ಬೆಳಗಾವಿ: ಅಥಣಿಯ ಬಳ್ಳಿಗೇರಿ ಗ್ರಾಮ ಹದ್ದಿಯ ಪ್ರಶಾಂತ ಹೊಟೇಲ್ & ಲಾಡ್ಜ್ ನಲ್ಲಿ ಅದರ ಮಾಲಿಕ, ಬಳ್ಳಿಗೇರಿ ಗ್ರಾಮದ ಸರದಾರ ಭಗವಂತ ಕಾಂಬಳೆ (43) ಮತ್ತು ಚಡಚಣದ ಹಾಲಿ ಅಥಣಿ ನಿವಾಸಿ ಪ್ರವೀಣ ಬಸವರಾಜ ಮಲ್ಲಾರಿ (35) ಅವರು ಪ್ರಶಾಂತ ಹೊಟೇಲ್ & ಲಾಡ್ಜ್ ನಲ್ಲಿ ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಕೆಎಸ್ಪಿ ಆಪ್ದಲ್ಲಿ ಬಾತ್ಮೀ ಬಂದ ಮೇರೆಗೆ ಎಸ್ಪಿ ಕೆ.ರಾಮರಾಜನ್ ಮತ್ತು ಹೆಚ್ಚುವರಿ ಎಸ್ಪಿ ಆರ್. ಬಿ. ಬಸರಗಿ ಮತ್ತು ಡಿಎಸ್ಪಿ ಪ್ರಶಾಂತ ಜಿ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಅಥಣಿ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಡಿ ಹಳ್ಳೂರ ನೇತೃತ್ವದಲ್ಲಿ ಪೊಲೀಸರು ರೇಡ್ ಮಾಡಿ ಲಾಡ್ಜ್ ನಲ್ಲಿ ಇದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಲಾಡ್ಡ್ ಮಾಲಿಕ ಸರದಾರ ಭಗವಂತ ಕಾಂಬಳೆ ಸಾ|| ಬಳ್ಳಿಗೇರಿ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರವೀಣ ಬಸವರಾಜ ಮಲ್ಲಾರಿ ಸಾ॥ ಚಡಚಣ ಹಾಲಿ ಅಥಣಿ ಇವರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ.