ಗಾವಣೆಗೊಂಡಿದ್ದ ಉಪ ತಹಶೀಲ್ದಾರ ರಾಕೇಶ ಬುವಾ ಅವರು ತಹಶಿಲ್ದಾರ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಇದರ ಬೆನ್ನಲೆ ಇವರನ್ನು ಕಾಗವಾಡ ತಾಲೂಕಿನ ಗ್ರೇಡ್-2 ತಹಶೀಲ್ದಾರ ಸ್ಥಾನಕ್ಕೆ ನಿನ್ನೆ (ಶುಕ್ರವಾರ) ಸರಕಾರ ನಿಯುಕ್ತಿಗೊಳಿಸಿ ಆದೇಶ ಹೋರಡಿಸಿದೆ.

ಇವರೊಂದಿಗೆ ಒಟ್ಟು 31 ಜನ ಅಧಿಕಾರಿಗಳು ಬಡ್ತಿ ಪಡೆದಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ತಹಶಿಲ್ದಾರ ಮಟ್ಟದ ಹುದ್ದೆ ಪಡೆಯುವಲ್ಲಿ ಇವರೊಬ್ಬರೆ ಯಶಸ್ವಿಯಾಗಿದ್ದಾರೆ.

ನಿಷ್ಠಾವಂತ ಅಧಿಕಾರಿಯಾಗಿ ದಶಕದವರೆಗೆ ಕಾಕತಿ ನಾಡಕಛೇರಿ ಸೇವೆ..!

63 ಹಳ್ಳಿಗಳನ್ನು ಒಳಗೊಂಡಿರುವ ಕಾಕತಿ ನಾಡಕಛೇರಿಗೆ ೧೧ ವರ್ಷಗಳ ಹಿಂದೆ ಯುವ ಉಪತಹಶೀಲ್ದಾರ ಆಗಿ ಅಧಿಕಾರ ಸ್ವೀಕರಿಸಿದ ಬುವಾ ಬಹುತೇಕ ಗುಡ್ಡಗಾಡು ಹಳ್ಳಿ ಹಾಗೂ ಪ್ರದೇಶಗಳಲ್ಲಿನ ಸಾವಿರಾರು ಬಡ ಜನರಿಗೆ ಆದಾಯ, ಜಾತಿ, ಪಿಂಚಣಿ, ವಾರಸಾ ಸೇರಿದಂತೆ ಅವಶ್ಯಕತೆ ಇರುವ ಎಲ್ಲ ಪ್ರಮಾಣ ಪತ್ರಗಳನ್ನು ಮನೆ ಮನೆ ತಲುಪಿಸುವ ಮಹತ್ವದ ಕಾರ್ಯವನ್ನು ರಾಕೇಶ್ ಬುವಾ ಮಾಡಿದ್ದು ಇಂದಿಗೂ ಇಲ್ಲಿನ ಜನರ ಮನ ಮಾನಸದಲ್ಲಿ ಅಚ್ಚಳಿಸದಂತೆ ಉಳಿದಿದೆ.

ಉಪತಹಶೀಲ್ದಾರ ಹುದ್ದೆಯಿಂದ ತಹಶಿಲ್ದಾರ ಹುದ್ದೆಗೆ ಬಡ್ತಿ ಪಡೆದು ಕಾಗವಾಡ ಗ್ರೇಡ್-2 ತಹಶಿಲ್ದಾರ ಆಗಿ ನಿಯುಕ್ತಿಗೊಂಡಿರುವ ಇವರನ್ನು ಬೆಳಗಾವಿ ತಹಶಿಲ್ದಾರ ಕಛೇರಿ, ಕಾಕತಿ ಹಾಗೂ ಯವಕನಮರಡಿ ನಾಡ ಕಛೇರಿ ಸಿಬ್ಬಂದಿಗಳು ಹೃದಯದಿಂದ ಅಭಿನಂದಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ